ವಿಷ್ಣುವಿನ ಹನ್ನೊಂದನೇ ಅವತಾರ ಜಯಲಲಿತಾ ಎಂದ ಎಐಎಡಿಎಂಕೆ ಶಾಸಕ
ಚೆನ್ನೈ, ಜೂನ್ 15: ಜಯಲಲಿತಾ ವಿಷ್ಣುವಿನ ಹನ್ನೊಂದನೇ ಅವತಾರವಂತೆ. ಹೀಗೆ ಹೇಳಿರುವುದು ಎಐಎಡಿಎಂಕೆ ಶಾಸಕ ಮಾರಿಯಪ್ಪನ್ ಕೆನಡಿ. ಅದೂ ತಮಿಳುನಾಡಿನ ವಿಧಾನಸಭೆಯಲ್ಲಿ.
ಜಯಲಲಿತಾರಿಂದ ಪ್ರೇರಣೆ ಪಡೆದು ಹಿಲರಿ ಕ್ಲಿಂಟನ್ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದಾರೆ ಎಂದು ಎಐಎಡಿಎಂಕೆ ವ್ಯಕ್ತಿಯೊಬ್ಬರು ಈ ಹಿಂದೆ ಹೇಳಿದ್ದರು. ಆದರೆ ಇಂಥ ವಿಚಿತ್ರ ಹೇಳಿಕೆಗಳಿಗೆ ಕಿರೀಟ ಎನಿಸುವಂಥ ಮಾತನ್ನು ಉನ್ನತ ಶಿಕ್ಷಣಕ್ಕೆ ನೀಡುವ ಅನುದಾನಕ್ಕೆ ಸಂಬಂಧಪಟ್ಟ ಚರ್ಚೆ ನಡೆಯುವ ವೇಳೆ ಶಾಸಕ ಮಾರಿಯಪ್ಪನ್ ಕೆನಡಿ ಆಡಿದ್ದಾರೆ.

ತಮ್ಮ ಭಾಷಣದ ವೇಳೆ ವಿಷ್ಣುವಿನ ಹತ್ತು ಅವತಾರಗಳನ್ನು ಹೇಳಿದ ಅವರು, ಜಯಲಲಿತಾ ಹನ್ನೊಂದನೇ ಅವತಾರ ಅಂದಿದ್ದಾರೆ. ಆಕೆಗೆ ಪರ್ಯಾಯ ಅಂದರೆ ಶಶಿಕಲಾ. ಪಕ್ಷಕ್ಕೆ ಮಾರ್ಗದರ್ಶನ ಮಾಡಲು ಅವರೇ ಸರಿ ಎಂದಿದ್ದಾರೆ. ಆ ನಂತರ ಟಿಟಿವಿ ದಿನಕನ್ ನನ್ನು ದಾರಿದೀಪ, ಪಕ್ಷದ ಭವಿಷ್ಯ ಎಂದೆಲ್ಲ ವಾಚಾಮಗೋಚರ ಹೊಗಳಿದ್ದಾರೆ.
ಜಯಲಲಿತಾ ಬಗ್ಗೆ ಈ ಹಿಂದೆ ಶಶಿಕಲಾ ಕೂಡ ಅಂಥದ್ದೇ ಮಾತನಾಡಿದ್ದರು. ಪ್ರತಿ ದಿನ ಅಮ್ಮ ಆತ್ಮ ನನಗೆ ಹೇಳುತ್ತದೆ. ನಾನು ನಿನಗೆ ಈ ಒಂದೂವರೆ ಕೋಟಿ ಜನರ ಜವಾಬ್ದಾರಿ ವಹಿಸಿದ್ದೇನೆ ಎಂದಿದ್ದರು. ಮುಂದಿನ ಸರದಿ ಒ ಪನ್ನೀರ್ ಸೆಲ್ವಂ ಅವರದಾಗಿತ್ತು. ಜಯಾ ಸಮಾಧಿ ಎದುರು ಧ್ಯಾನ ಮಾಡಿದ್ದರು ಒಪಿಎಸ್.
ಸಟಕ್ಕನೆ ಎದ್ದವರೇ, ಇಲ್ಲಿಗೆ ಬರಲು ಒತ್ತಾಯಿಸಿದ್ದೇ ಅಮ್ಮನ ಆತ್ಮ. ನನಗೆ ನಿಜ ಹೇಳುವಂತೆ ಆಜ್ಞೆ ಮಾಡಿದೆ ಎಂದಿದ್ದರು. ಇನ್ನು ಪಕ್ಷದ ಕೌನ್ಸಿಲರ್ ಎಂ ಸ್ವಾಮಿನಾಥನ್ ತಂಜಾವೂರಿನಲ್ಲಿ ಜಯಾಗಾಗಿ ದೇವಸ್ಥಾನವನ್ನೇ ಕಟ್ಟಿದ್ದಾರೆ. ಅದು ಆಕೆ ತೀರಿಕೊಂಡ ಹತ್ತು ದಿನದ ಒಳಗಾಗಿ. ಚುನಾವಣೆ ಪ್ರಚಾರ ಹಾಗೂ ಸಭೆಗಳಲ್ಲಿ ಜಯಾರನ್ನು ದೇವತೆಯಂತೆಯೇ ಬಿಂಬಿಸಲಾಗುತ್ತಿತ್ತು.
-
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ












Click it and Unblock the Notifications