ಹುಬ್ಬಳ್ಳಿಯಲ್ಲೊಂದು ಚಿನ್ನಾರಿ ಬಾಲಕನ ವಾನರ ಸೈನ್ಯ
ಹುಬ್ಬಳ್ಳಿ , ಡಿಸೆಂಬರ್ 26 : ದ್ವಾಪರ ಯುಗದಲ್ಲಿ ಶ್ರೀ ರಾಮನ ಬಂಟ ಹನುಮಂತ ಹೇಗೋ ಹಾಗೆ , ಇಲ್ಲೊಬ್ಬ ಬಾಲಕನಿದ್ದಾನೆ ಅವನಿಗೂ ಕೂಡಾ ಹನುಮಂತನ ಹಾಗೆ ಬಂಟರಿದ್ದಾರೆ. ಕೇವಲ ಒಬ್ಬ ಇಬ್ಬರು ಅಲ್ಲಾ ,ಇವನ ಬಳಿ ಸುಮಾರು 10 ರಿಂದ 15 ರ ಮಹಾನ್ ವಾನರ ಸೈನ್ಯವೇ ಇದೆ . ಅಷ್ಟಕ್ಕೂ ಈ ಕಲಿಯುಗದ ಆ ವಾನರ ಸೈನ್ಯ ಹೇಗಿದೆ ಗೊತ್ತಾ ಈ ಸ್ಟೋರಿ ಓದಿ.
ಅಂದ ವಾನರ ಸೈನ್ಯದೊಂದಿಗೆ ಆಟವನ್ನು ಆಡುವ ಪುಟಾಣಿ ಹೆಸರು ಸಮರ್ಥ ಬಂಗಾರಿ. ಈತನೇ ಈ ವಾನರ ಸೈನ್ಯದ ದಳಪತಿ. ಅಂದಹಾಗೇ ಕಳೆದ ಮೂರ್ನಾಲ್ಕು ತಿಂಗಳಿಂದ ಮಂಗಗಳ ಗ್ಯಾಂಗ್ ಕಟ್ಟಿಕೊಂಡಿದ್ದಾನೆ ಈತ. ಮುಂಜಾನೆ ಅವುಗಳೇ ಬಂದು ಎಬ್ಬಿಸುತ್ತವೆ. ಈತ ಇನ್ನೂ ಮಲಗಿದ್ದರೆ ಮನೆ ಒಳಗೆ ಬಂದು ಹಾಸಿಗೆಯಿಂದ ಎಬ್ಬಿಸಿ ಕರೆದುಕೊಂಡು ಹೋಗುತ್ತವೆ.

ಸಮರ್ಥ ಅವುಗಳಿಗೆ ಆಹಾರ ನೀಡಿ ಅವುಗಳೊಂದಿಗೆ ಆಟ ಆಡುತ್ತಾನೆ. ಅವು ಮುಂಜಾನೆ ಕೆಲಹೊತ್ತು ಸಮರ್ಥನೊಂದಿಗೆ ಕಾಲ ಕಳೆದು ಆಹಾರ ಅರಸಿಕೊಂಡು ಹೋಗುತ್ತವೆ. ಮತ್ತೆ ಸಂಜೆ ತನ್ನ ಗೆಳೆಯನನ್ನು ನೋಡಲು ಮಂಗಗಳು ಬರುತ್ತವೆ. ಮನೆಯವರು ಸಹ ಮೊದ- ಮೊದಲು ಭಯ ಪಡುತ್ತಿದ್ದರು. ಆದರೆ ಈಗ ಅಭ್ಯಾಸವಾದ ನಂತರ ಆಡಲು ಬಿಡುತ್ತಿದ್ದಾರೆ.
ಇನ್ನೂ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮದ ಮೊಮ್ಮಗ ಈ ಸಮರ್ಥ. ಹೌದು ಕಳೆದ ಮೂರು ವರ್ಷಗಳ ಹಿಂದೆ ಅಲ್ಲಾಪುರ ಗ್ರಾಮದ ನಂದಾ ಎನ್ನುವ ಯುವತಿಯನ್ನು ಗದಗ ಜಿಲ್ಲೆಯ ನಿಲಗುಂದ ಗ್ರಾಮದ ಸುನೀಲ ಬಂಗಾರಿ ಜೊತೆ ಮದುವೆ ಮಾಡಿಕೊಂಡ್ತಾರೆ.
ಕಳೆದ ಎರಡು ವರ್ಷ ನಾಲ್ಕು ತಿಂಗಳ ಹಿಂದೆ, ಶನಿವಾರ ಈ ಸಮರ್ಥ ಜನನವಾಗುತ್ತೇ. ಆದರೆ ಸಮರ್ಥನ ತಾಯಿ ನಂದಾ ಎರಡನೇಯ ಹೆರಿಗೆಗೆ ಅಲ್ಲಾಪುರ ಗ್ರಾಮಕ್ಕೆ ಬರ್ತಾಳೆ. ಆಗ ಸಮರ್ಥ ಮನೆ ಮುಂದೆ ರೊಟ್ಟಿ ತಿನ್ನುವಾಗ ಮಂಗಗಳು ಬರುತ್ತದೆ. ಆಗ ಆ ಮಂಗಗಳನ್ನು ನೋಡಿ ಹೆದರುತ್ತಾನೆ. ಮರುದಿನವೇ ಮಂಗಗಳಿಗೆ ರೊಟ್ಟಿಯನ್ನು ಕೊಟ್ಟು ಸ್ನೇಹಿತನಾಗಿಬಿಡುತ್ತಾನೆ. ಅಂದಿನಿಂದ ಆರಂಭವಾದ ಮಂಗಗಳ ಸ್ನೇಹ ಇನ್ನೂ ಹಾಗೇ ಮುಂದುವರೆದಿದೆ.
-
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್ -
Karnataka Rain Alert: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ, ಮಿನಿ ಕಾಶ್ಮೀರದಂತಾದ ರಸ್ತೆಗಳು; ಇನ್ನೆಷ್ಟು ದಿನ ವರುಣನ ಆರ್ಭಣ?












Click it and Unblock the Notifications