ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧ್ವಜಾರೋಹಣಕ್ಕೆ ಅಂಜುಮಾನ್ ಬಹಿಷ್ಕಾರ

By Rajendra
|
Google Oneindia Kannada News

Hubli Idgah Maidan
ಹುಬ್ಬಳ್ಳಿ, ಜ.25 : ಈದ್ಗಾ ಮೈದಾನದಲ್ಲಿ ಜನವರಿ 26 ಗಣರಾಜ್ಯೋತ್ಸವ ದಿನದಂದು ಪಾಲಿಕೆ ಆಯುಕ್ತರು ನೆರವೇರಿಸಲಿರುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ಅಂಜುಮಾನ್ - ಇ- ಇಸ್ಲಾಂ ಸಂಸ್ಥೆ ಭಾನುವಾರ ಸಂಜೆ ಒಮ್ಮತದ ನಿರ್ಣಯ ಕೈಗೊಂಡಿದೆ. ಧ್ವಜಾರೋಹಣ ನೆರವೇರಿಸುವ ಅಧಿಕಾರವನ್ನು ಸರಕಾರ ಪಾಲಿಕೆ ಆಯುಕ್ತರಿಗೆ ನೀಡಿರುವ ಕ್ರಮವನ್ನು ಖಂಡಿಸಿ ಸಂಸ್ಥೆ ಈ ನಿರ್ಧಾರ ತಾಳಿದೆ.

ಅಂಜುಮಾನ್ ಸಂಸ್ಥೆಯ 24ವಿದ್ಯಾ ಸಂಸ್ಥೆಗಳಲ್ಲಿ ಜ. 26ರಂದು ಧ್ವಜಾರೋಹಣ ನಡೆಯಲಿದೆ. 1995ರ ನಂತರ ಈ ವಿವಾದೀತ ಮೈದಾನದಲ್ಲಿ ಅಂಜುಮಾನ್ ಧ್ವಜಾರೋಹಣ ನೆರವೇರಿಸುತ್ತಿತ್ತು. ಸರಕಾರ ಇದನ್ನು ಪರಿಗಣಿಸದೆ ಮುಸ್ಲಿಂ ಸಮುದಾಯದ ಜನರ ಮನಸ್ಸಿಗೆ ನೋವಾಗುವಂತ ನಿರ್ಣಯ ಕೈಗೊಂಡಿದೆ.

ಅವಳಿ ನಗರದಲ್ಲಿ ಧ್ವಜಾರೋಹಣ ವೇಳೆ ಮುಸ್ಲಿಮರು ಭಾವೋದ್ವೇಗಕ್ಕೆ ಒಳಗಾಗದೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳಬೇಕೆಂದು ಸಂಸ್ಥೆಯ ಅಧ್ಯಕ್ಷ ಮೊಹಮದ್ ಯೂಸಫ್ ಸವಣೂರು ಹೇಳಿಕೆ ನೀಡಿದ್ದಾರೆ. ಸಭೆಯಲ್ಲಿ ಸಮುದಾಯದ 147ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X