ಸಮಾಜದಲ್ಲಿ ಜಾತಿಭೇದ ಬಿತ್ತಿದವರು ಬ್ರಾಹ್ಮಣರು
ದಕ್ಷಿಣಕನ್ನಡ ಜಿಲ್ಲೆ ಕಲ್ಲಡ್ಕದಲ್ಲಿ ನಡೆಯುತ್ತಿರುವ ವಾಜಪೇಯ ಯಾಗದ ಬಗ್ಗೆ ಜನಶ್ರೀ ವಾಹಿನಿ ನಡೆಸಿದ ಚರ್ಚೆಯಲ್ಲಿ ಮಾತನಾಡುತ್ತಿದ್ದ ಸುರೇಶ ಗೌಡ, ಬಟ್ಟೆ ಒಗೆಯುವವರನ್ನು ಅಗಸರು, ಚಿನ್ನ ಮಾಡುವವರನ್ನು ಅಕ್ಕಸಾಲಿಗರೆಂದು ಪ್ರತ್ಯೇಕಿಸಿ ಅನಾದಿ ಕಾಲದಿಂದ ತಾರತಮ್ಯ ತೋರಿಕೊಂಡು ಬಂದವರು ಬ್ರಾಹ್ಮಣರು ಎಂದು ಚುಚ್ಚಿದರು.
ಈ ವಾಜಪೇಯ ಯಾಗ ಒಂದು ರೀತಿಯ ಮೂಢನಂಬಿಕೆ. ವೈಯಕ್ತಿಕವಾಗಿ ನನಗೆ ಇದರಲ್ಲಿ ಆಸಕ್ತಿ ಇಲ್ಲ. ಈ ಯಾಗದ ಫಲದಿಂದ ಮತ್ತೆ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾದರೆ ಸಂತೋಷ ಎಂದು ಯಜ್ಞ ಯಾಗಾದಿಗಳಲ್ಲಿ ಸದಾ ಭಾಗವಹಿಸುವ ಯಡಿಯೂರಪ್ಪ ಅವರ ಬಗ್ಗೆ ಅರ್ದ ಸಂತೋಷ ಮತ್ತು ಅರ್ದ ಬೇಸರದಿಂದ ಹೇಳಿದರು.
ಸದಾನಂದ ಗೌಡರ ಜೊತೆ ನನಗೆ ಯಾವುದೇ ವಿರಸವಿಲ್ಲ. ಇನ್ನು ಒಂದೂವರೆ ವರ್ಷದಲ್ಲಿ ಚುನಾವಣೆ ಎದುರಿಸಬೇಕಿದೆ. ಹಾಗಾಗಿ ಸಾಮೂಹಿಕ ನಾಯಕತ್ವದ ಅಡಿಯಲ್ಲಿ ಯಡಿಯೂರಪ್ಪ ಅವರ ಮುಂದಾಳತ್ವದಲ್ಲಿ ಚುನಾವಣೆ ಎದುರಿಸುವುದು ಸೂಕ್ತ ಎಂದು ಸುರೇಶ ಗೌಡ ಅಭಿಪ್ರಾಯ ಪಟ್ಟಿದ್ದಾರೆ. ಸುರೇಶ ಗೌಡ ಅವರ ಈ ಹೇಳಿಕೆಗೆ ನಿಮ್ಮ ಅಭಿಪ್ರಾಯ ಏನು ? ಸಮಾಜಕ್ಕೆ ತಿಳಿಸಬಾರದೇ?