ವಿವಾದಿತ ದೇವಮಾನವ ಸಾರಥಿ ಬಾಬಾ ಆಸ್ತಿ ಮೌಲ್ಯ ಎಷ್ಟು?
ಕೇಂದ್ರ ಪಾರ (ಒಡಿಶಾ) ಆಗಸ್ಟ್ 21:ಸ್ವಘೋಷಿತ ದೇವಮಾನವ ಸಾರಥಿಬಾಬಾ ಅಲಿಯಾಸ್ ಸಂತೋಷ್ ರೌಲಾ ಅವರು ಸ್ಥಾಪಿಸಿರುವ ಒಡಿಶಾದ ಕೇಂದ್ರಪಾರ ಜಿಲ್ಲೆಯಲ್ಲಿರುವ ಆಶ್ರಮ ಅಸ್ತಿ ಮೌಲ್ಯ ಲೆಕ್ಕಾಚಾರ ಹಾಕಲಾಗಿದೆ.
ಸಾರಧಿ ಬಾಬಾ ಅವರ ಆಶ್ರಮದ ಆಸ್ತಿ ಮೌಲ್ಯ ಅಧಿಕೃತವಾಗಿ ರೂ.4.48 ಕೋಟಿ ರು ಅಂದಾಜಿನಷ್ಟಿದೆ ಎಂದು ಜಿಲ್ಲಾಡಳಿತ ಘೋಷಿಸಿದೆ. ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ಬಾಬಾ ಈಗ ಪೊಲೀಸ್ ಬಂಧನದಲ್ಲಿದ್ದಾರೆ.
ಬರಿಮುಲಾದಲ್ಲಿ 2.47 ಎಕ್ರೆ ಜಮೀನಿನಲ್ಲಿ ವ್ಯಾಪಿಸಿರುವ ಆಶ್ರಮವು 3,760 ಚದರ ಅಡಿಗಳ 2 ಮಹಡಿಗಳ ಮುಖ್ಯ ಕಟ್ಟಡವನ್ನು ಹೊಂದಿದೆ. ಈ ಕಟ್ಟಡದ ಮೌಲ್ಯ 1.18 ಕೋಟಿ ರು ಬೆಲೆಯಷ್ಟಿದೆ. ಮೂರು ಮಹಡಿಗಳ ಅತಿಥಿ ಗೃಹವೊಂದಕ್ಕೆ 94.33 ಲಕ್ಷ ರು ಎಂದು ವೌಲ್ಯಮಾಪನ ಮಾಡಲಾಪಿದೆ ಎಂದು ಆರ್ ಅಂಡ್ ಬಿ ವಿಭಾಗದ ಕಾರ್ಯಕಾರಿ ಎಂಜಿನಿಯರ್ ಎಂ.ಎಂ. ಖಾನ್ ತಿಳಿಸಿದ್ದಾರೆ. [ಸ್ವಯಂ ಘೋಷಿತ ದೇವ ಮಾನವ ಸಾರಥಿ ಬಾಬಾ ಬಂಧನ]

ಆಶ್ರಮದ ಗ್ರಂಥಾಲಯ ಕಟ್ಟಡ 70 ಲಕ್ಷ ರು ಬೆಲೆ ಬಾಳಿದರೆ, ವಿಚಾರಣೆ ಮತ್ತು ಸ್ವಾಗತ ಕೌಂಟರ್ನ ಮೌಲ್ಯ 17.05 ರು ಲಕ್ಷ ರು ನಷ್ಟಿದೆ. ಪೈಪ್ ಹಾಗೂ ಆಂಗಲ್ ಫ್ರೇಮ್ಗಳ ರಚನೆಯಾಗಿರುವ ಪ್ರಾರ್ಥನಾ ಮಂದಿರದ ಮೌಲ್ಯ 43 ಲಕ್ಷ ರು ಹಾಲಿ ಮಾರುಕಟ್ಟೆ ದರದಂತೆ ಆಶ್ರಮದ ಆವರಣ ಗೋಡೆಗೆ 28 ಲಕ್ಷ ರು ಬೆಲೆಯನ್ನು ಅಂದಾಜಿಸಲಾಗಿದೆ.
ಆಶ್ರಮದಲ್ಲಿ ದೇವ-ದೇವಿಯರ ಹಲವು ರಚನೆಗಳಿವೆ. ಅಲ್ಲಿ ಹುಲಿ, ಕರಡಿ, ಆಮೆ, ಮೊಸಳೆ, ಮಂಗ, ವೀರಾನೆ, ನವಿಲು, ಜಿಂಕೆ, ಹಂಸ ಹಾಗೂ ಜೀಬ್ರಾಗಳಂತಹ ಪ್ರಾಣಿಗಳ ಶಿಲ್ಪಗಳೂ ಇವೆ. ಆಶ್ರಮದಲ್ಲಿ ಪ್ರವೇಶ ಹಾಗೂ ನಿರ್ಗಮನಕ್ಕಾಗಿ ನಾಲ್ಕು ಅಲಂಕೃತ ದ್ವಾರಗಳಿವೆ. ಅಂತಹ ಅಲಂಕೃತ ದ್ವಾರಗಳ ರಚನೆ ಭಾರೀ ಖರ್ಚಿನ ಬಾಬತ್ತಾಗಿರುತ್ತದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications