ಬೆಂಗಳೂರು, ಸೆಪ್ಟೆಂಬರ್ 10: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಇಂದು(ಸೆ.10) ಭಾರತ್ ಬಂದ್ ಕರೆ ನೀಡಿವೆ.
ತೈಲ ಬೆಲೆ ಏರಿಕೆ ಖಂಡಿಸಿ ಮಾತ್ರವಲ್ಲದೆ, ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಪತನ ಕಾಣುತ್ತಿರುವುದು ಮತ್ತು ರಫೆಲ್ ಡೀಲ್ ಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ(ಜೆಪಿಸಿ) ರಚಿಸಲು ಒತ್ತಾಯಿಸಿ ಬಂದ್ ಆಚರಿಸಲಾಗುತ್ತಿದ್ದು, ದೇಶದೆಲ್ಲೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಪೆಟ್ರೋಲ್ ಬೆಲೆ ಲೀಟರ್ ಗೆ ರೂ.80 ಗಡಿ ದಾಟಿದ್ದು, ಡೀಸೆಲ್ ಬೆಲೆ ರೂ. 75 ರ ಆಸುಪಾಸಿನಲ್ಲಿದೆ. ಬೆಳಿಗ್ಗೆ 6 ಗಂಟೆಯಿಂದ ಅಪರಾಹ್ನ 3 ಗಂಟೆಯವರೆಗೆ ಬಂದ್ ನಡೆಯಲಿದೆ.
ಬಂದ್ ಗೆ ಕರೆನೀಡದಿದ್ದು ಕಾಂಗ್ರೆಸ್ ಮತ್ತು ಇನ್ನಿತರ ವಿರೋಧಪಕ್ಷಗಳೇ ಆಗಿರುವುದರಿಂದ, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಬಂದ್ ಬಿಸಿ ಹೆಚ್ಚಾಗುವ ಸಾಧ್ಯತೆ ಇದ್ದು, ಕರ್ನಾಟಕಕ್ಕೂ ಆ ಬಿಸಿ ತಟ್ಟಲಿದೆ.
ಬಿಎಂಟಿಸಿ ಬಸ್, ಆಟೋ, ಟ್ಯಾಕ್ಸಿ ಸಂಚಾರ ಸ್ಥಗಿತಗೊಳ್ಳಲಿದ್ದು, ಶಾಲೆ-ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.
Sep 10, 2018, 3:53 pm IST
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆಯೂ ತಣ್ಣಗಾದ ಬಂದ್ ಬಿಸಿ
Sep 10, 2018, 3:32 pm IST
ಬೆಂಗಳೂರಿನಲ್ಲಿ ಬಸ್ ಸಂಚಾರ ಆರಂಭ, ಸಹಜ ಸ್ಥಿತಿಯತ್ತ ರಾಜಧಾನಿ
Sep 10, 2018, 3:31 pm IST
ಮಹಾರಾಷ್ಟ್ರದಲ್ಲಿ ಒತ್ತಾಯಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲು ಪ್ರಯತ್ನಿಸಿದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.
Sep 10, 2018, 2:43 pm IST
ಪ್ರತಿಭಟನೆಯ ವೇಳೆ ಕಾಂಗ್ರೆಸ್ ನ ಮಾಜಿ ಮಂತ್ರಿ ಬಿಸ್ಮಿತಾ ಗೋಗಾಯ್ ಅವರನ್ನು ಅಸ್ಸಾಮಿನಲ್ಲಿ ಬಂಧಿಸಿದ ಪೊಲೀಸರು.
Sep 10, 2018, 2:41 pm IST
'ಪ್ರತಿಭಟನೆ ಮಾಡಲು ಕಾಂಗ್ರೆಸ್ ಗೆ ಯಾವುದೇ ನೈತಿಕತೆ ಇಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ಇಂಧನ ಬೆಲೆ ಏರಿಕೆಯಾಗಿತ್ತು'- ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ
Sep 10, 2018, 1:48 pm IST
ಮಗು ಮೃತಪಟ್ಟಿದ್ದಕ್ಕೆ ಪ್ರತಿಭಟನೆ ಕಾರಣವಲ್ಲ. ಮಗುವನ್ನು ಮನೆಯಿಂದ ಆಸ್ಪತ್ರೆಗೆ ಕರೆತರುವಾಗಲೇ ವಿಳಂಬವಾಗಿತ್ತು ಎಂದು ಕಾಂಗ್ರೆಸ್ ಕಾರ್ಯಕರ್ತರಿಂದ ಸಮಜಾಯಿಷಿ
Sep 10, 2018, 1:46 pm IST
ಬಿಹಾರದ ಜೆಹಾನಾಬಾದ್ ನಲ್ಲಿ ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ 2 ವರ್ಷ ವಯಸ್ಸಿನ ಮಗು ಸಾವು. ಆಸ್ಪತ್ರೆ ಹಾದಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಕಾರಣ ಬೇಗ ಆಸ್ಪತ್ರೆ ಸೇರದ ಅಂಬುಲೆನ್ಸ್. ಮಗುವಿನ ಸಾವಿಗೆ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರೇ ಹೊಣೆ ಎಂದ ಬಿಜೆಪಿ
Sep 10, 2018, 1:35 pm IST
"ಪ್ರತಿಯೊಬ್ಬರಿಗೂ ಪ್ರತಿಭಟನೆ ಮಾಡುವುದಕ್ಕೆ ಹಕ್ಕಿದೆ. ಆದರೆ ಇದರಿಂದ ಏನು ಪ್ರಯೋಜನವಾದಂತಾಯಿತು? ಬಸ್ಸುಗಳಿಗೆ ಬೆಂಕಿ ಹಚ್ಚಲಾಗುತ್ತಿದೆ, ಪೆಟ್ರೋಲ್ ಪಂಪ್ ಅನ್ನು ದ್ವಂಸಗೊಳಿಸಲಾಗಿದೆ, ಅಂಬುಲೆನ್ಸ್ ವೊಂದು ಪ್ರತಿಭಟನೆಯ ಸಂದರ್ಭದಲ್ಲಿ ಸಿಲುಕಿಕೊಂಡಿದ್ದರಿಂದ ಮಗುವೊಂದು ಮೃತವಾಗಿದೆ. ಇದಕ್ಕೆಲ್ಲ ಯಾರು ಹೊಣೆ"-ರವಿಶಂಕರ್ ಪ್ರಸಾದ್, ಕೇಂದ್ರ ಸಚಿವ
Sep 10, 2018, 1:30 pm IST
ಭಾರತ್ ಬಂದ್ ಪ್ರತಿಭಟನೆ ವೇಳೆ ಟ್ರಾಫಿಕ್ ನಲ್ಲಿ ಸಿಕ್ಕಿಕೊಂಡ ಅಂಬುಲೆನ್ಸ್. ಎರಡು ವರ್ಷದ ಮಗು ಸಾವು.
Sep 10, 2018, 1:17 pm IST
ದೆಹಲಿಯಲ್ಲಿ ಭಾರತ್ ಬಂದ್ ಪ್ರತಿಭಟನೆಯಲ್ಲಿ ಪಾಲ್ಗೊಂಡ ಎಡಪಕ್ಷದ ಸೀರಾಮ್ ಯಚೂರಿ ಮತ್ತು ಎ.ರಾಜಾ ಮತ್ತಿತರು.
Sep 10, 2018, 1:06 pm IST
ಯಾದಗಿರಿಯಲ್ಲಿ ಬಂದ್ ಗೆ ಬೆಂಬಲ ನೀಡುವಂತೆ ಒತ್ತಾಯಿಸಿ ಅಂಗಡಿ ಮುಂಗಟ್ಟು ಮುಚ್ಚಿದ ಕಾರ್ಯಕರ್ತರು
Sep 10, 2018, 12:53 pm IST
"ಈ ದೇಶದಲ್ಲಿ ರೈತರ ಸಾಲಮನ್ನಾ ಸಾಧ್ಯವಿಲ್ಲ. ಆದರೆ ಉದ್ಯಮಿಗಳಿಗೆ 45,000 ಕೋಟಿ ರೂ. ಉಡುಗೊರೆ ನೀಡುವುದಕ್ಕೆ ಸರ್ಕಾರದ ಬಳಿ ಹಣವಿದೆ! ನರೇಂದ್ರ ಮೋದಿಯವರು ಇಡೀ ದೇಶದ ಸುತ್ತ ಸುತ್ತುತ್ತಾರೆ. ಆದರೆ ಒಂದು ಕಡೆಯೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಬಗ್ಗೆ ಮಾತನಾಡುತ್ತಿಲ್ಲ"- ರಾಹುಲ್ ಗಾಂಧಿ
'ಈ ದೇಶದ ಜನತೆಯ ಮನಸ್ಸಿನಲ್ಲಿರುವ ದುಃಖ ನಮ್ಮ ಹೃದಯದಲ್ಲೂ ಇದೆ. ಆದರೆ ಆ ದುಃಖ ಈ ದೇಶದ ಪ್ರಧಾನಿ ಮೋದಿಯವರಿಗೆ ಮತ್ತು ಬಿಜೆಪಿಯವರಿಗೆ ಗೊತ್ತಿಲ್ಲ. ಭಾರತದ ಯುವಕರಿಗೆ ಗೊತ್ತಿರಲಿ, ಮೋದಿ ತಮ್ಮ ಸ್ನೇಹಿತನಿಗೆ ನೀಡಿದ 45,000 ಕೋಟಿ ರೂ.ಹಣ ಅವರದಲ್ಲ. ಈ ದೇಶದ ಯುವಕರು ಮತ್ತು ರೈತರದು'- ರಾಹುಲ್ ಗಾಂಧಿ
Sep 10, 2018, 12:30 pm IST
"ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಸೋಲಿಸಲು ನಾವೆಲ್ಲ ಒಂದಾಗಿದ್ದೇವೆ" ಎಂದು ಮಹಾಮೈತ್ರಿಯ ಸೂಚನೆಯನ್ನು ಮತ್ತೊಮ್ಮೆ ನೀಡಿದ್ದಾರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
Sep 10, 2018, 12:25 pm IST
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತು ವರ್ಷವಾದರೂ ಎಂದಿಗೂ ಡಾಲರ್ ಎದುರು ರೂಪಾಯಿ ಈ ಪರಿ ಕುಸಿತ ಕಂಡಿರಲಿಲ್ಲ. ಇದು ಕೇಂದ್ರ ಸರ್ಕಾರದ ವೈಫಲ್ಯ- ರಾಹುಲ್ ಗಾಂಧಿ
Sep 10, 2018, 12:18 pm IST
ರೈತರ ಸಾಲಮನ್ನಾ ಮಾಡುವುದಕ್ಕೆ ಕೇಂದ್ರ ಸರ್ಕಾರಕ್ಕೆ ಸಾಧ್ಯವಿಲ್ಲ. ಆದರೆ ಒಬ್ಬ ಉದ್ಯಮಿಗೆ 45,000 ಕೋಟಿ ರೂ. ನೀಡುವುದಕ್ಕೆ ಸಾಧ್ಯವಿದೆ- ರಾಹುಲ್ ಗಾಂಧಿ
Sep 10, 2018, 12:14 pm IST
ಭಾರತ್ ಬಂದ್ ಪ್ರತಿಭಟನೆ ವೇಳೆ ಮಹಾಮೈತ್ರಿಯ ಸೂಚನೆ ನೀಡಿದ ವಿಪಕ್ಷಗಳು.
Sep 10, 2018, 11:58 am IST
"ವಿರೋಧ ಪಕ್ಷದ ಬಳಿ ಯಾವುದೇ ಸ್ಟ್ರಾಟಜಿಯಾಗಲೀ, ಉತ್ತಮ ನಾಯಕತ್ವವಾಗಲೀ ಇಲ್ಲ. ಅವರಿಂದ ಇನ್ನೇನನ್ನು ನಿರೀಕ್ಷಿಸುವುದಕ್ಕೆ ಸಾಧ್ಯ? ಇದೇ ರೀತಿ ಮುಂದುವರಿದರೆ ಅವರು ಈಗಿರುವ ಸ್ಥಿತಿಗಿಂತ ಕೆಳಗೆ ತಲುಪುವುದು ಖಂಡಿತ"- ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶ ಮುಖ್ಯಮಂತ್ರಿ
Sep 10, 2018, 11:51 am IST
ಭಾರತ ಎಂದಿಗೂ ಬಂದ್ ಆಗುವುದಿಲ್ಲ. ಅದು ಎಂದಿಗೂ ಚಲನಶೀಲವಾಗಿಯೇ ಇರುತ್ತದೆ. ಕಾಂಗ್ರೆಸ್ ಪ್ರಾಯೋಜಿತ ಈ ಬಂದ್ ಗೆ ಯಾರೂ ಬೆಂಬಲ ನೀಡುವುದಿಲ್ಲ. ಅವರ ಮಹಾಘಟಬಂಧನದ ಬಲೂನ್ ಸಹ ಸದ್ಯದಲ್ಲೇ ಠುಸ್ಸೆನ್ನುತ್ತೆ- ಮುಕ್ತಾರ್ ಅಬ್ಬಾಸ್ ನಖ್ವಿ
Sep 10, 2018, 11:44 am IST
ನಮ್ಮೊಂದಿಗೆ ಈಗ ಯಾವೆಲ್ಲ ಮಿತ್ರಪಕ್ಷಗಳು ಪ್ರತಿಭಟನೆಯಲ್ಲಿ ಭಾಗಿಯಾಗಿವೆಯೋ, ನಾವೆಲ್ಲರೂ ಸೇರಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಯತ್ನಿಸುತ್ತೇವೆ- ರಾಹುಲ್ ಗಾಂಧಿ
Sep 10, 2018, 11:43 am IST
ತೈಲ ಬೆಲೆ ಏರಿಕೆ ಬಗ್ಗೆಯಾಗಲೀ, ರೈತರ ಸ್ಥಿತಿಯ ಬಗ್ಗೆಯಾಗಲೀ, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆಯಾಗಲೀ ಪ್ರಧಾನಿ ನರೇಂದ್ರ ಮೋದಿಜೀ ಒಂದೂ ಮಾತನಾಡುತ್ತಿಲ್ಲ- ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
Sep 10, 2018, 11:38 am IST
ರಾಮಲೀಲಾ ಮೈದಾನದಲ್ಲಿ ಭಾರತ್ ಬಂದ್ ಧರಣಿ ವೇಳೆ ಮಾನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
Sep 10, 2018, 11:21 am IST
ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಪೆಟ್ರೋಲ್ ಪಂಪ್ ಧ್ವಂಸಗೊಳಿಸಿದ ಕಾಂಗ್ರೆಸ್ ಕಾರ್ಯಕರ್ತರು
ಮಂಬೈಯಲ್ಲಿ ಅಂಗಡಿಗಳನ್ನು ಒತ್ತಾಯದಿಂದ ಮುಚ್ಚಿಸುತ್ತಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖಂಡರು
Sep 10, 2018, 10:47 am IST
ದೆಹಲಿಯ ರಾಮಲೀಲಾ ಮೈದಾನದಲ್ಲಿಪ್ರತಿಭಟನೆಗೆ ಕಾಂಗ್ರೆಸ್ ನೊಂದಿಗೆ 12 ಪಕ್ಷಗಳು ಭಾಗಿ
Sep 10, 2018, 10:44 am IST
ರಸ್ತೆಯಲ್ಲಿ ಚಹ, ಅಡುಗೆ ಮಾಡಿ ಶಿರಸಿಯಲ್ಲಿ ಪ್ರತಿಭಟನೆ
Sep 10, 2018, 10:40 am IST
"ಈ ದೇಶದ ಜನರ ಹಿತಾಸಕ್ತಿಗೆ ವಿರುದ್ಧವಾದ ಸಾಕಷ್ಟು ಕೆಲಸವನ್ನು ಮೋದಿ ಸರ್ಕಾರ ಮಾಡಿದೆ. ಈ ಸರ್ಕಾರವನ್ನು ಬದಲಾಯಿಸಲು ಇದು ಸರಿಯಾದ ಸಮಯ"- ಮಾಜಿ ಪ್ರಧಾನಿ ಮನಮೋಹನ್ ಸಿಂಗ್
Sep 10, 2018, 10:36 am IST
ಮೈಸೂರಿನಲ್ಲಿ ರೈಲು ಪ್ರಯಾಣಿಕರಿಗೆ ತಟ್ಟದ ಬಂದ್ ಬಿಸಿ. ಎಂದಿನಂತೆ ರೈಲು ಸಂಚಾರ ಆರಂಭ. ಬಸ್ ನಿಲ್ದಾಣಗಳಿಂದ ರೈಲು ನಿಲ್ದಾಣದತ್ತ ಮುಖ ಮಾಡುತ್ತಿರುವ ಪ್ರಯಾಣಿಕರು.
Sep 10, 2018, 10:26 am IST
ಬೆಂಗಳೂರಿನಲ್ಲಿ ಅಹಿತಕರ ಘಟನೆ ತಪ್ಪಿಸಲು ಪೆಟ್ರೋಲ್ ಬಂಕ್ ಗಳನ್ನು ಮುಚ್ಚುವಂತೆ ಸೂಚಿಸಿದ ಪೊಲೀಸರು.
Sep 10, 2018, 10:20 am IST
ಮಂಗಳೂರಿನ ಬೆಂದೂರ್ ವೆಲ್ ನಲ್ಲಿ ಮೆಡಿಕಲ್ ಶಾಪ್ ಮುಚ್ಚಿಸಲು ಪ್ರಯತ್ನಿಸಿದ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
READ MORE
6:12 AM, 10 Sep
AITUC(ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್) ಸಹ ಬಂದ್ ಗೆ ಬೆಂಬಲ ನೀಡಿರುವುದರಿಂದ ಅದರ ಬೆಂಬಲಿತ ಸಂಸ್ಥೆಗಳಾದ ಕೆಎಸ್ ಆರ್ ಟಿಸಿ ಸಹ ಬಂದ್ ಗೆ ಬೆಂಬಲ ನೀಡುವ ಸಾಧ್ಯತೆ ಇದೆ. ಆದ್ದರಿಂದ ಬಿಎಂಟಿಸಿ ಮತ್ತು ಕೆಎಸ್ ಆರ್ ಟಿಸಿ, NWKRTC, NEKRTC ಬಸ್ ವ್ಯವಸ್ಥೆಗಳು ವ್ಯತ್ಯಯವಾಗಲಿವೆ.
6:27 AM, 10 Sep
ಸುರಕ್ಷತೆ ದೃಷ್ಟಿಯಿಂದ ಬೆಂಗಳೂರಿನಾದ್ಯಂತ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಿದ ಸರ್ಕಾರ
6:28 AM, 10 Sep
ನಮ್ಮ ಮೆಟ್ರೋ ಸೇವೆ ಎಂದಿನಂತೆಯೇ ಬಂದ್ ದಿನವೂ ಮುಂದುವರಿಯಲಿದೆ. ಅಹಿತಕರ ಘಟನೆಗಳೇನಾದರೂ ಸಂಭವಿಸಿದರೆ ನಂತರ ಸಂಚಾರ ಸ್ಥಗಿತಗೊಳ್ಳಬಹುದು.
6:52 AM, 10 Sep
ಕರ್ನಾಟಕ ಟ್ಯಾಕ್ಸಿ ಓನರ್ ಅಸೋಸಿಯೇಶನ್ ಈ ಬಂದ್ ಗೆ ಬೆಂಬಲ ನೀಡುವುದಾಗಿ ಹೇಳಿರುವುದರಿಂದ ಓಲಾ, ಊಬರ್ ನಂಥ ಟ್ಯಾಕ್ಸಿ ಸೇವೆಗಳು ಅಲಭ್ಯವಾಗಲಿವೆ.
7:05 AM, 10 Sep
ಆಂಧ್ರಪ್ರದೇಶದ ವಿಶಾಖಪಟ್ಟಣಂ ನಲ್ಲಿ ತೈಲ ದರ ಏರಿಕೆ ವಿರೋಧಿಸಿ ಭಾರತ್ ಬಂದ್ ಆಚರಿಸುತ್ತಿರುವ ಸಿಪಿಐಎಂ ಕಾರ್ಯಕರ್ತರು
ಭಾರತ್ ಬಂದ್: NEKRTC ಬಸ್ ಗಳ ಸೇವೆ ಅಲಭ್ಯ. ಕಲಬುರಗಿಯಲ್ಲಿ ಬಸ್ ಸಂಚಾರವಿಲ್ಲದೆ ಪರಿತಪಿಸುತ್ತಿರುವ ಜನರು
8:07 AM, 10 Sep
ಭಾರತ್ ಬಂದ್ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಸ್ ಸಂಚಾರ ಸ್ಥಗಿತ.
8:11 AM, 10 Sep
ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಖಾಸಗಿ ಬಸ್ ಸಂಚಾರ ಸ್ಥಗಿತ
8:13 AM, 10 Sep
ಕೆಎಸ್ ಆರ್ ಟಿಸಿ ಸ್ಲೀಪರ್ ಬಸ್ ಗೆ ಮಂಗಳೂರಿನಲ್ಲಿ ಕಲ್ಲು ತೂರಾಟ
8:17 AM, 10 Sep
ಭಾರತ್ ಬಂದ್ ದಿನವೂ ತೈಲ ಬೆಲೆ 30 ಪೈಸೆ ಏರಿಕೆ
8:19 AM, 10 Sep
ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವ ಆಟೋ ಮತ್ತು ಕ್ಯಾಬ್ ಚಾಲಕರು. ಕನಿಷ್ಠ ದರದ ಪ್ರಯಾಣಕ್ಕೂ ಆಟೋ ಚಾಲಕರು ನೂರಾರು ರೂಪಾಯಿ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
8:21 AM, 10 Sep
ಬಳ್ಳಾರಿಯಲ್ಲಿ ರೈಲು ತಡೆದ ಪ್ರತಿಭಟನಾಕಾರರು. ರೈಲು ನಿಲ್ದಾಣದಲ್ಲಿ ಪ್ರತಿಭಟನೆ
8:29 AM, 10 Sep
ಮಂಗಳೂರಿನ ಶಿವಬಾಗ್ನಲ್ಲಿ ಹೋಟೆಲ್ ಒಂದರ ಮೇಲೆ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳು ಬಳಿಕ ಪರಾರಿಯಾಗಿದ್ದಾರೆ.
8:31 AM, 10 Sep
ದಾವಣಗೆರೆಯ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ 20ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕೈ ಕಾರ್ಯಕರ್ಯತರಿಂದ ಹೋಟೆಲ್ನಲ್ಲಿ ದೌರ್ಜನ್ಯ. ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿರುವ ವಿನಾಯಕ ಹೋಟೆಲ್ನಲ್ಲಿ ತಿಂಡಿ ಚೆಲ್ಲಿ ರಂಪಾಟ ಮಾಡಿದ ಕಾರ್ಯಕರ್ತರು. ಮೋದಿ ಪರ ಘೋಷಣೆ ಕೂಗಿದ್ದಕ್ಕೆ ಹಲ್ಲೆ.
8:46 AM, 10 Sep
ತುಮಕೂರಿನಲ್ಲಿ ಕುದುರೆ ಗಾಡಿಯಲ್ಲಿ ತೆರಳುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
8:47 AM, 10 Sep
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
8:49 AM, 10 Sep
ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಇತರೆ ಹೋಟೆಲ್ಗಳು ಬಂದ್ ಆಗಿರುವುದಿಂದ ಇಂದಿರಾ ಕ್ಯಾಂಟೀನ್ಗೆ ಬರುತ್ತಿರುವ ಗ್ರಾಹಕರ ಸಂಖ್ಯೆ ಹೆಚ್ಚಿದೆ.
8:50 AM, 10 Sep
ಬಾಗಲಕೋಟೆಯಲ್ಲಿ ಟಾಂಗಾ ಗಾಡಿಗೆ ಆಟೋ ಕಟ್ಟಿ ಎಳೆಯುವ ಮೂಲಕ ಜಯಕರ್ನಾಟಕ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.
8:51 AM, 10 Sep
ಉಡುಪಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಎಡಪಕ್ಷಗಳಿಂದ ಬಂದ್. ನೂರಕ್ಕೂ ಹೆಚ್ಚು ಕಾರ್ಯಕರ್ತರು ಅಂಗಡಿಮುಂಗಟ್ಟುಗಳನ್ನು ಬಲವಂತವಾಗಿ ಬಂದ್ ಮಾಡಿಸಿದ್ದಾರೆ.
8:57 AM, 10 Sep
ಎಂದಿನಂತೆ ಮೆಟ್ರೋ ಕಾರ್ಯನಿರ್ವಹಿಸುತ್ತಿದೆ. ಯಾವುದೇ ಮೆಟ್ರೋ ನಿಲ್ದಾಣಗಳಿಂದ ಅಹಿತಕರ ಘಟನೆಯ ಕುರಿತು ವರದಿ ಬಂದಿಲ್ಲ. ಪೊಲೀಸರು ಮೆಟ್ರೊ ಸಂಚಾರ ಸ್ಥಗಿತಗೊಳಿಸುವತೆ ಸಲಹೆ ನೀಡಿದರೆ ಮಾತ್ರವೇ ಸಂಚಾರ ಸ್ಥಗಿತಗೊಳ್ಳುತ್ತದೆ. ಇಲ್ಲವೆಂದರೆ ಎಂದಿನಂತೆ ಕಾರ್ಯನಿರ್ವಹಿಸುತ್ತೆ- ವಸಂತ ರಾವ್, ಬಿಎಂಆರ್ ಸಿಎಲ್ ಜನರಲ್ ಮ್ಯಾನೇಜರ್
Trains are operating as per schedule No incidents reported from any stations as at 8-45 am. We will continue to operate as per schedule today unless advised otherwise by our security/Police
ಕೈಲಾಸ ಮಾನಸ ಯಾತ್ರೆ ಮೊಟಕುಗೊಳಿಸಿ ಪ್ರತಿಭಟನೆಗೆ ಹಾಜರಾದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
9:03 AM, 10 Sep
"ತೈಲ ಬೆಲೆ ಯಾಕೆ ಹೆಚ್ಚಳವಾಗಿದೆ ಎಂಬುದು ಇಡೀ ವಿಶ್ವಕ್ಕೇ ಗೊತ್ತಿದೆ. ಆದರೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಡಿರುವ ಷಡ್ಯಂತ್ರ ಇದು. ಇದಕ್ಕೆ ಸಮ್ಮಿಶ್ರ ಸರ್ಕಾರ ಬೆಂಬಲ ನೀಡುತ್ತಿದೆ. ದೇಶದ ಜನರ ದಿಕ್ಕು ತಪ್ಪಿಸುವ ಯತ್ನ ನಡೆಯುತ್ತಿದೆ"- ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
9:15 AM, 10 Sep
ಗುಜರಾತಿನ ಭಾರುಚ್ ನಲ್ಲಿ ಬಸ್ ಗಳನ್ನು ತಡೆದು, ಟೈರ್ ಸುಟ್ಟು ಪ್ರತಿಭಟನೆ ನಡೆಸುತ್ತಿರುವ ಜನ
9:16 AM, 10 Sep
ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಬೆಲೆ ಲೀಟರ್ ಗೆ 83.12 ಮತ್ತು ಡೀಸೆಲ್ ಬೆಲೆ ಲೀಟರ್ ಗೆ 74.95 ರೂ.