ಮುಂಬೈ ತ್ರಿವಳಿ ಸ್ಫೋಟ: ಬೆಂಗಳೂರಿನಲ್ಲಿ ಐವರ ಬಂಧನ

ಗಮನಾರ್ಹವೆಂದರೆ ಬಂಧಿತ ಈ ಐದೂ ಮಂದಿ ಬೆಂಗಳೂರು ನಿವಾಸಿಗಳಲ್ಲ. ಕೇರಳ, ಹೈದರಾಬಾದ್, ಭಟ್ಕಳ, ಕಾಸರಗೋಡು ಮತ್ತು ಮಂಗಳೂರಿನವರು. ಇವರೆಲ್ಲ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧನದಲ್ಲಿರುವ ಕೈದಿಗಳು ಎಂದೂ ಮೂಲಗಳು ಹೇಳಿವೆ.
ಫಯಾಜ್ ಈ ಐವರೊಂದಿಗೂ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದ. ಅವನ ಮೊಬೈಲ್ ಕಾಲ್ ಷೀಟ್ ಅನ್ನು ಪರಿಶೀಲಿಸಿದಾಗ ಇವರ ಪತ್ತೆಯಾಗಿದೆ. ಮುಂಬೈ ಪೊಲೀಸರು ನೀಡಿದ ಸುಳಿವಿನ ಮೇರೆಗೆ ಈ ಐದು ಮಂದಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡ ಕರ್ನಾಟಕ ಆಂತರಿಕ ಭದ್ರತಾ ಪೊಲೀಸರು ಸದ್ಯಕ್ಕೆ ಇವರ ನಾಮಧೇಯಗಳನ್ನು ಬಹಿರಂಗಪಡಿಸಿಲ್ಲ.












Click it and Unblock the Notifications