ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮ ಯುರೋಪ್ ನೆಲದಲ್ಲಿ ಹೊಸ ಸಮಸ್ಯೆ | Ukraine And Russia
ಪ್ರಪಂಚ ಮತ್ತೆ ಶಾಂತವಾಗಬೇಕು, ಇದಕ್ಕಾಗಿ ಯುದ್ಧಗಳು ನಿಲ್ಲಬೇಕು ಎಂಬುದು ಎಲ್ಲರ ಆಸೆಯೂ ಆಗಿದೆ. ಹೀಗಿದ್ದರೂ ಜಗತ್ತಿನಲ್ಲಿ ಯುದ್ಧಗಳು ನಿಲ್ಲುವ ಬದಲಾಗಿ ಮತ್ತಷ್ಟು ವಾರ್ ಶುರುವಾಗುತ್ತಿದ್ದು, ದಿನದಿಂದ ದಿನಕ್ಕೆ ಪರಿಸ್ಥಿತಿ ಕೂಡ ಚಿಂತಾಜನಕ ಆಗುತ್ತಿದೆ. ಅದರಲ್ಲೂ ರಷ್ಯಾ ಮತ್ತು ಉಕ್ರೇನ್ ಯುದ್ಧ ಇಡೀ ಜಗತ್ತಿಗೆ ತಲೆನೋವಾಗಿ ಪರಿಣಮಿಸಿದ್ದು, ಏನಾದರೂ ಮಾಡಿ ಈ ಯುದ್ಧ ನಿಲ್ಲಿಸಬೇಕು ಎಂಬ ಪ್ರಯತ್ನ ನಡೆಯುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲಿ ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮ ಯುರೋಪ್ ನೆಲದಲ್ಲಿ ಹೊಸ ಸಮಸ್ಯೆ ಶುರುವಾಗಿದೆ.
ಡೊನಾಲ್ಡ್ ಟ್ರಂಪ್ ಅವರ ಆಡಳಿತ ಇರಾನ್ ವಿರುದ್ಧ ಯುದ್ಧ ಶುರು ಮಾಡುವ ಮೊದಲು ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಬೇಕು ಎಂಬ ದೊಡ್ಡ ಪ್ರಯತ್ನ ಮಾಡಿತ್ತು. ಅದರಲ್ಲೂ ಡೊನಾಲ್ಡ್ ಟ್ರಂಪ್ ಅವರ ಸರ್ಕಾರದ ದೊಡ್ಡ ದೊಡ್ಡ ಅಧಿಕಾರಿಗಳು ನೇರವಾಗಿ ರಷ್ಯಾ ರಾಜಧಾನಿ ಮಾಸ್ಕೋಗೆ ಹೋಗಿ ಬಂದಿದ್ದರು. ರಷ್ಯಾ ಅಧ್ಯಕ್ಷ ಪುಟಿನ್ ಅವರ ಜೊತೆಗೆ ನೇರವಾಗಿ ಚರ್ಚೆ ಮಾಡಿದ್ದ ಅಮೆರಿಕ ಆಡಳಿತದ ಅಧಿಕಾರಿಗಳು, ಇನ್ನೇನು ಕೆಲವೇ ದಿನಗಳಲ್ಲಿ ಯುದ್ಧ ನಿಲ್ಲುತ್ತದೆ ಎಂಬ ನಿರೀಕ್ಷೆಯಲ್ಲಿ ಇದ್ದರು. ಈ ಯುದ್ಧ ನಿಲ್ಲಿಸಿದ್ದರೆ ಅದು ಟ್ರಂಪ್ ಅವರ ಆಡಳಿತಕ್ಕೆ ಮತ್ತಷ್ಟು ಹೆಸರು ತಂದುಕೊಂಡುವ ಸಾಧ್ಯತೆ ಕೂಡ ದಟ್ಟವಾಗಿದೆ.

ಯುದ್ಧ ನಿಲ್ಲುವ ಸಾಧ್ಯತೆಯೇ ಇಲ್ಲ!
ಅಮೆರಿಕ ಮತ್ತೊಂದು ಕಡೆ ರಷ್ಯಾಗೆ ದೊಡ್ಡ ಆಫರ್ ಕೂಡ ಕೊಟ್ಟಿತ್ತು, ಅಲ್ಲದೆ ಉಕ್ರೇನ್ ಅಧ್ಯಕ್ಷನ ಬಾಯಿ ಮುಚ್ಚಿಸುವ ಕೆಲಸ ಕೂಡ ಮಾಡಲಾಗಿತ್ತು. ಇದೇ ಕಾರಣಕ್ಕೆ ಯುದ್ಧ ನಿಲ್ಲುವ ನಿರೀಕ್ಷೆಗಳು ಕೂಡ ಇದ್ದವು. ಆದರೆ ಈ ಎಲ್ಲಾ ನಿರೀಕ್ಷೆ ದಿನದಿಂದ ದಿನಕ್ಕೆ ಹುಸಿಯಾಗುತ್ತಿದ್ದು, ಇರಾನ್ ವಿರುದ್ಧ ಭೀಕರ ಯುದ್ಧ ನಡೆಯುವ ಈ ಸಮಯದಲ್ಲಿ ಯುರೋಪ್ ಒಕ್ಕೂಟ ಹೊಸ ಸಂಕಷ್ಟಕ್ಕೆ ಸಿಲುಕಿದೆ. ಹಾಗಾದರೆ ಏನದು ಹೊಸ ಸಮಸ್ಯೆ? ಯುರೋಪ್ ಒಕ್ಕೂಟ ಈ ಯುದ್ಧ ನಿಲ್ಲಿಸಲು ಉಕ್ರೇನ್ ಮೇಲೆ ಒತ್ತಡ ಹೇರುತ್ತಾ?
ಕುಸಿದು ಬೀಳುತ್ತಾ ಯುರೋಪ್ ಆರ್ಥಿಕತೆ?
ಯುರೋಪ್ ಒಕ್ಕೂಟದ ದೇಶಗಳು ತಮಗೆ ಅಗತ್ಯ ಇದ್ದ ತೈಲ ಹಾಗೂ ಅನಿಲ ಆಮದು ಮಾಡಿಕೊಳ್ಳಲು ರಷ್ಯಾ ದೇಶವನ್ನೇ ನಂಬಿ ಕೂತಿದ್ದವು. ಆದರೆ ಯಾವಾಗ ಉಕ್ರೇನ್ ವಿರುದ್ಧ ರಷ್ಯಾ ಯುದ್ಧವನ್ನು ಶುರು ಮಾಡಿತ್ತೋ ಅಂದಿನಿಂದ ಹೊಸ ಹೊಸ ನಿರ್ಬಂಧ ಹೇರಿಕೆ ಮಾಡಿ ರಷ್ಯಾ ಮೂಲಕ ಬರುತ್ತಿದ್ದ ತೈಲ ಹಾಗೂ ಅನಿಲ ನಿಲ್ಲಿಸಲಾಗಿತ್ತು. ಹೀಗಿದ್ದಾಗ ಮಧ್ಯಪ್ರಾಚ್ಯ ಅದರಲ್ಲೂ ಪ್ರಮುಖವಾಗಿ ಅರಬ್ ದೇಶಗಳ ಮೂಲಕ ತಮಗೆ ಬೇಕಾಗಿದ್ದ ತೈಲ & ಅನಿಲ ತರಿಸಿಕೊಳ್ಳುತ್ತಿದೆ ಯುರೋಪ್. ಆದರೆ ಇದೀಗ ಇರಾನ್ ವಾರ್ ಶುರುವಾಗಿದ್ದು, ಅದಕ್ಕೂ ಕಲ್ಲು ಬಿದ್ದಂತೆ ಆಗಿದೆ.
ಯುರೋಪ್ ದೇಶಗಳಲ್ಲಿ ಈಗಲೂ ಚಳಿ ಇದ್ದು, ದಿನದಿನಕ್ಕೆ ಈ ಸಮಸ್ಯೆ ದೊಡ್ಡದಾಗುತ್ತಿದೆ. ಹೀಗಾಗಿ ಆದಷ್ಟು ಬೇಗ ಯುದ್ಧ ನಿಲ್ಲಿಸಲು ಉಕ್ರೇನ್ ಮೇಲೆ ಯುರೋಪ್ ಒಕ್ಕೂಟ ಒತ್ತಡ ಹೇರುವ ಸಾಧ್ಯತೆ ಇದೀಗ ದಟ್ಟವಾಗಿದೆ. ಒಟ್ನಲ್ಲಿ ಒಂದು ಕಡೆ ಉಕ್ರೇನ್ ಜನರು ಈ ಯುದ್ಧದ ಪರಿಣಾಮ ಈಗಾಗಲೇ ಬೀದಿಗೆ ಬಿದ್ದಿರುವ ಸ್ಥಿತಿ ಎದುರಿಸುತ್ತಿದ್ದಾರೆ. ಸ್ವತಃ ಉಕ್ರೇನ್ ಜನರಿಗೆ ಕೂಡ ತಮ್ಮದೇ ದೇಶದ ಅಧ್ಯಕ್ಷ ಕೈಗೊಳ್ಳುತ್ತಿರುವ ನಿರ್ಧಾರಗಳು ಕೋಪ ತರಿಸುತ್ತಿವೆ. ಮತ್ತೊಂದು ಕಡೆ ಉಕ್ರೇನ್ ದೇಶದಲ್ಲಿ ಆದಷ್ಟು ಬೇಗ ಚುನಾವಣೆ ನಡೆಸಬೇಕು, ಆಗ ಮಾತ್ರ ನಾವು ಯುದ್ಧ ನಿಲ್ಲಿಸುತ್ತೇವೆ ಎಂದು ರಷ್ಯಾ ಹೊಸದಾಗಿ ಡಿಮ್ಯಾಂಡ್ ಮಾಡುತ್ತಿದೆ. ಇದೆಲ್ಲವನ್ನೂ ನೋಡುತ್ತಿದ್ದರೆ ಉಕ್ರೇನ್ ಮತ್ತು ರಷ್ಯಾ ಯುದ್ಧ ನಿಲ್ಲುವ ಬದಲಾಗಿ ಮತ್ತಷ್ಟು ಜೋರಾಗುವ ಸಾಧ್ಯತೆ ದಟ್ಟವಾಗಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications