ಚಿತ್ರದುರ್ಗದಲ್ಲಿ ಕಾಂಗ್ರೆಸ್ ಬಂಡಾಯಕ್ಕೆ ನೀರಸ ಪ್ರತಿಕ್ರಿಯೆ
ಚಿತ್ರದುರ್ಗ, ಮಾ. 19 : ಮಾದಿಗ ಯುವ ಸೇನೆ ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಲೋಕಸಭೆ ಚುನಾವಣೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿ ಮಂಗಳವಾರ ಕರೆ ನೀಡಿದ್ದ ಚಿತ್ರದುರ್ಗ ಬಂದ್ ವಿಫಲವಾಗಿದೆ. ಪ್ರತಿಭಟನೆ ನಡೆಸಲು ಮುಂದಾಗಿದ್ದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರೆ, ಜನಜೀವನ ಎಂದಿನಂತೆ ಇತ್ತು. ಅಭ್ಯರ್ಥಿ ಚಂದ್ರಪ್ಪ ವಿರುದ್ಧ ಬಂಡಾಯದ ಕಹಳೆ ಊದಲು ಸಜ್ಜಾಗಿದ್ದವರಿಗೆ ನಿರಾಸೆಯಾಯಿತು.
ಕಾಂಗ್ರೆಸ್ ಚಿತ್ರದುರ್ಗ ಕ್ಷೇತ್ರದಲ್ಲಿ ಬಿ.ಎನ್. ಚಂದ್ರಪ್ಪರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಆದರೆ, ಅವರು ಜಿಲ್ಲೆಯವರಲ್ಲ. ಜಿಲ್ಲೆಯ ನಾಯಕರಾದ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ಸೇರಿದಂತೆ ಬೇರೆ ನಾಯಕರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿ ಮಾದಿಗ ಯವ ಸೇನೆ ಜಿಲ್ಲೆಯ ಬಂದ್ ಗೆ ಕರೆ ನೀಡಿತ್ತು. ಆದರೆ, ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯದೆ ಬಂದ್ ವಿಫಲವಾಯಿತು.
ಆದರೆ,
ಚುನಾವಣೆ
ನೀತಿ
ಸಂಹಿತೆ
ಜಾರಿಯಲ್ಲಿರುವ
ಕಾರಣ
ಜಿಲ್ಲಾ
ಕಾಂಗ್ರೆಸ್
ಕಚೇರಿ
ಬಳಿ
ಪ್ರತಿಭಟನೆ
ನಡೆಸಲು
ಮಾದಿಗ
ಯುವ
ಸೇನೆ
ಕಾರ್ಯಕರ್ತರಿಗೆ
ಪೊಲೀಸರು
ಅವಕಾಶ
ನೀಡಲಿಲ್ಲ.
ಜೆ.ಜೆ.ಹಟ್ಟಿ
ತಿಪ್ಪೇಸ್ವಾಮಿ
ಬೆಂಬಲಿಗರು
ಹಾಗೂ
ಮಾದಿಗ
ಯುವ
ಸೇನೆಯ
ಕೆಲವು
ಕಾರ್ಯಕರ್ತರಿಗೆ
ಒಂದು
ಗಂಟೆ
ಶಾಂತಿಯುತ
ಪ್ರತಿಭಟನೆಗೆ
ಅವಕಾಶ
ನೀಡಲಾಯಿತು.[ಚಿತ್ರದುರ್ಗಕ್ಕೆ
ಬಿ.ಎಸ್.ಚಂದ್ರಪ್ಪ
ಅಭ್ಯರ್ಥಿ]
ಪ್ರತಿಭಟನಾ ಸ್ಥಳದಲ್ಲಿ ಅವರು ಗದ್ದಲ ಆರಂಭಿಸಿ, ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ ಕೂಗಲು ಆರಂಭಿಸಿದರು. ಆದ್ದರಿಂದ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು. ನಗರದಲ್ಲಿ ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿದ್ದವು. ಬೆಳಗ್ಗೆ ಅಂಗಡಿಗಳನ್ನು ಮುಚ್ಚಿಸಲು ಬಂದ ಕಾರ್ಯಕರ್ತರನ್ನು ಪೊಲೀಸರು ತಡೆದರು. [ಬಿರುಸಿನ ಮತಯಾಚನೆ ಚಿತ್ರಗಳು]
ಕ್ಷೇತ್ರದ ಟಿಕೆಟ್ ಸ್ಥಳೀಯರಿಗೆ ಕೈ ತಪ್ಪಲು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ಹಾಗೂ ಅಭ್ಯರ್ಥಿ ಚಂದ್ರಪ್ಪ ಅವರು ಕಾರಣ ಎಂದು ಆರೋಪಿಸಿದ ಪ್ರತಿಭಟನಾಕಾರರು ಇಬ್ಬರು ನಾಯಕರ ವಿರುದ್ಧ ಧಿಕ್ಕಾರ ಕೂಗಿದರು. ಸ್ಥಳೀಯರಾದ ಜೆ.ಜೆ. ಹಟ್ಟಿ ತಿಪ್ಪೇಸ್ವಾಮಿಗೆ ಟಿಕೆಟ್ ನೀಡದಿದ್ದರೆ ಚಂದ್ರಪ್ಪ ಅವರನ್ನು ನಾವು ಬೆಂಬಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಅಂದಹಾಗೆ ಕ್ಷೇತ್ರದಲ್ಲಿ ಬಿಜೆಪಿ ಹಾಲಿ ಸಂಸದ ಜನಾರ್ಧನ ಸ್ವಾಮಿ ಅವರಿಗೆ ಟಿಕೆಟ್ ನೀಡಿದೆ. ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಗೂಳಿಹಳ್ಳಿ ಶೇಖರ್ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ಎನ್. ಚಂದ್ರಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ.