ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಞಾನ ಭಾರತಿ ಬಳಿ ಬಿಎಂಟಿಸಿ ಬಸ್ ಭಸ್ಮ

By Mahesh
|
Google Oneindia Kannada News

File Photo: BMTC bus
ಬೆಂಗಳೂರು, ಜೂ.20: ಜ್ಞಾನಭಾರತಿ ಮುಂದೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಾಹನಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಇಂದು ನಡೆದಿದೆ. ಅದೃಷ್ಟವಶಾತ್, ಬಸ್ ನಲ್ಲಿದ್ದ ಪ್ರಯಾಣಿಕರು ಬೆಂಕಿ ಆಕಸ್ಮಿಕದಿಂದ ಪಾರಾಗಿದ್ದು, ಸುರಕ್ಷಿತವಾಗಿದ್ದಾರೆ.

ಮೆಜಿಸ್ಟಿಕ್ ನ ಕೆಂಪೇಗೌಡ ನಿಲ್ದಾಣ ದಿಂದ 19 ಎ ಫ್ಲಾಟ್ ಫಾರ್ಮ್ ನಿಂದ ದೊಡ್ಡಬಸ್ತಿ ಕಡೆಗೆ ಹೊರಟ್ಟಿದ್ದ 235 ಬಿ ಸಂಖ್ಯೆಯ ಬಿಎಂಟಿಸಿ ಬಸ್ ದುರಂತಕ್ಕೀಡಾದ ವಾಹನವಾಗಿದೆ. ಬೆಂಗಳೂರು ವಿಶ್ವ ವಿದ್ಯಾಲಯದ ಜ್ಞಾನಭಾರತಿ ಆಡಳಿತ ಕಚೇರಿಯ ಮುಂದೆ ಚಲಿಸುತ್ತಿದ್ದಾಗ ಹೊಗೆ ಹಾಗೂ ಕಿಡಿ ಕಾಣಿಸಿಕೊಂಡ ಕಾರಣ, ಬಸ್ ಚಾಲಕ ಬಸ್ ನಿಲ್ಲಿಸಿ, ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಯಲು ಹೇಳಿದ್ದಾನೆ.

ಕಿಡಿ ಬಂದ ಕಾರಣ ತಿಳಿಯಲು ಚಾಲಕ ಹಾಗೂ ನಿರ್ವಾಹಕರಿಬ್ಬರು ಇಂಜಿನ್ ಬ್ಯಾನೆಟ್ ತೆರೆದು ನೋಡಿದ್ದಾರೆ. ಬೆಂಕಿಯ ಉರಿ ಹೆಚ್ಚುತ್ತಿರುವ ಸೂಚನೆ ಕಂಡು ಬಂದ ಕಾರಣ, ಇಬ್ಬರೂ ಕೆಳಗಿಳಿದಿದ್ದಾರೆ. ನಂತರ ಬೆಂಕಿ ಬಸ್ ಪೂರ್ತಿ ಆವರಿಸಿಕೊಂಡು ಸುಟ್ಟು ಕರಕಲಾಗಿದೆ. ಹತ್ತಿರದಲ್ಲೇ ಕ್ರಿಕೆಟ್ ಆಡುತ್ತಿದ್ದ ಯುವಕರು ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ಅನಾಹುತದ ಬಗ್ಗೆ ತಿಳಿಸಿದ್ದಾರೆ.

ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ದವರು ಬೆಂಕಿ ನಂದಿಸಿದ್ದಾರೆ. ಆದರೆ ಬಸ್ ಸಂಪೂರ್ಣ ಸುಟ್ಟು ಹೋಗಿದೆ. ಚಾಲಕ ಹಾಗೂ ನಿರ್ವಾಹಕರ ಸಮಯಪ್ರಜ್ಞೆಯಿಂದ ಸುಮಾರು 25 ಪ್ರಯಾಣಿಕರ ಜೀವ ಉಳಿದಿದೆ. 16 ನೇ ಡಿಪೋಗೆ ಸೇರಿದ ಬಸ್ ಭಸ್ಮವಾಗಲು ತಾಂತ್ರಿಕ ದೋಷವೇ ಕಾರಣ ಎಂದಿರುವ ಬಿಎಂಟಿಸಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X