ಸೂಪರ್ ಸ್ಟಾರ್ 'ರಜನಿ' ನಿರ್ಮಾಪಕರ 'ಡಾರ್ಲಿಂಗ್' ಏಕೆ?
ನಿರ್ಮಾಪಕರನ್ನು 'ಅನ್ನದಾತ' ಎಂದು ಕರೆಯುವುದು ಉತ್ಪ್ರೇಕ್ಷೆಯಲ್ಲ, ನಿಜ ಎಂಬುದನ್ನು ಮತ್ತೊಮ್ಮೆ ರಜನಿ ಸಾಬೀತು ಮಾಡಿದ್ದಾರೆ. ರಜನಿ ಗಾಯಗೊಂಡ ಸುದ್ದಿ ತಿಳಿದಿರಬಹುದು. ಆದರೆ, ವಿಶ್ರಾಂತಿ ಪಡೆಯದೆ ತಕ್ಷಣವೇ ರಜನಿ ಶೂಟಿಂಗ್ ಗೆ ಮರಳಿದ್ದಾರೆ.
ಚೆನ್ನೈ, ಡಿಸೆಂಬರ್ 04: ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಮೇರು ನಟ ಎಂದು ಕರೆಯುವುದು ಹೊಗಳಿಕೆಯ ಮಾತಲ್ಲ. ಅದು ಅವರ ನಡವಳಿಕೆಯಿಂದ ಬಂದ ಬಳುವಳಿ. ನಿರ್ಮಾಪಕರನ್ನು 'ಅನ್ನದಾತ' ಎಂದು ಕರೆಯುವುದು ಉತ್ಪ್ರೇಕ್ಷೆಯಲ್ಲ, ನಿಜ ಎಂಬುದನ್ನು ಮತ್ತೊಮ್ಮೆ ರಜನಿ ಸಾಬೀತು ಮಾಡಿದ್ದಾರೆ. ರಜನಿ ಗಾಯಗೊಂಡ ಸುದ್ದಿ ತಿಳಿದಿರಬಹುದು. ಆದರೆ, ವಿಶ್ರಾಂತಿ ಪಡೆಯದೆ ತಕ್ಷಣವೇ ರಜನಿ ಶೂಟಿಂಗ್ ಗೆ ಮರಳಿದ್ದಾರೆ.
ನಿರ್ದೇಶಕ ಶಂಕರ್ ಅವರ 2.0 (ರೋಬೊ ಭಾಗ 2) ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ರಜನಿ ಅವರು ಆಯತಪ್ಪಿ ಬಿದ್ದು ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರು. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸೂಕ್ತ ಚಿಕಿತ್ಸೆ ಪಡೆದುಕೊಂಡ ನಂತರ ನಡೀರಿ ಶೂಟಿಂಗ್ ಮಾಡೋಣ ಎಂದು ರಜನಿ ಹೇಳಿದಾಗ ಎಲ್ಲರೂ ಅಚ್ಚರಿಯಿಂದ ರಜನಿ ಅವರನ್ನು ನೋಡುತ್ತಿದ್ದರಷ್ಟೇ ಹೊರತೂ ಮಾತನಾಡಲು ಬಾಯಿ ಹೊರಡಲಿಲ್ಲ.

ರಜನಿ ಹೇಳಿಕ ಲೆಕ್ಕಾಚಾರದ ಬದುಕು: ನನ್ನೊಬ್ಬ ನಿಂದ ಒಂದು ದಿನ ಅಥವಾ ಒಂದು ಗಂಟೆ ಶೂಟಿಂಗ್ ನಿಂತರೇ ಅದು ನಿರ್ಮಾಪಕರಿಗಷ್ಟೇ ಅಲ್ಲ ಸಾವಿರಾರು ಜನಕ್ಕೆ ತೊಂದರೆಯಾಗಬಾರದು ಎಂದ ರಜನಿ ನಿಗದಿಯಾದಂತೆ ನೈಟ್ ಶೆಡ್ಯೂಲ್ ಮುಗಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಸೂಪರ್ ಸ್ಟಾರ್ ರಜನಿ ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳು ಭಾರಿ ಕಾಳಜಿಯಿಂದ ಗಮನಿಸುತ್ತಿರುವುದರಿಂದ ರಜನಿ ಗಾಯಗೊಂಡ ಸುದ್ದಿ ಬಹುಬೇಗ ಎಲ್ಲೆಡೆ ಹರಡಿತ್ತು. ಆದರೆ, ರಜನಿ ಅವರ ತಂಡ, ರಜನಿ ಅವರು ಶೂಟಿಂಗ್ ಗೆ ಮರಳಿರುವ ಸುದ್ದಿ ನೀಡಿ, ಆತಂಕ ನಿವಾರಿಸಿದರು.
https://t.co/LTfCB3Yu6w @superstarrajini latest video from @LycaProductions @shankarshanmugh directorial @2Point0movie location
— RIAZ K AHMED (@RIAZtheboss) December 3, 2016
ಅಕ್ಷಯ್ ಕುಮಾರ್, ಅಮಿ ಜಾಕ್ಸನ್ ಕೂಡಾ ಮುಖ್ಯಪಾತ್ರಗಳಲ್ಲಿರುವ ಈ ಚಿತ್ರ ದೀಪಾವಳಿ 2017ರ ವೇಳೆಗೆ ತೆರೆ ಕಾಣುವ ಸಾಧ್ಯತೆಯಿದೆ. ಸುಭಾಸ್ಕರನ್ ಅಲ್ಲಿರಾಜ ಹಾಗೂ ಲಂಡನ್ ಮೂಲದ ಲೈಕಾ ಪ್ರೊಡಕ್ಷನವರು ಈ ಚಿತ್ರಕ್ಕೆ ಹಣ ತೊಡಗಿಸಿದ್ದಾರೆ.
-
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್












Click it and Unblock the Notifications