ಹೆಬ್ಬಾಳ- ಸರ್ಜಾಪುರ ಮಧ್ಯೆ ಮೆಟ್ರೋ ಮಾರ್ಗ: ಡಿಪಿಆರ್ ಸಲ್ಲಿಕೆಗೆ ಗಡುವು
ಬೆಂಗಳೂರು ಜೂ.16: ನಗರದ ಸಂಚಾರ ದಟ್ಟಣೆಯ ಪ್ರದೇಶವಾದ ಹೆಬ್ಬಾಳ ಮತ್ತು ಸರ್ಜಾಪುರ ಮಧ್ಯೆ ಮೆಟ್ರೋ ರೈಲು ಮಾರ್ಗ ಜೋಡಣಾ ಕಾಮಗಾರಿಗೆ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ ಸಿಎಲ್) ಇತ್ತೀಚೆಗೆ ಟೆಂಡರ್ ಆಹ್ವಾನಿಸಿತ್ತು. ಸದ್ಯ ಈ ಟೆಂಡರ್ ಪ್ರಕ್ರಿಯೆಯಲ್ಲಿ ಹಲವು ಸಂಸ್ಥೆಗಳು ಪಾಲ್ಗೊಂಡಿವೆ.
ರಾಜ್ಯ ಸರ್ಕಾರ ಬಜೆಟ್ ನಲ್ಲಿ ಮೆಟ್ರೋ ಮಾರ್ಗ ಕುರಿತು ಘೋಷಿಸಿದ ಬೆನ್ನಲ್ಲೇ ಬಿಎಂಆರ್ ಸಿಎಲ್ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ. ಸರ್ಜಾಪುರದಿಂದ ಹೆಬ್ಬಾಳವರೆಗಿನ ಈ ಮೆಟ್ರೋ ಮಾರ್ಗವು ಸುಮಾರು 37ಕಿ.ಮೀ. ಅಂತರ ಹೊಂದಿದೆ. ಈ ಕಾಮಗಾರಿಗೆ ಸಮಗ್ರ ಯೋಜನಾ ವರದಿ ಸಿದ್ದಪಡಿಸಲು ಬಿಎಂಆರ್ ಸಿಎಲ್ ಎಂಟು ತಿಂಗಳ ಗಡುವು ನೀಡಿದೆ.
ಸುಮಾರು 15ಸಾವಿರ ಕೋಟಿ ರೂ. ವೆಚ್ಚದಲ್ಲಿ ಮೆಟ್ರೋಮಾರ್ಗ್ ನಿರ್ಮಿಸಲು ಉದ್ದೇಶಿಸಲಾಗಿದೆ. ನಿರ್ಮಾಣವಾವಾದರೆ ಹೆಬ್ಬಾಳದಿಂದ ಆಗರ, ಕೋರಮಂಗಲ, ಡೈರಿ ವೃತ್ತದ ಮೂಲಕ ಮಾರ್ಗ ಹಾದು ಹೋಗಲಿದೆ. ಸುತ್ತಮುತ್ತಲಿನ ಲಕ್ಷಾಂತರ ಜನರ ಸಂಚಾರ ಮತ್ತಷ್ಟು ಸುಗಮವಾಗಲಿದೆ. ಪ್ರಸ್ತುತ ಈ ಮಾರ್ಗವು ಮೆಟ್ರೋ ಮಾರ್ಗ ನಿರ್ಮಾಣದ ಮೂರನೇ ಹಂತವಾ ಇಲ್ಲವೇ ಈ ಮಾರ್ಗವನ್ನು ಸರ್ಕಾರ ಪ್ರತ್ಯೇಕವಾಗಿ ಪರಿಗಣಿಸುತ್ತದೆಯೋ? ಎಂಬುದು ತಿಳಿಯಬೇಕಿದೆ.

ಟೆಂಡರ್ನಲ್ಲಿ ಪಾಲ್ಗೊಂಡ ಸಂಸ್ಥೆಗಳು
ಬಿಎಂಆರ್ ಸಿಎಲ್ ಕರೆದ ಟೆಂಡರ್ನಲ್ಲಿ ದೆಹಲಿಯ ಇಂಟಿಗ್ರೆಟೆಡ್ ಮಲ್ಟಿ ಮಾಡೆಲ್ ಟ್ರಾನ್ಸಿಸ್ಟ್ ಸಿಸ್ಟಮ್, ಕೊರೆಯಾ ರೈಲ್ ರೋಡ್ ಟೆಕ್ನಿಕಲ್ ಕಾರ್ಪೋರೇಷನ್, ಅರ್ಬನ್ ಮಾಸ್ ಟ್ರಾನ್ಸಿಸ್ಟ್ ಕಂಪನಿ, ಕನ್ಸಲ್ಟಿಂಗ್ ಎಂಜಿನಿಯರ್ ಗ್ರೂಪ್, ಆರ್ ಐಟಿಇಎಸ್ ಲಿಮಿಟೆಡ್ ಸೇರಿದಂತೆ ಇನ್ನಿತರ ಹಲವು ಕಂಪನಿಗಳು ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿವೆ. ಇದರಲ್ಲಿ ಸರ್ಕಾರದ ಬೆಂಬಲ ಪಡೆದಿರುವ ಸಂಸ್ಥೆಯಾದ ಆರ್ ಐಟಿಇಎಸ್ ಲಿಮಿಟೆಡ್ ಸುಮಾರು ಆರು ವರ್ಷದ ಹಿಂದೆಯೇ ಈ 37ಕಿ.ಮೀ. ಮಾರ್ಗದ ಕಾರ್ಯಸಿದ್ಧತಾ ಯೋಜನೆ ಸಿದ್ದಪಡಿಸಿತ್ತು ಎನ್ನಲಾಗಿದೆ.
ಸಂಚಾದ ದಟ್ಟಣೆ ಸಮೀಕ್ಷೆ, ಪರ್ಯಾಯ ಮಾರ್ಗ ವ್ಯವಸ್ಥೆ, ಸಾಮಾಜಿಕ ಮತ್ತು ಪರಿಸರದ ಮೇಲಿನ ಪ್ರಭಾವ, ವಿದ್ಯುತ್ ಅಗತ್ಯತೆ ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡ ಡಿಪಿಆರ್ ಯೋಜನೆಗೆ ಮೆಟ್ರೋ ಎಂಟು ತಿಂಗಳ ಗಡುವು ನೀಡಿದೆ. ಈ ಹಿಂದೆ ಮೆಟ್ರೋದ ಮೊದಲ ಹಂತದ ಒಟ್ಟುತ್ತ 42ಕಿ.ಮೀ.ಗೆ ದೆಹಲಿಯ ಮೆಟ್ರೋ ಸಂಸ್ಥೆ ಡಿಪಿಆರ್ ಸಿದ್ದಪಡಿಸಿತ್ತು. ಎರಡನೆ ಹಂತದ 72ಕಿ.ಮೀ. ಮಾರ್ಗಕ್ಕೆ ಆರ್ ಐಟಿಇಎಸ್ ಲಿಮಿಟೆಡ್ ಕಂಪನಿ ಡಿಪಿಆರ್ ಒದಗಿಸಿತ್ತು, ಪ್ರಗತಿಯಲ್ಲಿರುವ ಮೆಟ್ರೋ 2ಎ ಮತ್ತು 2ಬಿ ಯ ಒಟ್ಟು ಸುಮಾರು 58ಕಿ.ಮೀ.ಕಾಮಗಾರಿ ಡಿಪಿಆರ್ ವರದಿಯನ್ನು ಬಿಎಂಆರ್ಸಿಎಲ್ ಸಂಬಂಧಿತ ಸಂಸ್ಥೆಗಳು ಸಿದ್ಧಪಡಿಸಿವೆ ಎಂದು ತಿಳಿದು ಬಂದಿದೆ.

ಸುರಂಗ ಮತ್ತು ಎತ್ತರಿಸಿದ ಮಾರ್ಗ ನಿರ್ಮಾಣ
ನಗರದಲ್ಲಿ ಮೆಟ್ರೋ ಮಾರ್ಗದ ಮಾಸ್ಟರ್ ಪ್ಲಾನ್ ಮಾಡಿಕೊಳ್ಳುವಾಗಲೇ ಹೆಬ್ಬಾಳ-ಸರ್ಜಾಪುರ ಮಾರ್ಗ ಕುರಿತು ಪ್ರಸ್ತಾವನೆ ಇತ್ತು. ಆದರೆ ಕಾರಣಾಂತರಳಿಂದ ಇಷ್ಟು ವರ್ಷ ಸಾಧ್ಯವಾಗಿರಲಿಲ್ಲ. ಪ್ರಸ್ತುತ ಈ ಮಾರ್ಗವು ಹೆಬ್ಬಾಳದಿಂದ ಕೋರಮಂಗಲ ವರೆಗೆ ಸುರಂಗ ನಂತರ ಅಲ್ಲಿಂದ ಸರ್ಜಾಪುರವರೆಗೆ ಎತ್ತರಿಸಿದ ಮಾರ್ಗ ನಿರ್ಮಿಸಲು ಬಿಎಂಆರ್ ಸಿಎಲ್ ಉದ್ದೇಶಿಸಿದೆ ಎಂದು ಅಧಿಕಾರಿಕಗಳು ಮಾಹಿತಿ ನೀಡಿದ್ದಾರೆ.
(ಒನ್ಇಂಡಿಯಾ ಸುದ್ದಿ)
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications