ಬಸು, ಅಶ್ವತ್ಥ್ ನಿಧನ, ದೇವೇಗೌಡರ ಸಂತಾಪ

ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಶ್ಚಿಮ ಬಂಗಾಲದ ಸುಧಾರಣೆಯ ಹರಿಕಾರ ಬಸು ಅವರ ಸಾಧನೆಯನ್ನು ದೇಶದ ರಾಜಕಾರಣಕ್ಕೆ ಮಾದರಿಯಾಗಿದೆ ಎಂದರು. ಸಿಪಿಐಎಂ ಪಕ್ಷದ ತತ್ವಸಿದ್ಧಾಂತಗಳನ್ನು ಜೆಡಿಎಸ್ ಹೊಂದಿದ ಸಮಾಜದ ಕಟ್ಟಕಡೆಯ ಮನುಷ್ಯನಿಗಾಗಿ ಬಸು ಕೊನೆಯವರೆಗೂ ನಡೆಸಿದರು. ಜೆಡಿಎಸ್ ಕೂಡ ಅದೇ ದಾರಿಯಲ್ಲಿ ಹೆಜ್ಜೆ ಇರಿಸಲಿದೆ. ಅಲ್ಲದೇ ಬಸು ಮತ್ತು ನಟ ಅಶ್ವತ್ಥ್ ನಿಧನದಿಂದಾಗ ಎರಡು ದಿನಗಳ ಕಾಲ ಜೆಡಿಎಸ್ ಕಾರ್ಯಕ್ರಮಗಳಿಗೆ ರಜೆ ಘೋಷಿಸಿಲಾಗಿದೆ ಎಂದು ದೇವೇಗೌಡ ವಿವರಿಸಿದರು.
ಗ್ಯಾಲರಿ: ಮೇರುನಟ ಅಶ್ವಥ್ ಚಿತ್ರಸಂಪುಟ
ಬಸು ಮತ್ತು ಅಶ್ವತ್ಥ್ ನಿಧನದಿಂದ ರಾಜಕೀಯ ಮತ್ತು ಕನ್ನಡ ಚಿತ್ರರಂಗ ಬಡವಾಗಿದೆ. ಇವರ ನಿಧನದ ದುಖಃವನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ಭಗವಂತ ಈ ಕುಟುಂಬಗಳಿಗೆ ನೀಡಲಿ ಎಂದು ದೇವೇಗೌಡ ಹೇಳಿದರು. ನೈಸ್ ಗೆ ಸಂಬಂಧಿಸಿದಂತೆ ಮತ್ತೆ ಗುಟುರು ಹಾಕಿದ ದೇವೇಗೌಡ, ನೈಸ್ ವಿರುದ್ಧ ಅಕ್ರಮಗಳ ವಿರುದ್ಧ ಹೋರಾಟ ನಿಲ್ಲುವುದಿಲ್ಲ. ರೈತರಿಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಯುತ್ತಲೇ ಇರುತ್ತದೆ ಎಂದರು.












Click it and Unblock the Notifications