ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮುಂಬೈ ತ್ರಿವಳಿ ಸ್ಫೋಟ: ಬೆಂಗಳೂರಿನಲ್ಲಿ ಐವರ ಬಂಧನ
ಗಮನಾರ್ಹವೆಂದರೆ ಬಂಧಿತ ಈ ಐದೂ ಮಂದಿ ಬೆಂಗಳೂರು ನಿವಾಸಿಗಳಲ್ಲ. ಕೇರಳ, ಹೈದರಾಬಾದ್, ಭಟ್ಕಳ, ಕಾಸರಗೋಡು ಮತ್ತು ಮಂಗಳೂರಿನವರು. ಇವರೆಲ್ಲ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧನದಲ್ಲಿರುವ ಕೈದಿಗಳು ಎಂದೂ ಮೂಲಗಳು ಹೇಳಿವೆ.
ಫಯಾಜ್ ಈ ಐವರೊಂದಿಗೂ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದ. ಅವನ ಮೊಬೈಲ್ ಕಾಲ್ ಷೀಟ್ ಅನ್ನು ಪರಿಶೀಲಿಸಿದಾಗ ಇವರ ಪತ್ತೆಯಾಗಿದೆ. ಮುಂಬೈ ಪೊಲೀಸರು ನೀಡಿದ ಸುಳಿವಿನ ಮೇರೆಗೆ ಈ ಐದು ಮಂದಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡ ಕರ್ನಾಟಕ ಆಂತರಿಕ ಭದ್ರತಾ ಪೊಲೀಸರು ಸದ್ಯಕ್ಕೆ ಇವರ ನಾಮಧೇಯಗಳನ್ನು ಬಹಿರಂಗಪಡಿಸಿಲ್ಲ.
Comments
English summary
Five persons have been picked up from Bangalore allegedly in connection with the July 13 Mumbai triple blasts. They were picked up on the basis of information revealed during the interrogation of Faiz Usmani who died in the custody of the Mumbai police on Saturday.
Story first published: Tuesday, July 19, 2011, 11:04 [IST]