ನಕಲಿ ಬಾಬಾ, ಸ್ವಾಮೀಜಿಗಳ ಪಟ್ಟಿ ಬಹಿರಂಗ
ನವದೆಹಲಿ, ಸೆ. 11: ಭಾರತದಲ್ಲಿರುವ ನಕಲಿ ಬಾಬಾ, ಸ್ವಾಮೀಜಿಗಳ ಪಟ್ಟಿಯನ್ನು ಹಿಂದೂ ಸಾಧು ಸಂತರ ಪರಮೋಚ್ಚ ಮಂಡಳಿಯಾದ ಅಖಿಲ ಭಾರತೀಯ ಅಖಾರ ಪರಿಷತ್ ಬಿಡುಗಡೆ ಮಾಡಿದೆ.
ಅಖಾರ ಪರಿಷತ್ತಿನಡಿಯಲ್ಲಿ 13ಕ್ಕೂ ಅಧಿಕ ಅಧಿಕೃತ ಅಖಾರಗಳು, ಧಾರ್ಮಿಕ ಸಂಸ್ಥೆಗಳು ಬರಲಿವೆ. ಭಾರತದಲ್ಲಿ ಬಾಬಾಗಳ ರೂಪದಲ್ಲಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿರುವವರ ಮೇಲೆ ನಿಗಾ ವಹಿಸಲು, ನಿಯಂತ್ರಿಸಲು ಈ ಪಟ್ಟಿ ನೆರವಿಗೆ ಬರಲಿದೆ.
ಸ್ವಯಂಘೋಷಿತ ದೇವಮಾನವರಾದ ದೇರಾ ಸಚ್ಚಾ ಸೌಧದ ಮುಖ್ಯಸ್ಥ ರಾಮ್ ರಹೀಮ್ ಸಿಂಗ್ ಅವರು ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥ ಎಂದೆನಿಸಿ ಜೈಲು ಸೇರಿದ ಬಳಿಕ ಪಟ್ಟಿ ತಯಾರಿಸಲು ಅಖಾರ ಮುಂದಾಯಿತು.

ಈ ಪಟ್ಟಿಯಲ್ಲಿ ಗುರ್ಮೀತ್ ರಾಮ್ ರಹೀಮ್ ಸಿಂಗ್, ಹರ್ಯಾಣದ ನಾಯಕ ರಾಮ್ ಪಾಲ್, ಅತ್ಯಾಚಾರ ಆರೋಪ ಹೊತ್ತಿರುವ ಅಸಾರಾಮ್ ಬಾಪು ಹಾಗೂ ಆತನ ಮಗ ನಾರಾಯಣ ಸಾಯಿ ಹೆಸರಿವೆ.
ಸಾರ್ವಜನಿಕರು ಈ ನಕಲಿ ಬಾಬಾಗಳ ಬಗ್ಗೆ ಎಚ್ಚರದಿಂದಿರಬೇಕು ಸಾಧು ಸನ್ಯಾಸಿಗಳನ್ನು ನಂಬುವುದು ವೈಯಕ್ತಿಕ ವಿಷಯವಾದರೂ, ಅನಾಚಾರ, ಅಕ್ರಮ, ಅತ್ಯಾಚಾರ ಎಸಗಿದ ಆರೋಪಿಗಳನ್ನು ನಂಬುವುದು ಸರಿಯಲ್ಲ ಎಂದು ಸ್ವಾಮಿ ನರೇಂದ್ರ ಗಿರಿ ಕೋರಿದ್ದಾರೆ.
1. ಅಸಾರಾಮ್ ಬಾಪು (ಅಸುಮಾಲ್ ಸಿರುಮಲಾನಿ)
2. ಸುಖ್ ಬಿಂದರ್ ಕೌರ್ (ರಾಧೇ ಮಾ)
3. ಸಚ್ಚಿದಾನಂದ ಗಿರಿ (ಸಚಿನ್ ದತ್ತಾ)
4. ಗುರ್ಮೀತ್ ಸಿಂಗ್, ದೇರಾ ಸಚ್ಚಾ ಸೌದಾ
5. ಓಂ ಬಾಬಾ (ವಿವೇಕಾನಂದ ಝಾ)
6. ನಿರ್ಮಲ್ ಬಾಬ (ನಿರ್ಮಲ್ ಜೀತ್ ಸಿಂಗ್)
7. ಇಚ್ಛಾಧಾರಿ ಭಿಮಾನಂದ (ಶಿವಮೂರ್ತಿ ದ್ವಿವೇದಿ)
8. ಸ್ವಾಮೀ ಆಸೀಮಾನಂದ
9. ಓಂ ನಮಹಾ ಶಿವಾಯ್ ಬಾಬಾ
10. ನಾರಾಯಣ ಸಾಯಿ
11. ರಾಮ್ ಪಾಲ್
12. ಆಚಾರ್ಯ ಕುಷ್ಮುನಿ
13. ಬೃಹಸ್ಪತಿ ಗಿರಿ
14. ಮಲ್ಖಾನ್ ಸಿಂಗ್
(ಒನ್ಇಂಡಿಯಾ ಸುದ್ದಿ)
-
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ: 13,712 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ ಎಸ್ಐಟಿ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral












Click it and Unblock the Notifications