ನೋಟ್ ಬ್ಯಾನ್ ನಂತರ, ಕರ್ನಾಟಕದಲ್ಲಿ 600 ಕೋಟಿ ರು ವಶ
ಇಲ್ಲಿ ತನಕ ದೇಶದಾದ್ಯಂತ ನಡೆದ ಐಟಿ ದಾಳಿಗಳಿಂದ ಸರಿ ಸುಮಾರು 3,000 ಕೋಟಿ ರು ಗೂ ಅಧಿಕ ಮೌಲ್ಯದ ಅಕ್ರಮ ಅಸ್ತಿ ಜಪ್ತಿ ಮಾಡಲಾಗಿದೆ.ಈ ಪೈಕಿ ಶೇ 20ರಷ್ಟು ಕರ್ನಾಟಕದಿಂದಲೇ ಜಪ್ತಿಯಾಗಿದೆ.
ಬೆಂಗಳೂರು, ಡಿಸೆಂಬರ್ 16: ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 8ರಂದು 500 ಹಾಗೂ 1,000 ರು ಮುಖಬೆಲೆ ನೋಟುಗಳನ್ನು ನಿಷೇಧಿಸಿದ ಬಳಿಕ ದೇಶದಾದ್ಯಂತ ಐಟಿ ದಾಳಿ ಹೆಚ್ಚಾಗಿದ್ದು ತಿಳಿದಿರಬಹುದು. ಇಲ್ಲಿ ತನಕ ದೇಶದಾದ್ಯಂತ ನಡೆದ ಐಟಿ ದಾಳಿಗಳಿಂದ ಸರಿ ಸುಮಾರು 3,000 ಕೋಟಿ ರು ಗೂ ಅಧಿಕ ಮೌಲ್ಯದ ಅಕ್ರಮ ಅಸ್ತಿ ಜಪ್ತಿ ಮಾಡಲಾಗಿದೆ.
ಈ ಪೈಕಿ ಶೇ 20ರಷ್ಟು ಕರ್ನಾಟಕದಿಂದಲೇ ಜಪ್ತಿ ಮಾಡಲಾಗಿದ್ದು, 48 ಪ್ರಕರಣಗಳ ಪೈಕಿ 23 ಪ್ರಕರಣಗಳು ಕರ್ನಾಟಕದ ವಿವಿಧ ಇಲಾಖೆಗಳ ಅಕ್ರಮಗಳ ವಿರುದ್ಧ ದಾಖಲಾಗಿದೆ. ಕರ್ನಾಟಕದಿಂದ ಸರಿ ಸುಮಾರು 600 ಕೋಟಿ ರು ಗೂ ಅಧಿಕ ಅಕ್ರಮ ಹಣ ವಶ ಪಡಿಸಿಕೊಳ್ಳಲಾಗಿದೆ.

ವಶಪಡಿಸಿಕೊಂಡ ಮೊತ್ತದ ಪೈಕಿ 2,000 ರುಪಾಯಿ ಹೊಸ ನೋಟುಗಳೇ ಅಧಿಕವಾಗಿವೆ. 29.86 ಕೋಟಿ ಜಪ್ತಿಯಾದ ಮೊತ್ತ ಮೊತ್ತದಲ್ಲಿ 20.22 ಕೋಟಿ ರು 2000 ಮುಖಬೆಲೆಯದ್ದಾಗಿದೆ. 41.6 ಕಿಲೋಗ್ರಾಮ್ ಚಿನ್ನದ ಗಟ್ಟಿ ಹಾಗೂ 14 ಕೆಜಿ ಆಭರಣಗಳು ಜಪ್ತಿಯಾಗಿವೆ.
ದೊಡ್ಡ ಮೌಲ್ಯದ ವ್ಯವಹಾರ: ದೊಡ್ಡ ಮೌಲ್ಯದ ವ್ಯವಹಾರ ಮಾಡುವ ನಗರಗಳ ಪೈಕಿ ಕರ್ನಾಟಕದ ರಾಜಧಾನಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. 2010ರಿಂದ 2016ರ ತನಕ 2,47,002 ಮೌಲ್ಯದ ವ್ಯವಹಾರ ನಡೆದಿದ್ದು, ನವೆಂಬರ್ 8ರ ನಂತರ ವ್ಯವಹಾರಗಳೆಲ್ಲವೂ ಅಕ್ರಮ ಹಾದಿ ಹಿಡಿದಿವೆ.
ಕರ್ನಾಟಕ ಹಾಗೂ ಗೋವಾ ವಲಯದ ಆದಾಯ ತೆರಿಗೆ ಇಲಾಖೆ ನಿರ್ದೇಶಕರ ಪ್ರಕಾರ 1,000 ಕೋಟಿ ರು ಅವ್ಯವಹಾರ ನಡೆದಿದ್ದು, ಬ್ಯಾಂಕರ್ಸ್, ಸರ್ಕಾರಿ ಅಧಿಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಅವ್ಯವಹಾರದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾಗಿದ್ದಾರೆ. ಒಟ್ಟಾರೆ ನವೆಂಬರ್ 8ರಿಂದ ಇಲ್ಲಿ ತನಕ 36 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
-
ಮಾರ್ಚ್ 10ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಪ್ರವಾಸೋದ್ಯಮ ಇಲಾಖೆಯಿಂದ ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ ಆತಿಥ್ಯ ಕ್ಷೇತ್ರದಲ್ಲಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು












Click it and Unblock the Notifications