ಮಲ ಹೊರುವ ದಲಿತರ ಮೇಲೆ ದೌರ್ಜನ್ಯ
ಸವಣೂರು,ಜು.20 : ದಲಿತ ಸಮುದಾಯದಲ್ಲಿಯೇ ಅತ್ಯಂತ ಹಿಂದುಳಿದ ಪಂಗಡವಾದ ಭಂಗಿ ಸಮುದಾಯದ ಕುಟುಂಬಗಳ ಮೇಲೆ ಸ್ವತಃ ಪುರಸಭೆಯೇ ದೌರ್ಜನ್ಯ ಹಾಗೂ ಅಸ್ಪೃಷ್ಯತೆಯ ಭಾವನೆ ತೋರುತ್ತಿದೆ ಎಂದು ಸವಣೂರಿನ ಭಂಗಿ ಸಮುದಾಯದ ಹಲವು ಕುಟುಂಬಗಳು ಆಕ್ಷೇಪಿಸಿದ್ದಾರೆ.
ಈ ಕುರಿತಂತೆ ಸವಣೂರಿನ ಉಪವಿಭಾಗಾಧಿಕಾರಿ ಕೆ.ಪಿ ಮೋಹನರಾಜ್ ಅವರಿಗೆ ಸೋಮವಾರ ಮನವಿ ಸಲ್ಲಿಸಿರುವ ಭಂಗಿ ಸಮುದಾಯ, ದಲಿತ ವರ್ಗದ ಜನರನ್ನು ನಗರದಿಂದ ಹೊರಗೆ ಹಾಕುವ ಮೂಲಕ ಪುರಸಭೆ ಭಂಗಿ ಸಮುದಾಯದ ಬದುಕಿನ ಹಕ್ಕಿಗೆ ಚ್ಯುತಿ ಮಾಡುತ್ತಿದೆ ಎಂದು ಆಕ್ಷೇಪಿಸಿದ್ದಾರೆ.
ಗ್ಯಾಲರಿ: ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ಮಾಡಿದ ಭಂಗಿ
ಸವಣೂರ ನಗರದಲ್ಲಿ ಭಂಗಿ ಸಮುದಾಯದ 7 ಕುಟುಂಬಗಳಿವೆ. ವೃತ್ತಿಯಿಂದ ಭಂಗಿ (ಮನುಷ್ಯರ ಮಲ ಹೊರುವ) ವೃತ್ತಿಯನ್ನು ತಲೆತಲಾಂತರಗಳಿಂದ ಮಾಡುತ್ತಿದ್ದೇವೆ. ಸವಣೂರಿನ ಕಮಾಲ ಬಂಗಡಿ ಬಡಾವಣೆಯಲ್ಲಿ ಕಳೆದ 70 ವರ್ಷಗಳಿಂದ ವಾಸವಾಗಿದ್ದೇವೆ.
ಸವಣೂರಿನ ಬಹುತೇಕ ಎಲ್ಲ ಮನೆಗಳ ಹಾಗೂ ಸರಕಾರಿ ಕಛೇರಿಗಳ ಪಾಯಕಾನಿಗಳಲ್ಲಿನ ಮಲ ತೆಗೆಯುವ, ಸ್ವಚ್ಛಗೊಳಿಸುವ ಕಾರ್ಯವನ್ನು ಇಂದಿಗೂ ಬರಿ ಕೈಗಳಿಂದಲೇ ಮಾಡುತ್ತೇವೆ.
ವಾಸವಾಗಿರುವ ಮುರುಕಲು ಗುಡಿಸಲು ಹೊರತುಪಡಿಸಿ ವೃತ್ತಿಗೆ ಅನುಕೂಲಕರವಾದ ಯಾವದೇ ಯಾಂತ್ರಿಕ ಸೌಲಭ್ಯವನ್ನೂ ನಾವು ಈವರೆಗೂ ಹೊಂದಿರುವದಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇತ್ತಿಚಿನ ದಿನಗಳಲ್ಲಿ ನಮ್ಮ ಮನೆಗಳನ್ನೂ ತೆರವುಗೊಳಿಸಲು ಪುರಸಭೆ ಮುಂದಾಗಿದೆ. ನಮ್ಮ ಗುಡಿಸಲಿನ ಜಾಗದಲ್ಲಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲು ಪುರಸಭೆ ಯತ್ನ ಕೈಗೊಳ್ಳುತ್ತಿದೆ. ಭಂಗಿ ಸಮುದಾಯದ ಜನರಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಹಾಗೂ ಮನೆಯ ಸೌಲಭ್ಯ ಕಲ್ಪಿಸದ ಪುರಸಭೆ, 7 ಭಂಗಿ ಕುಟುಂಬಗಳನ್ನು ನಗರದಿಂದ ಹೊರಕ್ಕೆ ಹಾಕಲು ಮುಂದಾಗಿದೆ.
ಮನೆಯ ಸ್ಥಳಾಂತರ ಕುರಿತಂತೆ ನಮಗೆ ಯಾವದೇ ಲಿಖಿತವಾದ ನೋಟಿಸ್ ನೀಡದೆ, ಕೇವಲ ಬಾಯಿ ಮಾತಿನಲ್ಲಿ ಬೆದರಿಕೆ ಹಾಗೂ ಸೂಚನೆ ನೀಡಲಾಗುತ್ತಿದೆ ಎಂದು ಭಂಗಿಗಳು ದೂರಿದ್ದಾರೆ.
ಈ ಸಂದರ್ಭದಲ್ಲಿಯೇ ನಮ್ಮ ಮನೆಗಳಿಗೆ ಇದ್ದ ನಲ್ಲಿಯ ಸಂಪರ್ಕವನ್ನು ಶನಿವಾರದಂದು ಪುರಸಭೆಯ ಏಕಾಏಕಿ ಕಡಿತಗೊಳಿಸಿದೆ. ಇದರಿಂದಾಗಿ 7 ಕುಟುಂಬಗಳಿಗೂ ತೀವೃವಾದ ನೀರಿನ ಸಮಸ್ಯೆ ಎದುರಾಗಿದೆ. ನಾವು ಭಂಗಿ ಸಮುದಾಯದ ಜನರು ಇರುವ ಕಾರಣ ಸಾರ್ವಜನಿಕ ನಳಗಳಲ್ಲಿಯೂ ನಮಗೆ ನೀರು ಕೊಡುವದಿಲ್ಲ. ಹೊಸ ನಳದ ಸಂಪರ್ಕ ನೀಡಲೂ ಪುರಸಭೆಯ ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ.
ನಮ್ಮ ಮನೆಯ ಅಂಗಳದಲ್ಲಿಯೂ ಕಸ ಕೊಳಚೆ ಹಾಕುವ ಮೂಲಕ ಪರೋಕ್ಷವಾಗಿ ತೊಂದರೆ ನೀಡಲಾಗುತ್ತಿದೆ ಎಂದು ಭಂಗಿ ಸಮುದಾಯ ತಮ್ಮ ನೋವು ತೋಡಿಕೊಂಡಿದ್ದಾರೆ.
ಈ ಮೂಲಕ ನಮಗೆ ಹಲವಾರು ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿದೆ. ನಮಗೆ ಎಲ್ಲ ರೀತಿಯ ಸರಕಾರಿ ಸೌಲಭ್ಯಗಳನ್ನು ಕಲ್ಪಿಸುವರೆಗೂ ನಳದ ಸಂಪರ್ಕವನ್ನು ಯಥಾಸ್ಥಿತಿ ಮುಂದುವರೆಸಬೇಕು ಎಂದು ಕೋರಿಕೊಳ್ಳಲಾಗಿದೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications