ವಿವಾದಿತ ದೇವಮಾನವ ಸಾರಥಿ ಬಾಬಾ ಆಸ್ತಿ ಮೌಲ್ಯ ಎಷ್ಟು?
ಕೇಂದ್ರ ಪಾರ (ಒಡಿಶಾ) ಆಗಸ್ಟ್ 21:ಸ್ವಘೋಷಿತ ದೇವಮಾನವ ಸಾರಥಿಬಾಬಾ ಅಲಿಯಾಸ್ ಸಂತೋಷ್ ರೌಲಾ ಅವರು ಸ್ಥಾಪಿಸಿರುವ ಒಡಿಶಾದ ಕೇಂದ್ರಪಾರ ಜಿಲ್ಲೆಯಲ್ಲಿರುವ ಆಶ್ರಮ ಅಸ್ತಿ ಮೌಲ್ಯ ಲೆಕ್ಕಾಚಾರ ಹಾಕಲಾಗಿದೆ.
ಸಾರಧಿ ಬಾಬಾ ಅವರ ಆಶ್ರಮದ ಆಸ್ತಿ ಮೌಲ್ಯ ಅಧಿಕೃತವಾಗಿ ರೂ.4.48 ಕೋಟಿ ರು ಅಂದಾಜಿನಷ್ಟಿದೆ ಎಂದು ಜಿಲ್ಲಾಡಳಿತ ಘೋಷಿಸಿದೆ. ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ಬಾಬಾ ಈಗ ಪೊಲೀಸ್ ಬಂಧನದಲ್ಲಿದ್ದಾರೆ.
ಬರಿಮುಲಾದಲ್ಲಿ 2.47 ಎಕ್ರೆ ಜಮೀನಿನಲ್ಲಿ ವ್ಯಾಪಿಸಿರುವ ಆಶ್ರಮವು 3,760 ಚದರ ಅಡಿಗಳ 2 ಮಹಡಿಗಳ ಮುಖ್ಯ ಕಟ್ಟಡವನ್ನು ಹೊಂದಿದೆ. ಈ ಕಟ್ಟಡದ ಮೌಲ್ಯ 1.18 ಕೋಟಿ ರು ಬೆಲೆಯಷ್ಟಿದೆ. ಮೂರು ಮಹಡಿಗಳ ಅತಿಥಿ ಗೃಹವೊಂದಕ್ಕೆ 94.33 ಲಕ್ಷ ರು ಎಂದು ವೌಲ್ಯಮಾಪನ ಮಾಡಲಾಪಿದೆ ಎಂದು ಆರ್ ಅಂಡ್ ಬಿ ವಿಭಾಗದ ಕಾರ್ಯಕಾರಿ ಎಂಜಿನಿಯರ್ ಎಂ.ಎಂ. ಖಾನ್ ತಿಳಿಸಿದ್ದಾರೆ. [ಸ್ವಯಂ ಘೋಷಿತ ದೇವ ಮಾನವ ಸಾರಥಿ ಬಾಬಾ ಬಂಧನ]

ಆಶ್ರಮದ ಗ್ರಂಥಾಲಯ ಕಟ್ಟಡ 70 ಲಕ್ಷ ರು ಬೆಲೆ ಬಾಳಿದರೆ, ವಿಚಾರಣೆ ಮತ್ತು ಸ್ವಾಗತ ಕೌಂಟರ್ನ ಮೌಲ್ಯ 17.05 ರು ಲಕ್ಷ ರು ನಷ್ಟಿದೆ. ಪೈಪ್ ಹಾಗೂ ಆಂಗಲ್ ಫ್ರೇಮ್ಗಳ ರಚನೆಯಾಗಿರುವ ಪ್ರಾರ್ಥನಾ ಮಂದಿರದ ಮೌಲ್ಯ 43 ಲಕ್ಷ ರು ಹಾಲಿ ಮಾರುಕಟ್ಟೆ ದರದಂತೆ ಆಶ್ರಮದ ಆವರಣ ಗೋಡೆಗೆ 28 ಲಕ್ಷ ರು ಬೆಲೆಯನ್ನು ಅಂದಾಜಿಸಲಾಗಿದೆ.
ಆಶ್ರಮದಲ್ಲಿ ದೇವ-ದೇವಿಯರ ಹಲವು ರಚನೆಗಳಿವೆ. ಅಲ್ಲಿ ಹುಲಿ, ಕರಡಿ, ಆಮೆ, ಮೊಸಳೆ, ಮಂಗ, ವೀರಾನೆ, ನವಿಲು, ಜಿಂಕೆ, ಹಂಸ ಹಾಗೂ ಜೀಬ್ರಾಗಳಂತಹ ಪ್ರಾಣಿಗಳ ಶಿಲ್ಪಗಳೂ ಇವೆ. ಆಶ್ರಮದಲ್ಲಿ ಪ್ರವೇಶ ಹಾಗೂ ನಿರ್ಗಮನಕ್ಕಾಗಿ ನಾಲ್ಕು ಅಲಂಕೃತ ದ್ವಾರಗಳಿವೆ. ಅಂತಹ ಅಲಂಕೃತ ದ್ವಾರಗಳ ರಚನೆ ಭಾರೀ ಖರ್ಚಿನ ಬಾಬತ್ತಾಗಿರುತ್ತದೆ.
-
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು












Click it and Unblock the Notifications