Get Updates
Get notified of breaking news, exclusive insights, and must-see stories!

ಮೋದಿ ಬಿಟ್ಟ ಬಾಣಕ್ಕೆ ತಮಿಳುನಾಡಿನ ರಾಜಕಾರಣದಲ್ಲಿ ಬಿದ್ದ ಹಕ್ಕಿಗಳೆಷ್ಟು!

Recommended Video

      ನರೇಂದ್ರ ಮೋದಿ ಎಂ ಕರುಣಾನಿಧಿ ಭೇಟಿ | ಇದರ ಹಿಂದಿನ ಉದ್ದೇಶ? | Oneindia Kannada

      ರಾಜಕಾರಣದ ಮಗ್ಗುಲು ಹೇಗೆಲ್ಲ ಬದಲಾಗುತ್ತವೆ ಅನ್ನೋದಿಕ್ಕೆ ಪ್ರಧಾನಿ ಮೋದಿಯ ಚೆನ್ನೈ ಭೇಟಿ ಒಂದು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಇನ್ನೇನು ನಾಳೆ ಬೆಳಗಾದರೆ ಡಿಎಂಕೆ ರಸ್ತೆಗಿಳಿದು ಅಪನಗದೀಕರಣದ ವಿರುದ್ಧ ಹೋರಾಟ ನಡೆಸಬೇಕಿತ್ತು. ಆದರೆ ಈಗ ಪ್ರತಿಭಟನೆಯಿಂದ ಹಿಂದೆ ಸರಿದಿದೆ.

      ಚೆನ್ನೈನಲ್ಲಿ ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರನ್ನು ಭೇಟಿ ಮಾಡಿದ ಮೋದಿ ನಡೆ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಅದೂ 2ಜಿ ಹಗರಣದ ತೀರ್ಪಿನ ದಿನಾಂಕ ಕೋರ್ಟ್ ನಿಂದ ಪ್ರಕಟವಾಗಲು ಒಂದು ದಿನ ಬಾಕಿ ಇರುವಂತೆ ಆದ ಈ ಭೇಟಿ ಕುತೂಹಲಕ್ಕೆ ಕಾರಣವಾಗಿತ್ತು.

      ಆದರೆ, ಕೋರ್ಟ್ ತೀರ್ಪಿನ ದಿನಾಂಕ ಪ್ರಕಟ ಆಗುವುದಕ್ಕೂ, ಮೋದಿ ಭೇಟಿಗೂ ಕಾಕತಾಳೀಯ ಸಂಬಂಧವೇ ಇರಬಹುದು. ರಾಜಕಾರಣದ ದೃಷ್ಟಿಯಿಂದ ಮಹತ್ವ ಪಡೆದದ್ದಂತೂ ದಿಟ. ಇದು ಕೇವಲ ಔಪಚಾರಿಕ ಭೇಟಿ. ಇಲ್ಲಿ ರಾಜಕೀಯ ಏನೂ ಇಲ್ಲ ಎಂಬ ಮಾತು ಕೇಳಿಬರುತ್ತಿದೆಯಾದರೂ ಇಬ್ಬರು ಪಳಗಿದ ರಾಜಕಾರಣಿಗಳ ಭೇಟಿಯೇ ಹಲವು ವಿಷಯವನ್ನು ಅರ್ಥ ಮಾಡಿಸುತ್ತದೆ.

      ತಮಿಳುನಾಡಿನ ರಾಜಕೀಯ ಹೈಡ್ರಾಮಾಗಳು ದೆಹಲಿಯಿಂದ ಅದೆಷ್ಟೋ ಸಾವಿರ ಕಿಲೋಮೀಟರ್ ದೂರದಲ್ಲಿ ನಡೆಯುತ್ತಿರಬಹುದು. ಆದರೆ ಅದನ್ನು ಕಿರು ಬೆರಳ ಇಶಾರೆಯಲ್ಲಿ ಆಡಿಸುತ್ತಿರುವುದು ಯಾರು ಎಂಬುದನ್ನು ತಿಳಿಯುವುದಕ್ಕೆ ತಲೆಗೆ ತೀರಾ ಕೆಲಸ ಕೊಡುವ ಅಗತ್ಯವಿಲ್ಲ. ಇಲ್ಲದಿದ್ದರೆ ತಮಿಳುನಾಡಿನ ರೈತರು ದೆಹಲಿಯಲ್ಲಿ ಪ್ರತಿಭಟನೆ ಕೈಗೊಂಡಾಗ ಕೊತಕೊತ ಕುದಿಯುತ್ತಿದ್ದ ಎಂ.ಕೆ.ಸ್ಟಾಲಿನ್ ತಣ್ಣಗಾಗಿದ್ದು ಸುಮ್ಮನಂತೂ ಅಲ್ಲ.

      ನಮ್ಮ ಮನೆಗೆ ಬಂದು ವಿಶ್ರಾಂತಿ ಪಡೆಯಿರಿ ಎಂದ ಪ್ರಧಾನಿ

      ನಮ್ಮ ಮನೆಗೆ ಬಂದು ವಿಶ್ರಾಂತಿ ಪಡೆಯಿರಿ ಎಂದ ಪ್ರಧಾನಿ

      ದೆಹಲಿಯಲ್ಲಿರುವ ನಮ್ಮ ಮನೆಗೆ ಬಂದು ವಿಶ್ರಾಂತಿ ಪಡೆಯಿರಿ ಎಂದು ಸ್ವತಃ ಪ್ರಧಾನಿ ಮೋದಿ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರಿಗೆ ಆಹ್ವಾನ ನೀಡಿದ್ದು ತೀರಾ ಅನಿರೀಕ್ಷಿತವಾಗಿತ್ತು. ಇನ್ನು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್ ಮತ್ತು ಮೋದಿ ಅವರ ಭೇಟಿ ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.

      ಕಾಂಗ್ರೆಸ್ ನ ಬಹುಕಾಲದ ದೋಸ್ತಿ ಡಿಎಂಕೆ

      ಕಾಂಗ್ರೆಸ್ ನ ಬಹುಕಾಲದ ದೋಸ್ತಿ ಡಿಎಂಕೆ

      ಅಪನಗದೀಕರಣದ ವಾರ್ಷಿಕೋತ್ಸವದ ವೇಳೆ ಡಿಎಂಕೆ ಪ್ರತಿಭಟನೆ ನಡೆಸಲು ಎಲ್ಲ ಸಿದ್ಧತೆ ನಡೆಸಿತ್ತು. ಆದರೆ ಮೋದಿ ಭೇಟಿ ನಂತರ ಡಿಎಂಕೆ ಪ್ರತಿಭಟನೆಯನ್ನು ಕೈ ಬಿಟ್ಟಿದೆ. ಇದೇ ವೇಳೆ ಎಐಎಡಿಎಂಕೆ ಸಚಿವರಲ್ಲಿ ಆತಂಕ ಸೃಷ್ಟಿಸಿದ್ದು, ಕಾಂಗ್ರೆಸ್ ನ ಬಹುಕಾಲದ ದೋಸ್ತಿ ಡಿಎಂಕೆ ತನ್ನ ಒಲವನ್ನು ಬಿಜೆಪಿ ಕಡೆಗೆ ತೋರಿದರೆ ಹೇಗೆ ಎಂಬ ಗುಮಾನಿಯೂ ಶುರುವಾಗಿದೆ.

      ಡಿಎಂಕೆ ಮುಖಂಡರು ಅಚ್ಚರಿಯಲ್ಲಿ

      ಡಿಎಂಕೆ ಮುಖಂಡರು ಅಚ್ಚರಿಯಲ್ಲಿ

      ಜಯಲಲಿತಾ ಅವರು ಇರುವವರೆಗೂ ಪ್ರಧಾನಿ ಮೋದಿ ಸ್ನೇಹ 'ಅಮ್ಮ'ನೊಂದಿಗೆ ಚೆನ್ನಾಗಿತ್ತು. ಪ್ರಧಾನಿ ಆದ ನಂತರ ಜಯಾ ಅವರನ್ನು ಭೇಟಿ ಮಾಡಿದ್ದ ಮೋದಿ, ಇದೇ ಮೊದಲ ಬಾರಿ ಕರುಣಾನಿಧಿ ಅವರನ್ನು ಭೇಟಿ ಮಾಡಿದ್ದು, ಅದರಲ್ಲೂ ತಮ್ಮ ಮನೆಗೆ ಕರುಣಾರನ್ನು ಆಹ್ವಾನ ಮಾಡಿದ್ದು ಡಿಎಂಕೆ ಮುಖಂಡರನ್ನೂ ಅಚ್ಚರಿಗೆ ಕೆಡವಿದೆ.

      ಕನಿಮೊಳಿ, ಸ್ಟಾಲಿನ್ ಭೇಟಿ

      ಕನಿಮೊಳಿ, ಸ್ಟಾಲಿನ್ ಭೇಟಿ

      ಮೋದಿ ಅವರು ಸ್ಟಾಲಿನ್ ಹಾಗೂ ಕನಿಮೊಳಿ ಇಬ್ಬರನ್ನೂ ಭೇಟಿ ಮಾಡಿದ್ದಾರೆ. ಈ ವೇಳೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಖಾತೆ ರಾಜ್ಯ ಸಚಿವ ಪೊನ್ ರಾಧಾಕೃಷ್ಣನ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷೆ ತಮಿಳಿಸೈ ಸೌಂದರ್ ರಾಜನ್ ಹಾಜರಿದ್ದರು. ಕರುಣಾನಿಧಿ ಅವರ ಕುಟುಂಬದ ಇತರ ಸದಸ್ಯರೂ ಇದ್ದರು.

      ಆಕ್ರೋಶ ತಮಣಿ ಮಾಡುವ ಯತ್ನ

      ಆಕ್ರೋಶ ತಮಣಿ ಮಾಡುವ ಯತ್ನ

      ತಮಿಳುನಾಡು ರಾಜಕಾರಣದಲ್ಲಿ ಬಿಜೆಪಿಯ ಛಾಪು ಮೂಡಿಸಲು ರೂಪಿಸುತ್ತಿರುವ ತಂತ್ರಗಾರಿಕೆಯಂತೆ ಕಾಣುವ ಈ ನಡೆಯು ಒಂದು ಕಡೆ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರನ್ನು ಭೇಟಿ ಮಾಡಿ, ಎಐಎಡಿಎಂಕೆಯಲ್ಲಿ ತಲ್ಲಣ ಹುಟ್ಟಿಸುತ್ತಿದ್ದರೆ, ಇನ್ನೊಂದು ಕಡೆ ತಮಿಳುನಾಡಿನಲ್ಲಿ ಬಿಜೆಪಿ ವಿರುದ್ಧ ಎದ್ದಿರುವ ಆಕ್ರೋಶ ತಮಣಿ ಮಾಡುವ ಪ್ರಯತ್ನದಂತೆಯೂ ಕಾಣುತ್ತಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+