ಗೂಗಲ್ ಇಂಡಿಯಾ 'ತೇಜ್' ಹೆಸರು ಬದಲು, ಪೇಮೆಂಟ್ ಸುಲಭ!
ಬೆಂಗಳೂರು, ಆಗಸ್ಟ್ 28 : ಗೂಗಲ್ ಇಂಡಿಯಾದ ಪೇಮೆಂಟ್ ಬ್ಯಾಂಕಿಂಗ್ ಆಪ್ 'ತೇಜ್' ಹೆಸರು ಬದಲಾಗಿದೆ. ಮೊಬೈಲ್ ಪಾವತಿ ಅಪ್ಲಿಕೇಷನ್ ಹೊಸ ಸ್ವರೂಪದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಗೂಗಲ್ ತೇಜ್ ಎಂಬ ಹೆಸರಿನ ಬದಲಿಗೆ ಗೂಗಲ್ ಪೇ ಎಂದು ಕರೆಯಲಾಗುತ್ತದೆ.
ಸರ್ಚ್ ಇಂಜಿನ್ ದಿಗ್ಗಜ ಗೂಗಲ್ ಈ ಮೂಲಕ ಮೊಬೈಲ್ ಪಾವತಿ(ಆನ್ ಲೈನ್ ಹಾಗೂ ಆಫ್ ಲೈನ್) ಕ್ಷೇತ್ರಕ್ಕೆ ಅಧಿಕೃತವಾಗಿ ಕಾಲಿರಿಸಿ ಬಹುತೇಕ ಒಂದು ವರ್ಷವಾಗುತ್ತಿದೆ. ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಈ ಆಪ್ ಲಭ್ಯವಿದೆ.
ಈ ಅಪ್ಲಿಕೇಷನ್ ತಮ್ಮ ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಿಕೊಂಡು ಸುಲಭವಾಗಿ ಡೆಬಿಟ್/ಕ್ರೆಡಿಟ್ ಕಾರ್ಡ್ ಮೂಲಕ ವ್ಯವಹಾರ ಸಾಧಿಸಬಹುದಾಗಿದೆ.
ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ)ದ ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್(ಯುಪಿಐ)ನ್ನು ಬಳಸುವ ತೇಝ್ ಆಪ್ ಮೂಲಕ ಮಾಡುವ ಹಣ ವರ್ಗಾವಣೆಗಳು ಸರಳ ಮತ್ತು ಸುರಕ್ಷಿತವಾಗಿವೆ ಎಂದು ಗೂಗಲ್ ಘೋಷಿಸಿದೆ.
ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ)ದ ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್(ಯುಪಿಐ)ನ್ನು ಬಳಸುವ ತೇಝ್ ಆಪ್ ಮೂಲಕ ಮಾಡುವ ಹಣ ವರ್ಗಾವಣೆಗಳು ಸರಳ ಮತ್ತು ಸುರಕ್ಷಿತವಾಗಿವೆ ಎಂದು ಗೂಗಲ್ ಘೋಷಿಸಿದೆ.

ಮತ್ತೇನು ಹೊಸದಿದೆ ಗೂಗಲ್ ಪೇ ನಲ್ಲಿ
ಈಗ ಗೂಗಲ್ ಪೇನಲ್ಲಿ ತ್ವರಿತವಾಗಿ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕುಗಳಿಂದ ಸಾಲ ಪಡೆಯಬಹುದು. ಎಚ್ ಡಿ ಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಫೆಡರಲ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಗಳಿಂದ ಪ್ರೀ ಅಪ್ರೂವ್ಡ್ ಸಾಲವನ್ನು ಗೂಗಲ್ ಪೇ ಆಪ್ ಮೂಲಕ ಪಡೆಯಬಹುದಾಗಿದೆ.

ಈಗ ಎಲ್ಲೆಡೆ ಲಭ್ಯವಾಗಲಿದೆ
ಗೂಗಲ್ ಪೇ ಮೂಲಕ ಹಣಪಾವತಿ ಹಾಗೂ ವರ್ಗಾವಣೆ ಈಗ ಹೆಚ್ಚು ಕಡೆಗಳಲ್ಲಿ ವಿಸ್ತರಿಸಲಾಗಿದೆ. ಗೋಐಬಿಬೋ, ಫ್ರೆಶ್ ಮೆನು, ಬುಕ್ ಮೈ ಶೋ, ರೆಡ್ ಬಸ್ ಗಳಲ್ಲಿ ಗೂಗಲ್ ಪೇ ಬಳಸಬಹುದಾಗಿದೆ. ಗೂಗಲ್ ಈಗ 22 ಮಿಲಿಯನ್ ಸಕ್ರಿಯ ಗೂಗಲ್ ಪೇ ಬಳಕೆದಾರರು, 750 ಮಿಲಿಯನ್ ವ್ಯವಹಾರಗಳು ಹಾಗೂ 2 ಲಕ್ಷ ಕೋಟಿ ವ್ಯವಹಾರ ದಾಖಲಾಗಿದೆ.

ಹಲವು ಭಾಷೆಗಳಲ್ಲಿ ಲಭ್ಯ
ಇಂಗ್ಲೀಷ್, ಹಿಂದಿ, ಬಂಗಾಳಿ, ಗುಜರಾತಿ, ಕನ್ನಡ, ತಮಿಳು, ಮರಾಠಿ ಮತ್ತು ತೆಲುಗು ಭಾಷೆಗಳನ್ನು ತೇಝ್ ಬೆಂಬಲಿಸುತ್ತದೆ.ತೇಝ್ ನ ಕ್ಯಾಷ್ ಮೋಡ್ ಬಳಸುವ ಮೂಲಕ ಯಾರಿಂದಲೇ ಆದರೂ ಹಣವನ್ನು ತಕ್ಷಣ ಸ್ವೀಕರಿಸಬಹುದು ಅಥವಾ ಅವರಿಗೆ ರವಾನಿಸಬಹುದು. ಇದಕ್ಕಾಗಿ ನಿಮ್ಮ ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳೂ ಬೇಕಿಲ್ಲ.

ಇದು ಬರೀ ಮೊಬೈಲ್ ವ್ಯಾಲೆಟ್ ಅಲ್ಲ
ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ನೇರವಾಗಿ ವರ್ಗಾಯಿಸಬಹುದು. ಯುಪಿಐನಲ್ಲಿ ನಿಮ್ಮ ಖಾತೆಯನ್ನು ತೇಝ್ಗೆ ಲಿಂಕ್ ಮಾಡಿಕೊಂಡರೆ ಸಾಕು, ಬ್ಯಾಂಕಿನಿಂದ ಬ್ಯಾಂಕಿಗೆ ಹಣ ವರ್ಗಾವಣೆ ತಕ್ಷಣ ಸಾಧ್ಯವಾಗುತ್ತದೆ. ಆಕ್ಸಿಸ್, ಎಚ್ ಡಿ ಎಫ್ ಸಿ, ಐಸಿಐಸಿಐ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಲ್ಲದೆ ಯುಪಿಐ ಬೆಂಬಲಿತ ಎಲ್ಲಾ ಮೊಬಿ ಬ್ಯಾಂಕಿಂಗ್ ಸೇವೆ ಲಭ್ಯ
-
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು -
Karnataka Weather: ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ -
ದುಬೈ ವಿಮಾನ ನಿಲ್ದಾಣಕ್ಕೆ ನುಗ್ಗಿದ ಡ್ರೋನ್, ಎಲ್ಲಾ ವಿಮಾನ ಹಾರಾಟ ದಿಢೀರ್ ಸ್ಥಗಿತ | Operation Roaring Lion -
LPG Price Hike: ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 60 ರೂಪಾಯಿ ಏರಿಕೆ, ವಾಣಿಜ್ಯ ಸಿಲಿಂಡರ್ ದರ 115 ರೂಪಾಯಿ ಹೆಚ್ಚಳ -
SWR: ಬೆಂಗಳೂರಿನಿಂದ ಇಲ್ಲಿಗೆ ಮಾ.10ರಿಂದ ವಿಶೇಷ ರೈಲುಗಳ ಸಂಚಾರ, ವೇಳಾಪಟ್ಟಿ ಹೀಗಿದೆ












Click it and Unblock the Notifications