Get Updates
Get notified of breaking news, exclusive insights, and must-see stories!

ಮುಂಬೈ ತ್ರಿವಳಿ ಸ್ಫೋಟ: ಬೆಂಗಳೂರಿನಲ್ಲಿ ಐವರ ಬಂಧನ

Mumbai Blasts 2011
ಮುಂಬೈ, ಜುಲೈ 18: ಮುಂಬೈ ತ್ರಿವಳಿ ಸ್ಫೋಟಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಐವರನ್ನು ಬಂಧಿಸಲಾಗಿದೆ. ಸ್ಫೋಟದ ಸಂಬಂಧ ವಶಕ್ಕೆ ತೆಗೆದುಕೊಂಡಿದ್ದ ಫಯಾಜ್ ಉಸ್ಮಾನಿ ಶನಿವಾರ ಮೆದುಳು ಸ್ರಾವದಿಂದ ಸಾವಿಗೀಡಾವುದಕ್ಕೂ ಮುನ್ನ ಈ ಐವರ ಬಗ್ಗೆ ನೀಡಿದ್ದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಇವರನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗಮನಾರ್ಹವೆಂದರೆ ಬಂಧಿತ ಈ ಐದೂ ಮಂದಿ ಬೆಂಗಳೂರು ನಿವಾಸಿಗಳಲ್ಲ. ಕೇರಳ, ಹೈದರಾಬಾದ್, ಭಟ್ಕಳ, ಕಾಸರಗೋಡು ಮತ್ತು ಮಂಗಳೂರಿನವರು. ಇವರೆಲ್ಲ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧನದಲ್ಲಿರುವ ಕೈದಿಗಳು ಎಂದೂ ಮೂಲಗಳು ಹೇಳಿವೆ.

ಫಯಾಜ್ ಈ ಐವರೊಂದಿಗೂ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದ. ಅವನ ಮೊಬೈಲ್ ಕಾಲ್ ಷೀಟ್ ಅನ್ನು ಪರಿಶೀಲಿಸಿದಾಗ ಇವರ ಪತ್ತೆಯಾಗಿದೆ. ಮುಂಬೈ ಪೊಲೀಸರು ನೀಡಿದ ಸುಳಿವಿನ ಮೇರೆಗೆ ಈ ಐದು ಮಂದಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡ ಕರ್ನಾಟಕ ಆಂತರಿಕ ಭದ್ರತಾ ಪೊಲೀಸರು ಸದ್ಯಕ್ಕೆ ಇವರ ನಾಮಧೇಯಗಳನ್ನು ಬಹಿರಂಗಪಡಿಸಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+