'ಕಲೈನಾರ್' ಕರುಣಾನಿಧಿ ಎಂದು ಕರೆಯುವುದೇಕೆ? ಕಲೈನಾರ್ ಎಂದರೇನು?
Recommended Video

ಚೆನ್ನೈ, ಆಗಸ್ಟ್ 08: ಡಿಎಂಕೆ ಪಕ್ಷ ಮಾತ್ರವಲ್ಲ ಇಡೀಯ ತಮಿಳುನಾಡು ಕರುಣಾನಿಧಿ ಅವರನ್ನು ಕರೆಯುವುದು 'ಕಲೈನಾರ್' ಕರುಣಾನಿಧಿ ಎಂದು. ಹಾಗಿದ್ದರೆ ಈ ಪದದ ಅರ್ಥವೇನು?
ಕಲೈನಾರ್ ಎಂದರೆ 'ಕಲೆಗಳ ವಿದ್ವಾಂಸ' ಅಥವಾ ಕಲೆಗಳನ್ನು ಕರಗತ ಮಾಡಿಕೊಂಡವನು ಎಂಬ ಅರ್ಥ ಇದೆ. ಇಂಗ್ಲೀಷಿನಲ್ಲಿ Kalaignar ಎಂದು ಬರೆಯಬೇಕಾದರೂ ತಮಿಳಿನಲ್ಲಿ ಉಚ್ಛಾರಣೆ 'ಕಲೈನಾರ್' ಎಂದೇ ಆಗುತ್ತದೆ.
ಕರುಣಾನಿಧಿ ರಾಜಕಾರಣಿಯ ಜೊತೆ-ಜೊತೆಗೆ ಚಿತ್ರಕರ್ಮಿಯಾಗಿಯೂ ಗುರುತಿಸಿಕೊಂಡವರು. ಅವರು ತಮ್ಮ 20ನೇಯ ವಯಸ್ಸಿನಲ್ಲಿಯೇ ಸಿನಿಮಾಕ್ಕೆ ಚಿತ್ರಕತೆ ಸಂಭಾಷಣೆ ಬರೆದು ಪ್ರವರ್ಧಮಾನಕ್ಕೆ ಬಂದವರು. ಅವರ ಬರೆದ ಮೊದಲ ಚಿತ್ರಕತೆ ರಾಜಕುಮಾರಿ ಹೆಸರಿನಲ್ಲಿ ಸಿನಿಮಾವಾಗಿದ್ದು 1947ರಲ್ಲಿ.

ತಮ್ಮ ಅತ್ಯುತ್ತಮ ಚಿತ್ರಕತೆಗಳು, ಸಂಭಾಷಣೆಗಳಿಂದ ತಮಿಳು ಸಿನಿಮಾವನ್ನು ಅಪ್ರತಿಮ ಎತ್ತರಕ್ಕೆ ಬೆಳೆಸಿದ ಶ್ರೇಯ ಕರುಣಾನಿಧಿ ಅವರಿಗೂ ಸಲ್ಲಬೇಕು. ಅವರಿಗಿದ್ದ ಕಲೆಯ ಬಗ್ಗೆ ಪ್ರೀತಿಯೇ ಅವರನ್ನು ಅಭಿಮಾನಿಗಳು 'ಕಲೈನಾರ್' ಎಂದು ಕರೆಯುವಂತೆ ಪ್ರೇರೇಪಿಸಿತು.
ತಮಿಳು ಸಿನಿಮಾಕ್ಕೆ ಹೊಸ ದಿಕ್ಕು ನೀಡಿದವರಲ್ಲಿ ಕರುಣಾನಿಧಿ ಅತ್ಯಂತ ಪ್ರಮುಖರು, ಪೌರಾಣಿಕ ಕತೆಗಳೇ ಸಿನಿಮಾ ಆಗುತ್ತಿದ್ದ ಕಾಲದಲ್ಲಿ ಸಿನಿಮಾಕ್ಕೆ ರಾಜಕೀಯ, ಸಾಮಾಜಿಕ ಅಂಶಗಳನ್ನು ತಂದ ಶ್ರೇಯ ಕರುಣಾನಿಧಿ ಅವರಿಗೆ ಸಲ್ಲಬೇಕು. ಸಿನಿಮಾ ಮೂಲಕ ಜನರ ಅಭಿಪ್ರಾಯ ರೂಪಿಸಿದ, ರಾಜಕೀಯ ಚಿಂತನೆ, ಸಾಮಾಜಿಕ ಚಿಂತನೆಗೆ ಹಚ್ಚಿದವರು ಕರುಣಾನಿಧಿ.
ತಮ್ಮ ಜೀವತಾವಧಿಯಲ್ಲಿ ಚಿತ್ರರಂಗದವರೊಂದಿಗೆ ಅತ್ಯುತ್ತಮ ಸಂಬಂಧವನ್ನು ಕರುಣಾನಿಧಿ ಹೊಂದಿದ್ದರು. ಕಲೆಯಲ್ಲಿ ಅವರಿಗೆ ಅಪಾರ ಆಸಕ್ತಿಯಿತ್ತು, ಅಲ್ಲದೆ ಚಿತ್ರಕತೆ, ಸಾಹಿತ್ಯ, ಸಂಭಾಷಣೆಗಳನ್ನು ಬರೆಯುವುದರಲ್ಲಿ ಅವರದ್ದು ಪಳಗಿದ ಕೈ ಹಾಗಾಗಿ ಅವರು ತಮಿಳುನಾಡಿದ 'ಕಲೈನಾರ್'.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ!












Click it and Unblock the Notifications