ರಜನಿ ಸಾರ್ ಬಿಜೆಪಿ ಯಾವಾಗ ಸೇರ್ತೀರಿ? ನೋ ಕಾಮೆಂಟ್ಸ್!
ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಕಾಮೆಂಟ್ ಮಾಡಿ, ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳ ಹೃದಯ ಬಡಿತದ ತಾಳ ತಪ್ಪುವಂತೆ ಮಾಡಿದ್ದಾರೆ. ರಾಜಕೀಯ ಸೇರುವ ಸಂಗತಿಯನ್ನು ಅವರು ಸಾರಾಸಗಟಾಗಿ ಅಲ್ಲಗಳೆಯುತ್ತಲೂ ಇಲ್ಲ, ಒಪ್ಪಿಕೊಳ್ಳುತ್ತಲೂ ಇಲ್ಲ.
ಚೆನ್ನೈ, ಮೇ 17 : ಸಾರ್ ಸಾರ್ ಸಾರ್ ರಾಜಕೀಯಕ್ಕೆ ಯಾವಾಗ ಬರ್ತೀರಾ? ಬಿಜೆಪಿ ಪಕ್ಷ ಸೇರ್ತೀರಾ ಅಥವಾ ನೀವೇ ಹೊಸ ಪಕ್ಷ ಹುಟ್ಟುಹಾಕ್ತೀರಾ?
ನೋ ಕಾಮೆಂಟ್ಸ್!
ಏನಿದರ ಅರ್ಥ? ಐದರ್ ಬರ್ತೀನಿ ಅಂತ ಹೇಳ್ಬೇಕು, ಆರ್ ಬರಲ್ಲ ಅಂತಾನಾದ್ರೂ ಹೇಳ್ಬೇಕು! ನೋ ಕಾಮೆಂಟ್ಸ್ ಅಂದ್ರೆ ಸಹಸ್ರಾರು ಕೋಟಿ ಅಭಿಮಾನಿಗಳು ಏನೆಂದು ತಿಳಿದುಕೊಳ್ಳಬೇಕು, ರಾಜಕೀಯ ಪಂಡಿತರು, ಮಾಧ್ಯಮದವರು ಏನೆಂದು ವಿಶ್ಲೇಷಣೆ ಮಾಡಬೇಕು?[ಬೆಂಗಳೂರಿನ ಮರಾಠಿಗ ರಜನಿಗೆ ರಾಜಕೀಯದಲ್ಲಿ ಸೋಲು ಗ್ಯಾರಂಟಿ: ಸ್ವಾಮಿ]
ಹೀಗೆಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಕಾಮೆಂಟ್ ಮಾಡಿ, ಸ್ಟೈಲ್ ಕಿಂಗ್ ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳ ಹೃದಯ ಬಡಿತದ ತಾಳ ತಪ್ಪುವಂತೆ ಮಾಡಿದ್ದಾರೆ. ರಾಜಕೀಯ ಸೇರುವ ಸಂಗತಿಯನ್ನು ಅವರು ಸಾರಾಸಗಟಾಗಿ ಅಲ್ಲಗಳೆಯುತ್ತಲೂ ಇಲ್ಲ, ಒಪ್ಪಿಕೊಳ್ಳುತ್ತಲೂ ಇಲ್ಲ.
ಕಳೆದ 27 ವರ್ಷಗಳಿಂದ ರಜನಿಕಾಂತ್ ರಾಜಕೀಯ ಸೇರುವ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಹಿಂದೊಮ್ಮೆ ಅವರು ರಾಜಕೀಯ ಪಕ್ಷದ ವಿರುದ್ಧವಾಗಿ ಮಾತನಾಡಿದ್ದರು. ಆಗ ಜಯಲಲಿತಾ ಸರಕಾರ ಹೇಳಹೆಸರಿಲ್ಲದಂತೆ ಸೋತುಹೋಗಿತ್ತು. ಆದರೆ, ಹಾಗೆ ಮಾತಾಡಿದ್ದು ನನಗೆ ಇಂದೂ ವಿಷಾದವಿದೆ ಎಂದು ರಜನಿ ಈಗಲೂ ವಿಷಾದ ವ್ಯಕ್ತಪಡಿಸುತ್ತಾರೆ. [ಹಾಜಿ ಮಸ್ತಾನ್ ಕುರಿತು ಚಿತ್ರ : ರಜನಿಗೇ ಬೆದರಿಕೆ ಪತ್ರ]
ಚೆನ್ನೈನ ಕೋಡಂಬಾಕ್ಕಂನಲ್ಲಿರುವ ರಾಘವೇಂದ್ರ ಹಾಲ್ ನಲ್ಲಿ ಬುಧವಾರ ಅವರು ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿದಾಗ ಕೂಡ ಇದೇ ಪ್ರಶ್ನೆ ಎದುರಾಗಿದೆ. ಬಿಜೆಪಿಯನ್ನು ನೀವು ಸೇರುತ್ತೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ 'ನೋ ಕಾಮೆಂಟ್ಸ್' ಅಂತ ಮಾತ್ರ ಉತ್ತರಿಸಿದ್ದಾರೆ ರಜನಿ. ನೋ ಕಾಮೆಂಟ್ಸ್ ಅನ್ನು ಸ್ವಲ್ಪ ಬಿಡಿಸಿ ಹೇಳಿ ರಜನಿಕಾಂತ್!

ಹಣ ಮಾಡುವವರಿಗೆ ನನ್ನ ಬಳಿ ಅವಕಾಶವಿಲ್ಲ

ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ

ರಜನಿ ರಾಜಕೀಯಕ್ಕೆ ಬರುವುದು ಜೋಕ್
"ರಜನಿಕಾಂತ್ ಅವರಿಗೆ ಯಾವುದೇ ತತ್ವಸಿದ್ಧಾಂತಗಳಿಲ್ಲ. ಅವರನ್ನು ಹಿಂಬಾಲಿಸುವುದೆಂದರೆ ಧರ್ಮಗುರುವನ್ನು ಹಿಂಬಾಲಿಸಿದಂತೆ. ಇದು ಒಳ್ಳೆಯದಲ್ಲ. ತಮಿಳುನಾಡಿನಲ್ಲಿ ಅವರು ರಾಜಕಾರಣಿಯಾಗುವುದು ಅತ್ಲಾಗಿರಲಿ, ಅವರು ತಮಿಳರೇ ಅಲ್ಲ. ಅವರು ಬೆಂಗಳೂರಿನ ಮರಾಠಿಗರು. ರಾಜಕೀಯಕ್ಕೆ ಬಂದರೆ ಸೋಲು ಗ್ಯಾರಂಟಿ" ಎಂದು ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯವಾಡಿದ್ದಾರೆ.

ರಜನಿ ಒಂದು ಮಾತು ಹೇಳಿದ್ರೆ
ಅವರು ತಮಿಳರೇ ಇರಲಿ, ಮರಾಠಿಗನೇ ಇರಲಿ, ಕನ್ನಡಿಗ ಅಂತಾದರೂ ಪರಿಗಣಿಸಲಿ, ರಜನಿ ರಜನಿಯೇ. ರಜನಿಕಾಂತ್ ಒಂದು ಮಾತು ಆಡಿದರೆ ತಮಿಳುನಾಡಿನಲ್ಲಿ ಚಂಡಮಾರುತ ಬೀಸುತ್ತದೆ, ರಾಜಕೀಯ ಚಿತ್ರಣವೇ ಬದಲಾಗುತ್ತದೆ. ಈ ಕಾರಣಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಕೂಡ ಲೋಕಸಭೆಗೆ ಮುಂಚೆ ಅವರ ಬೆಂಬಲ ಯಾಚಿಸಿದ್ದರು. ಬಿಜೆಪಿ ಸೇರಬೇಕೆಂದು ಕೇಳಿಕೊಂಡಿದ್ದರು.

ಮಿಲಿಯನ್ ಡಾಲರ್ ಪ್ರಶ್ನೆ
ಚಿತ್ರರಂಗದಲ್ಲಿ ಸಾಕಷ್ಟು ಯಶಸ್ಸು ನೋಡಿರುವ, ಆರೋಗ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಏರುಪೇರುಗಳನ್ನು ಕಂಡಿರುವ ರಜನಿಗೆ ಈಗ 66 ವಯಸ್ಸು. ಅವರು ರಾಜಕೀಯವೆಂಬ ಕೊಚ್ಚೆಯಲ್ಲಿ ಎಂದೂ ಕಾಲಿಟ್ಟವರಲ್ಲ. ಹೀಗಿರುವಾಗ, ರಾಜಕೀಯ ಸೇರುತ್ತಾರಾ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಬೆಂಗಳೂರಿನಲ್ಲಿರುವ ಅವರ ಆಪ್ತ ಸ್ನೇಹಿತ ರಾವ್ ಬಹಾದ್ದೂರ್ ಪ್ರಕಾರ, ರಜನಿ ರಾಜಕೀಯಕ್ಕೆ ಬಂದೇ ಬರುತ್ತಾರೆ. ಬಹುಶಃ ಅದು ನಿಜವಾಗುವ ದಿನ ಹತ್ತಿರವಿದೆಯಾ? [ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರಿಸುವರೆ ರಜನಿ?]
{promotion-urls}
-
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು












Click it and Unblock the Notifications