ತರೀಕೆರೆ; ಕಳಪೆ ಗುಣಮಟ್ಟದ ಆಹಾರ ಸೇವನೆ, ಮೊರಾರ್ಜಿ ವಸತಿ ಶಾಲೆಯ 26 ವಿದ್ಯಾರ್ಥಿನಿಯರು ಅಸ್ವಸ್ಥ
ಚಿಕ್ಕಮಗಳೂರು, ನವೆಂಬರ್, 19: ಕಳಪೆ ಗುಣಮಟ್ಟದ ಪಡಿತರದಿಂದ ತಯಾರಿಸಿದ ಆಹಾರ ಸೇವಿಸಿ ಮೊರಾರ್ಜಿ ವಸತಿ ಶಾಲೆಯ 26 ವಿದ್ಯಾರ್ಥಿನಿಯರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ತರೀಕೆರೆಯಲ್ಲಿ ನಡೆದಿದೆ.
ತರೀಕೆರೆ ಪಟ್ಟಣದಲ್ಲಿರುವ ಮೊರಾರ್ಜಿ ದೇಸಾಯಿ ವಸತಿಯ ಸಿಬ್ಬಂದಿ ಶುಕ್ರವಾರ ರಾತ್ರಿ ಕಳಪೆ ಗುಣಮಟ್ಟದ ಆಹಾರ ಸಾಮಗ್ರಿಗಳಿಂದ ಅಡುಗೆ ತಯಾರಿಸಿದ್ದಾರೆ. ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ ಈ ಅಡುಗೆಯನ್ನು ನೀಡಲಾಗಿದ್ದು, ರಾತ್ರಿ ಊಟ ಮಾಡಿದ ವಿದ್ಯಾರ್ಥಿನಿಯರಲ್ಲಿ ವಾಂತಿ, ಬೇಧಿ ಕಾಣಿಸಿಕೊಂಡಿದೆ. ಈ ಪೈಕಿ ಸುಮಾರು 26 ವಿದ್ಯಾರ್ಥಿನಿಯರು ವಾಂತಿ ಬೇಧಿಯಿಂದಾಗಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾದ 26 ವಿದ್ಯಾರ್ಥಿನಿಯರನ್ನು ಕೂಡಲೇ ಪಟ್ಟಣದ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಪಡೆದ ವಿದ್ಯಾರ್ಥಿನಿಯರು ಸದ್ಯ ಚೇತರಿಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ.
ವಿದ್ಯಾರ್ಥಿಗಳ ಆರೋಗ್ಯ ವಿಚಾರಣೆ:
ಕಳಪೆ
ಗುಣಮಟ್ಟದ
ಆಹಾರ
ಸೇವಿಸಿ
ವಿದ್ಯಾರ್ಥಿಗಳು
ಅಸ್ವಸ್ಥಗೊಂಡ
ವಿಷಯ
ತಿಳಿಯುತ್ತಿದ್ದಂತೆ
ಶಾಸಕ
ಡಿ.ಎಸ್.ಸುರೇಶ್
ಹಾಗೂ
ಸಂಬಂಧಿಸಿದ
ಇಲಾಖಾಧಿಕಾರಿಗಳು
ಆಸ್ಪತ್ರೆಗೆ
ಭೇಟಿ
ನೀಡಿದರು.
ಇದೇ
ವೇಳೆ
ವಿದ್ಯಾರ್ಥಿನಿಯರ
ಆರೋಗ್ಯ
ವಿಚಾರಿಸಿ
ಮಾಹಿತಿ
ಪಡೆದುಕೊಂಡರು.
ಕಳಪೆ
ಗುಣಮಟ್ಟದ
ಆಹಾರ
ಸಾಮಗ್ರಿಗಳನ್ನು
ಅಡುಗೆಗೆ
ಬಳಸಿರುವ
ಹಾಗೂ
ಸಾಮಗ್ರಿ
ಪೂರೈಕೆ
ಮಾಡಿದವರ
ವಿರುದ್ಧ
ಸೂಕ್ತ
ಕ್ರಮ
ಕೈಗೊಳ್ಳಬೇಕು
ಎಂದು
ಶಾಸಕ
ಸುರೇಶ್
ಸಂಬಂಧಿಸಿದ
ಇಲಾಖಾಧಿಕಾರಿಗಳಿಗೆ
ಸೂಚಿಸಿದರು.
ನಂತರ
ವಿದ್ಯಾರ್ಥಿನಿಯರ
ಪೋಷಕರು
ಆಸ್ಪತ್ರೆಗೆ
ಭೇಟಿ
ನೀಡಿ
ಶಾಸಕರ
ಎದುರು
ಆತಂಕ
ವ್ಯಕ್ತಪಡಿಸಿದರು.
ಇಂತಹ
ಘಟನೆ
ಮತ್ತೆ
ಮರುಕಳಿಸಿದಂತೆ
ಎಚ್ಚರಿಕೆ
ವಹಿಸಲಾಗುವುದು.
ಕಳಪೆ
ಆಹಾರ
ಪೂರೈಕೆ
ಮಾಡಿದ
ವಸತಿ
ನಿಲಯದ
ಸಿಬ್ಬಂದಿ
ವಿರುದ್ಧ
ಕ್ರಮ
ಜರುಗಿಸುವ
ಭರವಸೆಯನ್ನು
ನೀಡಿದರು.
ಗಾಯತ್ರಿ ಶಾಂತೇಗೌಡ ಮನೆ ಮೇಲೆ ಐಟಿ ದಾಳಿ: ಸಿ.ಟಿ ರವಿ ಹುನ್ನಾರ ಎಂದ ಕಾಂಗ್ರೆಸ್ ಕಾರ್ಯಕರ್ತರು
ಅಧಿಕಾರಿಗಳ ನಿರ್ಲಕ್ಷ್ಯ, ವಿದ್ಯಾರ್ಥಿಗಳಿಗೆ ಸಂಕಷ್ಟ
ಸಾಮಾನ್ಯವಾಗಿ ಇಂತಹ ಪ್ರಕರಣಗಳು ಸಂಭವಿಸುತ್ತಲೇ ಇರುತ್ತವೆ. ಹಾಸ್ಟೆಲ್ಗಳಲ್ಲಿ ಸರಿಯಾದ ಊಟದ ವ್ಯವಸ್ಥೆ ಇಲ್ಲದೇ ಅದೆಷ್ಟೋ ವಿದ್ಯಾರ್ಥಿಗಳು ಹೊರಗಡೆ ಊಟ ಮಾಡುತ್ತಾರೆ. ಇನ್ನು ಕೆಲವು ಹಾಸ್ಟೆಲ್ಗಳಲ್ಲಿ ಊಟ ಇದ್ದರೂ ಕೂಡ ಅದನ್ನು ತಿನ್ನುವುದಕ್ಕೆ ಆಗದೇ ವಿದ್ಯಾರ್ಥಿಗಳು ಪರದಾಡುತ್ತಾರೆ. ಸರ್ಕಾರದಿಂದ ಉತ್ತಮ ಗುಣಮಟ್ಟದ ದಾಸ್ತಾನು ಒದಗಿಸಿದರೂ ಕೂಡ ಹಾಸ್ಟೆಲ್ಗಳಲ್ಲಿ ಮಾತ್ರ ತಮಗಿಷ್ಟ ಬಂದಂತೆ ಅಡುಗೆಯನ್ನು ಬೇಯಿಸಿ ಹಾಕುತ್ತಾರೆ ಎಂಬ ಆರೋಪವಿದೆ. ಇದರಿಂದ ವಿದ್ಯಾರ್ಥಿಗಳು ಪ್ರತಿನಿತ್ಯ ಸಮಸ್ಯೆ ಅನುಭವಿಸುವಂತಾಗಿದೆ. ಇಷ್ಟೆಲ್ಲ ನಡೆಯುತ್ತಿದ್ದರೂ ಅಧಿಕಾರಿಗಳು ಅಡುಗೆ ಸಿಬ್ಬಂದಿ ಹಾಗೂ ವಾರ್ಡನ್ಗಳ ವಿರುದ್ಧ ಕ್ರಮ ಜರುಗಿಸದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.