ಎಸ್ಸಿಗೆ ಸೇರಿಸಬೇಕೆಂದು ಪಟ್ಟು ಹಿಡಿದ ಮಡಿವಾಳ ಸಮುದಾಯ: ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದೇನು?
ಚಿತ್ರದುರ್ಗ, ಜನವರಿ, 05: ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆನ್ನುವ ಬೇಡಿಕೆಗೆ ಸಂಬಂಧಿಸಿದಂತೆ ಡಾ.ಅನ್ನಪೂರ್ಣಮ್ಮ ವರದಿಯನ್ನು ಕಾನೂನಾತ್ಮಕವಾಗಿ ಪರಿಶೀಲಿಸಿ ನ್ಯಾಯ ಕೊಡಿಸುವ ಕಾರ್ಯವನ್ನು ಮಾಡುತ್ತೇವೆ. ಸಂವಿಧಾನದ ಚೌಕಟ್ಟಿನಲ್ಲಿ ಸಾಮಾಜಿಕ ನ್ಯಾಯ ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿತ್ರದುರ್ಗದಲ್ಲಿ ಆಶ್ವಾಸನೆ ನೀಡಿದರು.
ನಗರದ ಮಡಿವಾಳ ಗುರುಪೀಠದಲ್ಲಿ ಸ್ವಾಮೀಜಿ ಅವರ 5ನೇ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಕಾಯಕ ಜನೋತ್ಸವದಲ್ಲಿ ಅವರು ಮಾತನಾಡಿದರು. ಮಡಿವಾಳ ಮಾಚಿದೇವರ ಕಾಯಕ ನಿಷ್ಠೆ ಬಹಳ ದೊಡ್ಡದು. ಬಸವಣ್ಣನವರ ಜೊತೆ ಸೇರಿ ಸಮಾಜದ ಏಳಿಗೆಗಾಗಿ ಶ್ರಮಿಸಿದ್ದಾರೆ. ಎಲ್ಲೂ ಕೂಡ ತಮ್ಮಲ್ಲಿ ಕೀಳಿರಿಮೆ ತೋರದೆ ತಮ್ಮ ಕಾಯಕವನ್ನು ಮಾಡಿದರೆ ಯಶಸ್ಸು ಸಾಧ್ಯ ಎಂದರು.
ಗಾಲಿ ಜನಾರ್ಧನ್ ರೆಡ್ಡಿಯನ್ನು ಭೇಟಿಯಾದ ಹಿರಿಯೂರಿನ ಸ್ಥಳೀಯ ಅಭ್ಯರ್ಥಿ
ಕಾಯಕದಲ್ಲೇ
ಸ್ವರ್ಗ
ಕಾಣಬಹುದು
ಕಾಯಕದಲ್ಲಿ
ಮಾಡುವುದು
ಕೂಡ
ಸಣ್ಣದು,
ದೊಡ್ಡದು
ಅನ್ನುವುದಿಲ್ಲ.
ಕಾಯಕ
ಮಾಡಿದರೆ
ಅದರಲ್ಲೇ
ಸ್ವರ್ಗ
ಕಾಣಬಹುದು.
ಇದನ್ನು
ಸಮಾಜದ
ಪ್ರತಿಯೊಬ್ಬರು
ಮನಗಣಬೇಕು
ಎಂದು
ಸಿಎಂ
ಕರೆ
ನೀಡಿದರು.
ನಿಮ್ಮ
ಕಾಯಕವನ್ನು
ಇಂದು
ದೊಡ್ಡ
ದೊಡ್ಡ
ಕಂಪನಿಗಳು
ಮಾಡುತ್ತಿದ್ದು,
ನೀವು
ಕೂಡ
ವಿದ್ಯೆ
ಹಾಗು
ಆಧುನಿಕವಾದ
ತಂತ್ರಜ್ಞಾನದಲ್ಲಿ
ಮುಂದೆ
ಬಂದು
ದೊಡ್ಡ
ದೊಡ್ಡ
ಕಂಪನಿಗಳನ್ನು
ತೆರೆದು
ಆರ್ಥಿಕವಾಗಿ
ಮುಂದಾಗಬೇಕು.
ಇದಕ್ಕೆ
ಸರ್ಕಾರದ
ವತಿಯಿಂದ
ವಿಶೇಷವಾದ
ಅನುದಾನವನ್ನು
ಮುಂದಿನ
ಬಜೆಟ್ನಲ್ಲಿ
ನೀಡುವುದಾಗಿ
ಭರವಸೆ
ನೀಡಿದರು.
ಎಲ್ಲಾ
ರೀತಿಯ
ಸಹಾಯ
ಮಾಡಲು
ನಾನು
ಸಿದ್ದನಾಗಿದ್ದು,
ಬಜೆಟ್ನಲ್ಲಿ
ಕಳೆದ
ಬಾರಿಗಿಂತ
ಹೆಚ್ಚಿನ
ಅನುದಾನ
ನೀಡಿ
ಯುವಕರಿಗೆ
ಸಹಾಯ
ಸಂಘಗಳಿಗೆ
ವಿಶೇಷ
ಅನುದಾನ
ನೀಡುವುದಾಗಿ
ಹೇಳಿದರು.
ವರದಿ ಸಲ್ಲಿಕೆಯಾಗಿ ಎಂಟು ವರ್ಷ ಕಳೆದಿದೆ
ಕುಲಶಾಸ್ತ್ರೀಯ ಅಧ್ಯಯನದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿ ಎಂಟು ವರ್ಷ ಕಳೆದಿದೆ. ಈವರೆಗೆ ಅಧಿಕಾರ ನಡೆಸಿದ ಯಾವ ಸರ್ಕಾರವೂ ವರದಿಯ ಪುಟ ತಿರುಗಿಸಿ ನೋಡಿಲ್ಲ. ಸಮುದಾಯಕ್ಕೆ ಒಳ್ಳೆಯ ದಿನಗಳು ಬಂದಿವೆ. ಮತ್ತೊಬ್ಬರಿಗೆ ಅನ್ಯಾಯ ಆಗದ ರೀತಿಯಲ್ಲಿ ನ್ಯಾಯ ಒದಗಿಸುತ್ತೇವೆ. ಇನ್ನು ಮಡಿವಾಳ ಸಮುದಾಯದ ಶ್ರೀಗಳು ಮಾತನಾಡಿ ನಮ್ಮ ಸಮುದಾಯಕ್ಕೆ ಹಾಗೂ ಮಠಕ್ಕೆ ನೀಡಿದ ಎಲ್ಲ ಅನುದಾನವನ್ನು ಸರ್ಕಾರ ಹಿಂಪಡೆದು ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿ. ಇದು ಸಮುದಾಯದ ವಿನಮ್ರ ಮನವಿಯೇ ವಿನಃ ಆಗ್ರಹವಲ್ಲ ಎಂದು ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕೋರಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಶಾಸಕರಾದ ಜಿ.ಎಸ್. ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಕೆ. ಪೂರ್ಣಿಮಾ ಶ್ರೀನಿವಾಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.