ಗಂಡಂದಿರ ಮೇಲೆ ದೌರ್ಜನ್ಯಕ್ಕೆ ಪ್ರತಿಭಟನೆ

ಮೇಣದ ಬತ್ತಿ ಹಚ್ಚಿ ಪ್ರತಿಭಟನೆ ನಡೆಸಿದ ಅವರು, ಮಹಿಳೆಯರ ರಕ್ಷಣೆಗಾಗಿ ರೂಪಿಸಲಾಗಿರುವ ಕಾನೂನುಗಳು ಪುರುಷರ ಮೇಲೆ ದೌರ್ಜನ್ಯ ನಡೆಸುವ ಅಸ್ತ್ರಗಳಂತೆ ಬಳಕೆಯಾಗುತ್ತಿವೆ ಎಂದು ದೂರಿದರು. ವರದಕ್ಷಿಣೆ ಮತ್ತು ಕಾನೂನು ದೌರ್ಜನ್ಯ ತಡೆ ಹಾಗೂ ಕುಟುಂಬ ನಿರ್ವಹಣೆ ಕಾಯ್ದೆಸ ವಿವಾಹ ವಿಚ್ಛೇದನ ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಪೂರಕವಾಗಿ ಪೊಲೀಸ್ ವ್ಯವಸ್ಥೆಯೂ ಮಹಿಳೆಯರ ಪರವಾಗಿಯೇ ಕೆಲಸ ಮಾಡುತ್ತಿದೆ ಎಂದು ಸಂಘಟನೆ ಅಧ್ಯಕ್ಷ ಪಿ ಸುರೇಶ್ ಆರೋಪಿಸಿದರು.
ವಿವಾಹಿತ ಮಹಿಳೆಯರು ತಮ್ಮ ಪತಿ ಹಾಗೂ ಅತ್ತೆ ಮಾವಂದಿರ ವಿರುದ್ಧ ಸುಳ್ಳು ಕೇಸ್ ದಾಖಲಿಸಿ ಕಿರುಕುಳ ನೀಡುತ್ತಿರುವ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗುತ್ತಿವೆ. ಸ್ತ್ರೀಯರು ದೂರು ನೀಡಿದ ಸಂದರ್ಭದಲ್ಲಿ ಸೂಕ್ತ ತನಿಖೆ ನಡೆಸದೇ ಏಕಾಏಕಿ ಪುರುಷರನ್ನು ಬಂಧಿಸಲಾಗುತ್ತಿದೆ. ಸ್ತ್ರೀಯರು ಪತಿಯನ್ನು ನಿಯಂತ್ರಣದಟ್ಟುಕೊಳ್ಳುವ ಸಲುವಾಗಿ ಅವರ ವಿರುದ್ಧ ಸುಳ್ಳು ದೂರು ದಾಖಲಿಸುವುದು ಎಲ್ಲಡೆ ಸಾಮಾನ್ಯವಾಗಿದೆ ಎಂದು ಅವರು ದೂರಿದರು.












Click it and Unblock the Notifications