ಕರೆಂಟು ಇರಲಿ ಬಿಡಲಿ ಓದಿನತ್ತ ಗಮನವಿರಲಿ

ಬುಧವಾರ ಸಾಯಂಕಾಲ ಎಂಟು ಗಂಟೆಯ ನಂತರ ಧಾರಾಕಾರವಾಗಿ ಸುರಿದು ರಸ್ತೆ ಸಂಚಾರಕರು ಪರದಾಡುವಂತೆ ಮಾಡಿತು. ಬಸ್ಸುಗಳಲ್ಲಿ ಓಡಾಡುವವರು ಬಚಾವಾದರು. ಆದರೆ, ದ್ವಿಚಕ್ರ ವಾಹನ ಚಾಲಕರು ಅಚಾನಕ್ಕಾಗಿ ಸುರಿದ ವರ್ಷದಾರೆಗೆ ನೆಂದು ಮನೆಸೇರುವಂತಾಯಿತು. ಸಾಲದೆಂಬಂತೆ ಇಂದು ಬೆಳಗಿನ ಜಾವ ಕೂಡ ಸುಮಾರು ಅರ್ಧ ಗಂಟೆ ಮಳೆ ಭೂರಮೆಯನ್ನು ತಣಿಸಿದೆ.
ಭಾನುವಾರ 38 ಡಿಗ್ರಿ ಸೆಲ್ಶಿಯಸ್ ತಲುಪಿ ಮತದಾರರನ್ನು ಮನೆಯಲ್ಲಿಯೇ ಕಟ್ಟಿಹಾಕಿದ್ದ ಬೆಂಗಳೂರು ತಾಪಮಾನ ಬುಧವಾರ 29 ಡಿಗ್ರಿ ತಲುಪಿದೆ. ನಗರದಲ್ಲಿ ಭಾಗಶಃ ಮೋಡ ಮುಸುಕಿದ ವಾತಾವರಣವಿದ್ದು, ಕತ್ತಲು ಸುರಿಯುತ್ತಿದ್ದಂತೆ ಹೇಗೋ ಏನೋ. ನಿನ್ನೆಯ ಮಳೆ ರೌದ್ರಾವತಾರ ಕಂಡಿರುವ ಜನತೆ ಇಂದು ಬೇಗನೆ ಮನೆ ಸೇರುವುದು ಖಂಡಿತ.
ಬೇಸಿಗೆ ಮಳೆ ಬೆಂಗಳೂರು ಮಾತ್ರವಲ್ಲ ಕರ್ನಾಟಕದ ದಕ್ಷಿಣ ಭಾಗದಲ್ಲಿ ಅನೇಕ ಕಡೆಗಳಲ್ಲಿ ಸುರಿದು ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನತೆಗೆ ತಂಪನ್ನೆರೆದಿದೆ. ಹೆಸರುಘಟ್ಟ ಮತ್ತು ನೆಲಮಂಗಲದಲ್ಲಿ ಅತಿಹೆಚ್ಚು 5 ಸೆಂ.ಮೀ. ಮಳೆ ಸುರಿದಿದೆ. ಸಿರಾದಲ್ಲಿ 3 ಸೆಂ.ಮೀ. ಮಳೆ ಹುಯ್ದಿದೆ. ಬಂಡೀಪುರ, ದೇವನಹಳ್ಳಿ, ಹುಲಿಯೂರುದುರ್ಗ, ಕೊಳ್ಳೇಗಾಲ, ಪಾವಗಢ, ತೊಂಡೇಬಾವಿ, ಮಂಡ್ಯಗಳಲ್ಲಿಯೂ ಮಳೆ ಹನಿದಿದ್ದು, ತಾಪಮಾನ ಜರ್ರನೆ ಇಳಿದಿದೆ. ಮಂಡ್ಯದಲ್ಲಿ ಅತಿ ಕಡಿಮೆ ಎಂದರೆ 18 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿದೆ. 40.7 ಡಿಗ್ರಿ ತಾಪಮಾನ ಇರುವ ಗುಲಬರ್ಗಾ ಎಂದಿನಂತೆ ತನ್ನ ಅಗ್ರಸ್ಥಾನವನ್ನು ಕಾಪಾಡಿಕೊಂಡಿದೆ.
ಕರೆಂಟು ಕಣ್ಣಾಮುಚ್ಚಾಲೆ : ರಾಜ್ಯದಲ್ಲಿ ಏಪ್ರಿಲ್ 1ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭವಾಗುತ್ತಿದ್ದು, ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕರೆಂಟು ಹೊಡೆದಂತಾಗಿದೆ. ಬಿಬಿಎಂಪಿ ಚುನಾವಣೆ ಮುಗಿದ ಕೂಡಲೆ ಅನಿಯಮಿತ ವಿದ್ಯುತ್ ಕಡಿತ ಮೇರೆ ಮೀರಿದೆ. ವಿದ್ಯಾರ್ಥಿಗಳು ಕರೆಂಟನ್ನು ನಂಬುವ ಬದಲು ಬುಡ್ಡಿ ದೀಪಕ್ಕೆ, ಮೊಂಬತ್ತಿಗೆ ಶರಣು ಹೋಗುವಂತಾಗಿದೆ. ವಿದ್ಯಾರ್ಥಿಗಳಿಗಾಗಿ ಪರೀಕ್ಷೆ ಸಮಯದಲ್ಲಿ ನಿರಂತರ ವಿದ್ಯುತ್ ನೀಡುವುದಾಗಿ ವಾಗ್ದಾನ ನೀಡಿದ್ದ ಮುಖ್ಯಮಂತ್ರಿಗಳು ತಮ್ಮ ಮಾತನ್ನು ಮರೆತಿದ್ದಾರೆ.
ಮುನ್ಸೂಚನೆ : ರಾಜ್ಯದ ಯಾವುದೇ ಭಾಗದಲ್ಲಿ ಮೋಡ ಮುಸುಕಿರಲಿ, ಮಳೆಯೇ ಸುರಿಯಲಿ ವಿದ್ಯಾರ್ಥಿಗಳು ಮಾತ್ರ ವಿದ್ಯುತ್ತನ್ನು ನಂಬದೆ ಇದ್ದಬದ್ದ ಕಂದೀಲು, ಮೊಂಬತ್ತಿ, ಎಮರ್ಜೆನ್ಸಿ ದೀಪಗಳನ್ನು ರೆಡಿಯಾಗಿಟ್ಟುಕೊಂಡು ಓದಿನತ್ತ ಗಮನ ಹರಿಸಲಿ. ಪಾಲಕರು ಕೂಡ ಕೈಯಲ್ಲಿ ಬೀಸಣಿಗೆಯನ್ನಿಟ್ಟುಕೊಂಡು ವಿದ್ಯಾರ್ಥಿಗಳಿಗೆ ನೆರವಾಗಲಿ. ವಿದ್ಯಾರ್ಥಿಗಳಿಗೆ ದಟ್ಸ್ ಕನ್ನಡದ ಆಲ್ ದಿ ಬೆಸ್ಟ್.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications