ಸಂಕ್ರಾಂತಿಗೆ ತಟ್ಟದ ಬೆಲೆ ಏರಿಕೆ ಬಿಸಿ, ಗ್ರಾಹಕರಿಗೆ ಫುಲ್ ಖುಷಿ
ಬೆಂಗಳೂರು, ಜ, 13: ರಾಜ್ಯದ ಮನೆ-ಮನಗಳಲ್ಲಿ ಸಂಕ್ರಾಂತಿ ಸಂಭ್ರಮ ನೆಲೆಸಿದೆ. ಬೆಂಗಳೂರಲ್ಲೂ ಎಳ್ಳು-ಬೆಲ್ಲ ಹಬ್ಬದ ತಯಾರಿ ಜೋರಾಗಿದ್ದು ಮಾರುಕಟ್ಟೆಗಳತ್ತ ಜನ ತೆರಳುತ್ತಿದ್ದಾರೆ. ಖರೀದಿಗೆ ತೆರಳುವ ಮುನ್ನ ಒಂದಿಷ್ಟು ಮಾಹಿತಿ ತಿಳಿದುಕೊಂಡು ಹೋಗುವುದು ಒಳಿತು.
ಕಳೆದ ಕೆಲ ದಿನಗಳಿಂದ ಬೀಳುತ್ತಿರುವ ಚಳಿಯ ನಡುವೆಯೂ ಜನ ಅಗತ್ಯ ವಸ್ತು ಖರೀದಿಗೆ ಮುಂದಾಗುತ್ತಿದ್ದಾರೆ. ನಗರದ ಪ್ರಮುಖ ರಸ್ತೆಗಳ ಇಕ್ಕೆಲಗಳು, ಕೃಷ್ಣರಾಜೇಂದ್ರ ಮಾರುಕಟ್ಟೆ, ಮಲ್ಲೇಶ್ವರಂ, ಗಾಂಧಿಬಝಾರ್, ಜಯನಗರ ಬಿಡಿಎ ಕಾಂಪ್ಲೆಕ್ಸ್, ಮತ್ತಿಕೆರೆ, ಎನ್ ಆರ್ ಕಾಲೋನಿ ಮುಂತಾದ ಭಾಗಗಳಲ್ಲಿ ಕಬ್ಬು, ಹೂವು, ಹಣ್ಣು ಮತ್ತು ತೆಂಗಿನಕಾಯಿ ಮಾರಾಟ ಜೋರಾಗಿದೆ.[ಜ.14, 15ರಂದು ಹಳ್ಳಿಮನೆಯಲ್ಲಿ ಸಂಕ್ರಾಂತಿ ಹಬ್ಬದೂಟ]
ಪ್ರತಿ ಸಾರಿ ಜನರನ್ನು ಕಾಡುತ್ತಿದ್ದ ಬೆಲೆ ಏರಿಕೆ ಬಿಸಿ ಈ ಬಾರಿ ದೂರವಾಗಿದೆ ಎಂದೇ ಹೇಳಬಹುದು. ತರಕಾರಿ ಬೆಲೆ ಇಳಿಕೆ ಹಾದಿಯಲ್ಲಿದೆ. ಹೂವು ಮಾಮೂಲಿ ದರ ಕಾಪಾಡಿಕೊಂಡಿದೆ. ಆದರೆ ಹಬ್ಬಕ್ಕೆ ಅಗತ್ಯವಾದ ಕಡಲೆ ಬೀಜ, ಗೆಣಸು, ಅವರೆಕಾಯಿ ಹಬ್ಬದ ಹಿನ್ನೆಲೆಯಲ್ಲಿ ಕೊಂಚ ಏರಿಕೆಯಾಗಿದ್ದು ತಲೆ ಕೆಡಿಸಿಕೊಳ್ಳುವಂಥದ್ದೇನಿಲ್ಲ.

ಕಬ್ಬಿನ ಬೆಲೆ ಎಷ್ಟಿದೆ?
ಜೋಡಿ ಕಬ್ಬಿಗೆ 50 ರಿಂದ 100 ರೂ. ವರೆಗೆ ಮಾರಾಟವಾಗುತ್ತಿದೆ. ಅವುಗಳ ಬಣ್ಣ ಮತ್ತು ಗಾತ್ರ ಆಧರಿಸಿ ಬೆಲೆ ನಿರ್ಧಾರ ಮಾಡಲಾಗಿದೆ. ಕೆ ಆರ್ ಮಾರುಕಟ್ಟೆಯಿಂದ ಮುಂಜಾನಯೇ ತಂದ ಕಬ್ಬುಗಳನ್ನು ಚಿಲ್ಲರೆ ವ್ಯಾಪಾರಿಗಳು ಗಾಡಿ ಮೇಲೆ ಇಟ್ಟುಕೊಂಡು ಮನೆ ಮನೆ ಬಾಗಿಲೆಗೆ ತೆರಳಿ ಮಾರಾಟ ಮಾಡುತ್ತಿದ್ದ ದೃಶ್ಯವೂ ಕಂಡುಬಂತು.

ಬೆಂಗಳೂರಿಗೆ ಕಬ್ಬು ಎಲ್ಲಿಂದ ಬರುತ್ತದೆ?
ಸಾಮಾನ್ಯವಾಗಿ ಕಬ್ಬನ್ನು ಸಕ್ಕರೆ ನಾಡು ಮಂಡ್ಯ ಮತ್ತು ತಮಿಳುನಾಡು ಭಾಗದಿಂದ ತರಿಸಿಕೊಳ್ಳಲಾಗುತ್ತದೆ. ವ್ಯಾಪಾರಿಗಳು ಹೇಳುವಂತೆ ಈ ಬಾರಿ ಸಾಕಷ್ಟು ಪ್ರಮಾಣದಲ್ಲಿ ಕಬ್ಬು ಬಂದಿಲ್ಲ. ಹಾಗಾಗಿ ನಾವೇ ಜೋಡಿಗೆ 10 ರೂ. ಹೆಚ್ಚಿಗೆ ತೆರಬೇಕಾಗಿದೆ. ಅನಿವಾರ್ಯವಾಗಿ ದರ ಏರಿಕೆ ಮಾಡಬೇಕಾಗುತ್ತದೆ ಎನ್ನುತ್ತಾರೆ.

ಇನ್ನು ಬೋಣಿ ಆಗಿಲ್ಲ
ಬೆಳಗ್ಗೆ 6 ಗಂಟೆಗೆ ಕಬ್ಬು ತಂದು ಹಾಕಿಕೊಂಡಿದ್ದೇವೆ. ಆದರೆ ಇನ್ನು ಮೊದಲ ವ್ಯಾಪಾರವೇ ಆಗಿಲ್ಲ. ಆಟೋಕ್ಕೆ, ವ್ಯಾಪಾರಕ್ಕೆ ಅಂತ ಅಳತೆ ಮೀರಿ ಹಣ ವೆಚ್ಚ ಮಾಡಿದ್ದೇನೆ. ಜನರು ಚೌಕಾಸಿ ಮಾಡಿದರೆ ನಷ್ಟ ಅನುಭವಿಸಬೇಕಾಗುತ್ತದೆ. ರಸ್ತೆ ಬದಿ ವ್ಯಾಪಾರಿಗಳ ಗೋಳು ಮುಗಿಯದ್ದು ಎಂದು ವಿದ್ಯಾಪೀಠ ಸಮೀಪ ವ್ಯಾಪಾರ ಸಾಕಮ್ಮ ಅಳಲು ತೋಡಿಕೊಳ್ಳುತ್ತಾರೆ.

ಹೂವು-ಹಣ್ಣು ತರಕಾರಿ
ಹಬ್ಬದ ಹಿನ್ನೆಲೆಯಲ್ಲಿ ಹೂವು-ಹಣ್ಣು ದರದಲ್ಲೂ ಕೊಂಚ ಏರಿಕೆ ಕಂಡುಬಂದಿದೆ. ದ್ರಾಕ್ಷಿ ಕೆಜಿಗೆ 100 ರೂ. ದಾಳಿಂಬೆ ಕೆಜಿಗೆ 140 ರೂ. ಸೇಬು 140ರೂ ಇದ್ದು ಯಾವುದೇ ವಿಶೇಷ ಹೆಚ್ಚಳ ಕಂಡುಬಂದಿಲ್ಲ. ಆದರೆ ಬಾಳೆಹಣ್ಣಿನ ದರ ದಿಢೀರ್ ಏರಿಕೆಯಾಗಿದ್ದು ಕೆಜಿಗೆ 45 ರಿಂದ 50 ರೂ. ನೀಡಬೇಕಾಗಿದೆ.

ಹಬ್ಬ ಅಂದ ಮೇಲೆ ಬಿಡೋಕಾಗತ್ತ?
ಹಬ್ಬ ಅಂದ ಮೇಲೆ ಅಗತ್ಯ ವಸ್ತುಗಳನ್ನು ಖರೀದಿ ಮಾಡಲೇಬೇಕು. ಸಂಪ್ರದಾಯಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು. ಸಂಜೆ ಕಚೇರಿಗೆ ತೆರಳಬೇಕಾಗಿರುವುದರಿಂದ ಈಗಲೇ ಸಾಮಗ್ರಿ ಕೊಂಡೊಯ್ಯುತ್ತಿದ್ದೇನೆ ಎಂದು ಎನ್. ಆರ್.ಕಾಲೋನಿ ನಿವಾಸಿ ರಾಜಶೇಖರ್ ಹೇಳುತ್ತಾರೆ.
-
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು












Click it and Unblock the Notifications