ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ತ್ರಿವಳಿ ಸ್ಫೋಟ: ಬೆಂಗಳೂರಿನಲ್ಲಿ ಐವರ ಬಂಧನ

By Srinath
|
Google Oneindia Kannada News

Mumbai Blasts 2011
ಮುಂಬೈ, ಜುಲೈ 18: ಮುಂಬೈ ತ್ರಿವಳಿ ಸ್ಫೋಟಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಐವರನ್ನು ಬಂಧಿಸಲಾಗಿದೆ. ಸ್ಫೋಟದ ಸಂಬಂಧ ವಶಕ್ಕೆ ತೆಗೆದುಕೊಂಡಿದ್ದ ಫಯಾಜ್ ಉಸ್ಮಾನಿ ಶನಿವಾರ ಮೆದುಳು ಸ್ರಾವದಿಂದ ಸಾವಿಗೀಡಾವುದಕ್ಕೂ ಮುನ್ನ ಈ ಐವರ ಬಗ್ಗೆ ನೀಡಿದ್ದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಇವರನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗಮನಾರ್ಹವೆಂದರೆ ಬಂಧಿತ ಈ ಐದೂ ಮಂದಿ ಬೆಂಗಳೂರು ನಿವಾಸಿಗಳಲ್ಲ. ಕೇರಳ, ಹೈದರಾಬಾದ್, ಭಟ್ಕಳ, ಕಾಸರಗೋಡು ಮತ್ತು ಮಂಗಳೂರಿನವರು. ಇವರೆಲ್ಲ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧನದಲ್ಲಿರುವ ಕೈದಿಗಳು ಎಂದೂ ಮೂಲಗಳು ಹೇಳಿವೆ.

ಫಯಾಜ್ ಈ ಐವರೊಂದಿಗೂ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದ. ಅವನ ಮೊಬೈಲ್ ಕಾಲ್ ಷೀಟ್ ಅನ್ನು ಪರಿಶೀಲಿಸಿದಾಗ ಇವರ ಪತ್ತೆಯಾಗಿದೆ. ಮುಂಬೈ ಪೊಲೀಸರು ನೀಡಿದ ಸುಳಿವಿನ ಮೇರೆಗೆ ಈ ಐದು ಮಂದಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡ ಕರ್ನಾಟಕ ಆಂತರಿಕ ಭದ್ರತಾ ಪೊಲೀಸರು ಸದ್ಯಕ್ಕೆ ಇವರ ನಾಮಧೇಯಗಳನ್ನು ಬಹಿರಂಗಪಡಿಸಿಲ್ಲ.

English summary
Five persons have been picked up from Bangalore allegedly in connection with the July 13 Mumbai triple blasts. They were picked up on the basis of information revealed during the interrogation of Faiz Usmani who died in the custody of the Mumbai police on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X