ಲಕ್ನೊ: ಕಟ್ಟಡದಲ್ಲಿ ಅವಿತಿರುವ ಉಗ್ರ 'ಐಸಿಸ್' ಸದಸ್ಯ – ಗುಪ್ತಚರ ದಳ
ಲಕ್ನೋದ ಠಾಕೂರ್ ಗಂಜ್ ಪ್ರದೇಶದ ಕಟ್ಟಡವೊಂದರಲ್ಲಿ ಶಂಕಿತ ಉಗ್ರನೊಬ್ಬ ಅವಿತು ಕುಳಿತಿದ್ದಾನೆ. ಕಟ್ಟಡದ ಸುತ್ತ ಭಯೋತ್ಪಾದಕ ನಿಗ್ರಹ ದಳದ ಪೊಲೀಸರು ಸುತ್ತುವರಿದಿದ್ದು ಉಗ್ರ ಒಳಗಿನಿಂದಲೇ ಆಗಾಗ ಗುಂಡಿನ ದಾಳಿ ನಡೆಸುತ್ತಿದ್ದಾನೆ.
ಲಕ್ನೊ, ಮಾರ್ಚ್ 7: ಲಕ್ನೋದ ಠಾಕೂರ್ ಗಂಜ್ ಪ್ರದೇಶದ ಕಟ್ಟಡವೊಂದರಲ್ಲಿ ಶಂಕಿತ ಉಗ್ರನೊಬ್ಬ ಅವಿತು ಕುಳಿತಿದ್ದಾನೆ. ಕಟ್ಟಡದ ಸುತ್ತ ಭಯೋತ್ಪಾದಕ ನಿಗ್ರಹ ದಳದ ಕಮಾಂಡೋಗಳು ಸುತ್ತುವರಿದಿದ್ದು ಉಗ್ರ ಒಳಗಿನಿಂದಲೇ ಆಗಾಗ ಗುಂಡಿನ ದಾಳಿ ನಡೆಸುತ್ತಿದ್ದಾನೆ.
ಶಂಕಿತ ಉಗ್ರನನ್ನು ಸೈಫುಲ್ ಎಂದು ಗುರುತಿಸಲಾಗಿದೆ. ಮಧ್ಯ ಪ್ರದೇಶದ ಇಂದು ಬೆಳಿಗ್ಗೆ ನಡೆದ ರೈಲ್ವೇ ಬಾಂಬ್ ಸ್ಪೋಟದಲ್ಲಿ ಈತನ ಕೈವಾಡ ಇದೆ ಎನ್ನಲಾಗಿದೆ. ಈತ ಕುಖ್ಯಾತ ಭಯೋತ್ಪಾದಕ ಸಂಘಟನೆ ಐಸಿಸ್ ಸದಸ್ಯ ಎಂದು ಗುಪ್ತಚರ ದಳದ ಅಧಿಕಾರಿಗಳು ಹೇಳಿದ್ದಾರೆ.
ಸೈಫುಲ್ಲಾ ಬಳಿಯಲ್ಲಿ ಎಕೆ-47 ಬಂದೂಕಿದೆ ಎಂದು ಮೂಲಗಳು ಹೇಳಿವೆ. ಇಲ್ಲೀವರೆಗೆ 20 ಸುತ್ತು ಗುಂಡಿನ ಚಕಮಕಿ ನಡೆದಿದೆ. ಅಧಿಕಾರಿಗಳ ಪ್ರಕಾರ ಸೈಫುಲ್ಲಾ ಭೋಪಾಲ್ ಉಜ್ಜೈನಿ ಬಾಂಬ್ ಸ್ಪೋಟದ ನಂತರ ದಕ್ಷಿಣ ಭಾರತದ ಇನ್ನೊಬ್ಬ ಶಂಕಿತ ಭಯೋತ್ಪಾದಕನಿಗೆ ಕರೆ ಮಾಡಿದ್ದಾನೆ. ಈ ಕರೆಯ ಆಧಾರದಲ್ಲಿ ಅಧಿಕಾರಿಗಳು ಆತ ಐಸಿಸ್ ಸದಸ್ಯ ಎಂದು ಹೇಳಿದ್ದಾರೆ.
ಘಟನೆಯಲ್ಲಿ ಸಿಮಿ ಉಗ್ರರ ಕೃತ್ಯವೂ ಇದೆಯಾ ಎಂದು ತನಿಖೆ ಮಾಡುತ್ತಿದ್ದೇವೆ ಎಂದು ಹಿರಿಯ ಗುಪ್ತಚರ ದಳದ ಅಧಿಕಾರಿ ಹೇಳಿದ್ದಾರೆ. ಈಗಾಗಲೇ ಕಟ್ಟಡದಲ್ಲಿ ಅಡಗಿ ಕುಳಿತ ಉಗ್ರನ ಬಗ್ಗೆ ಗೃಹ ಇಲಾಖೆಗೆ ಮಾಹಿತಿಯನ್ನೂ ನೀಡಲಾಗಿದೆ.
Latest visuals from Thakurganj area of Lucknow, where a suspect is holed up by UP ATS (visuals deferred by unspecified time) pic.twitter.com/AjFekQmsNV
— ANI UP (@ANINewsUP) March 7, 2017
" ಕಟ್ಟಡದೊಳಗಿರುವ ಉಗ್ರ ಬಹುಶಃ ಲಕ್ನೊಗೆ ಸೇರಿದವನು. ನಮ್ಮ ಅಂದಾಜಿನ ಪ್ರಕಾರ ಅವನ ಬಳಿಯಲ್ಲಿ ಶಸ್ತ್ರಾಸ್ತ್ರಗಳಿವೆ. ಸದ್ಯದಲ್ಲೇ ನಾವು ಅವನನ್ನು ಬಂಧಿಸಲಿದ್ದೇವೆ. ನಂತರ ಆತನನ್ನು ವಿಚಾರಣೆಗೆ ಒಳಪಡಿಸುತ್ತೇವೆ," ಎಂದು ಹಿರಿಯ ಪೊಲೀಸ್ ಅಧಿಕಾರಿ ದಲ್ಜೀತ್ ಚೌಧರಿ ಹೇಳಿದ್ದಾರೆ.
ಇಂದು ಮಧ್ಯಾಹ್ನ 3:30ಕ್ಕೆ ಕಾರ್ಯಾಚರಣೆ ಆರಂಭವಾಗಿದೆ. ಇಲ್ಲಿನ ಹಾಜಿ ಕಾಲೊನಿಯಲ್ಲಿ ಉಗ್ರರು ಅಡಗಿಕೊಂಡಿದ್ದಾರೆ ಎಂಬ ಮಾಹಿತಿಯ ಮೇರೆಗೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದಾಗ ಕಟ್ಟಡದಿಂದ ಗುಂಡಿನ ದಾಳಿ ಆರಂಭವಾಗಿದೆ.

ನಂತರ ಪೊಲೀಸರು ಸ್ಥಳೀಯ ಮನೆಗಳಿಂದ ಜನರನ್ನು ಸ್ಥಳಾಂತರ ಮಾಡಿದ್ದಾರೆ. ಮಾತ್ರವಲ್ಲ ಎಟಿಎಸ್ ಪೊಲೀಸರಿಗೆ ಸ್ಥಳಕ್ಕೆ ಬರುವಂತೆ ಕರೆ ನೀಡಿದ್ದಾರೆ. ಅದರಂತೆ ಬಿಜನೌರ್ ನಿಂದ 10 ಕಮಾಂಡೋಗಳು ಸ್ಥಳಕ್ಕಾಗಮಿಸಿದ್ದು ಕಾರ್ಯಾಚರಣೆ ನಡೆಯುತ್ತಿದೆ.
ಇನ್ನು ಕಟ್ಟಡದ ಸುತ್ತ ಮುತ್ತಲಿನ ಪ್ರದೇಸದಲ್ಲೂ ಉಗ್ರರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕಾರ್ಯಾಚರಣೆ ಮುಗಿಯುವವರೆಗೆ ಸ್ಥಳೀಯರು ಯಾರೂ ಮನೆ ಬಿಟ್ಟು ಹೊರ ಬರದಂತೆ ಪೊಲೀಸರು ಸೂಚನೆ ನೀಡಿದ್ದಾರೆ.
ಕಟ್ಟಡದಿಂದ ಉಗ್ರನ್ನು ಹೊರಬರುವಂತೆ ಮಾಡಲು ಕಮಾಂಡೋಗಳು ಶ್ರಮಿಸುತ್ತಿದ್ದಾರೆ. ಆದರೆ ಆತ ಹೊರ ಬರುತ್ತಿಲ್ಲ. ಕಾರ್ಯಾಚರಣೆ ಚಾಲ್ತಿಯಲ್ಲಿದ್ದು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
-
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್












Click it and Unblock the Notifications