ಧ್ವಜಾರೋಹಣಕ್ಕೆ ಅಂಜುಮಾನ್ ಬಹಿಷ್ಕಾರ

ಅಂಜುಮಾನ್ ಸಂಸ್ಥೆಯ 24ವಿದ್ಯಾ ಸಂಸ್ಥೆಗಳಲ್ಲಿ ಜ. 26ರಂದು ಧ್ವಜಾರೋಹಣ ನಡೆಯಲಿದೆ. 1995ರ ನಂತರ ಈ ವಿವಾದೀತ ಮೈದಾನದಲ್ಲಿ ಅಂಜುಮಾನ್ ಧ್ವಜಾರೋಹಣ ನೆರವೇರಿಸುತ್ತಿತ್ತು. ಸರಕಾರ ಇದನ್ನು ಪರಿಗಣಿಸದೆ ಮುಸ್ಲಿಂ ಸಮುದಾಯದ ಜನರ ಮನಸ್ಸಿಗೆ ನೋವಾಗುವಂತ ನಿರ್ಣಯ ಕೈಗೊಂಡಿದೆ.
ಅವಳಿ ನಗರದಲ್ಲಿ ಧ್ವಜಾರೋಹಣ ವೇಳೆ ಮುಸ್ಲಿಮರು ಭಾವೋದ್ವೇಗಕ್ಕೆ ಒಳಗಾಗದೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳಬೇಕೆಂದು ಸಂಸ್ಥೆಯ ಅಧ್ಯಕ್ಷ ಮೊಹಮದ್ ಯೂಸಫ್ ಸವಣೂರು ಹೇಳಿಕೆ ನೀಡಿದ್ದಾರೆ. ಸಭೆಯಲ್ಲಿ ಸಮುದಾಯದ 147ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.











Click it and Unblock the Notifications