ಬೆಂಗಳೂರಲ್ಲಿ ಶುರುವಾಯ್ತು ನೀರಿಗೆ ಹಾಹಾಕಾರ, ನೀರಿನ ಟ್ಯಾಂಕರ್ ಬೆಲೆ ಗಗನಕ್ಕೆ
ಬೆಂಗಳೂರು, ಏಪ್ರಿಲ್ 7: ಬೆಂಗಳೂರಿನಲ್ಲಿ ಬಿಸಿಲಿನ ಝಳ ಹೆಚ್ಚಾಗಿದೆ, ಏಕಾಏಕಿ ನೀರಿನ ಟ್ಯಾಂಕರ್ ಬೆಲೆಯೂ ಗಗನಕ್ಕೇರಿದೆ. ಒಂದು ಟ್ಯಾಂಕರ್ಗೆ 500-900 ರೂ. ನೀಡಿದರೆ 6 ಸಾವಿರ ಲೀಟರ್ ನೀರು ನೀಡುತ್ತಾರೆ.
Recommended Video
ಬೆಂಗಳೂರು ಜಲ ಮಂಡಳಿಯು 7.4 ಲಕ್ಷ ಮಂದಿಗೆ ಪೈಪ್ಗಳ ಮೂಲಕ 1440 ಎಂಎಲ್ಡಿ ಕಾವೇರಿ ನೀರನ್ನು ಸರಬರಾಜು ಮಾಡುತ್ತಿದೆ. ಕಾವೇರಿ ನೀರು ಇಲ್ಲದ ಹಳ್ಳಿಗಳಲ್ಲಿ ಟ್ಯಾಂಕರ್ ನೀರು ಬಳಕೆ ಮಾಡಲಾಗುತ್ತಿದೆ.
ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳಲ್ಲಿ ಇನ್ನೂ ಪೈಪ್ಗಳ ಮೂಲಕ ನೀರು ಸರಬರಾಜು ಆರಂಭವಾಗಿಲ್ಲ. ಈ ಪ್ರದೇಶಗಳಲ್ಲಿ ಬೋರ್ವೆಲ್ ಅಥವಾ ಟ್ಯಾಂಕರ್ಗಳನ್ನು ಜನ ನಂಬಿದ್ದಾರೆ.
ಕಡಿಮೆ ಜಲ ಉತ್ಪತ್ತಿಯಿಂದಾಗಿ ಸಾಕಷ್ಟು ಬೋರ್ವೆಲ್ಗಳಲ್ಲಿ ನೀರು ಆರಿ ಹೋಗಿದೆ. ಕಳೆದ ವರ್ಷ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ನೀರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಜಲ ಮಂಡಳಿ ಹೇಳಿದೆ.
2023-24ರಲ್ಲಿ 110 ಹಳ್ಳಿಗೆ 775 ಎಂಎಲ್ಡಿಯಷ್ಟು ಕಾವೇರಿ ನೀರು ಸರಬರಾಜು ಮಾಡಲಾಗುತ್ತದೆ ಎಂದು ಜಲಮಂಡಳಿ ಹೇಳಿದೆ.

ಟ್ಯಾಂಕರ್ ನೀರನ್ನು ನಂಬಲು ಸಾಧ್ಯವಿಲ್ಲ
ಒಂದು ಟ್ಯಾಂಕರ್ ನೀರಿಗೆ ಸುಮಾರು 600 ರಿಂದ 900 ರೂ. ಕೊಡುವುದು ಹೌದು ಆದರೆ ನೀರಿನ ಗುಣಮಟ್ಟದ ಕುರಿತು ನಂಬಿಕೆ ಇಲ್ಲ. ನಗರದಲ್ಲಿ ಸುಮಾರು 1200 ಟ್ಯಾಂಕರ್ಗಳಿವೆ. ಅವುಗಳಲ್ಲಿ ಕೇವಲ 200 ಟ್ಯಾಂಕರ್ಗಳಿಗೆ ಮಾತ್ರ ಬಿಬಿಎಂಪಿ ಅನುಮತಿ ನೀಡಿದೆ.

ನೀರಿನ ಗುಣಮಟ್ಟ ನೋಡಿ ಒಪ್ಪಿಗೆ
ಉಳಿದ ಟ್ಯಾಂಕರ್ಗಳಿಗೆ ನೀರಿನ ಗುಣಮಟ್ಟವನ್ನು ಪರಿಶೀಲಿಸಿ ಬಳಿಕ ಒಪ್ಪಿಗೆ ನೀಡಲಾಗುವುದು ಎಂದು ಬಿಬಿಎಂಪಿ ಹೇಳುತ್ತಿದ್ದು, ಇಲ್ಲಿಯವರೆಗೂ ಅನುಮತಿ ಲಭ್ಯವಾಗಿಲ್ಲ. ಹಾಗೆಯೇ ಎಲ್ಲಾ ಟ್ಯಾಂಕರ್ಗಳಿಗೂ ಒಂದು ದರ ನಿಗದಿ ಮಾಡುವುದಾಗಿ ಹೇಳಲಾಗಿತ್ತು ಅದೂ ಕೂಡ ಇಲ್ಲಿಯವರೆಗೂ ಸಾಧ್ಯವಾಗಿಲ್ಲ.

ಅನಿವಾರ್ಯವಿದ್ದಲ್ಲಿ ನೀರು ಸಿಗುವುದಿಲ್ಲ
ಹೆಚ್ಚು ಹಣ ನೀಡಿದರೂ ಕೂಡ ನಮಗೆ ಬೇಕಾದ ಅಥವಾ ಅನಿವಾರ್ಯ ಸಂದರ್ಭಗಳಲ್ಲಿ ನೀರು ಸಿಗುವುದಿಲ್ಲ. ಸಂಜೆಯೊಳಗೆ ನೀರು ಬೇಕು ಎಂದು ಕರೆ ಮಾಡಿದರೆ ಒಂದು ದಿನ ಅಥವಾ ಎರಡು ದಿನ ನೀರಿಗಾಗಿ ಕಾಯಬೇಕಾಗುತ್ತದೆ. ಇದನ್ನು ಗಮನಿಸಿದಾಗ ಮುಂದಿರುವ ದಿನಗಳು ಇನ್ನೂ ಕೆಟ್ಟದಾಗಿವೆ ಎಂಬುದು ಅರ್ಥವಾಗುತ್ತದೆ ಎಂದು ವೈಟ್ಫೀಲ್ಡ್ ನಿವಾಸಿಯೊಬ್ಬರು ಹೇಳುತ್ತಾರೆ.

ಡೀಸೆಲ್ ಬೆಲೆ ಹೆಚ್ಚಳವಾಗಿದೆ
ಒಂದೆಡೆ ಡೀಸೆಲ್ ಬೆಲೆ ಹೆಚ್ಚಳವಾಗಿದೆ, ಮತ್ತೊಂದೆಡೆ ಬೋರ್ವೆಲ್ಗಳಿಂದ ಮೋಟರ್ ಮೂಲಕ ನೀರನ್ನು ಟ್ಯಾಂಕರ್ಗೆ ಹಾಕಬೇಕು, ವಿದ್ಯುತ್ ದರ ಕೂಡ ಹೆಚ್ಚಾಗಿದೆ, ಟ್ಯಾಂಕರ್ಗಳಿಗೆ ಬೇಡಿಕೆ ಇದೆ ಆದರೆ ಬೋರ್ವೆಲ್ಗಳು ಒಣಗುತ್ತಿವೆ. ನೀರು ಸಿಗುತ್ತಿಲ್ಲ ಎಂದು ಟ್ಯಾಂಕರ್ ಆಪರೇಟರ್ಗಳು ಹೇಳುತ್ತಾರೆ.
-
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
ಬೇಸಿಗೆಯ ಸಂಜೀವಿನಿ ಈ ನಿಂಬೆ ಹಣ್ಣು: ಆರೋಗ್ಯದ ದೃಷ್ಟಿಯಿಂದ ಪ್ರಯೋಜನಗಳು ಅಪಾರ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
ಬೆಂಗಳೂರಿನ ಸೋಂಪುರ ಕೆರೆ ಉಳಿವಿಗೆ ಜಲಮಂಡಳಿ ಮಾಸ್ಟರ್ ಪ್ಲಾನ್, ಸಂಸ್ಕರಣಾ ಘಟಕಕ್ಕೆ ಕಲುಷಿತ ನೀರು -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ?












Click it and Unblock the Notifications