ಜನವರಿ 18ರಂದು ನಕುಲ್ ಶೆಣೈ ಜಾದೂ ಪ್ರದರ್ಶನ

ನಂಬಲಸಾಧ್ಯವಾದ ಮ್ಯಾಜಿಕ್ ಟ್ರಿಕ್ ಗಳನ್ನು ಪ್ರದರ್ಶಿಸಲಿರುವ ಶೆಣೈ ಅವರ ಕೈಚಳಕವನ್ನು ನೋಡಿಯೇ ನಂಬಬೇಕು. ಏಕೆಂದರೆ, ನೋಡದೆಯೇ ಇವರು ಇಂಥ ಮಾಯಾಜಾಲವನ್ನು ಸೃಷ್ಟಿಸುತ್ತಾರೆಂದು ನಂಬುವುದೂ ಅಸಾಧ್ಯ. 'ದಿಸ್ ಈಸ್ ಇಂಪಾಸಿಬಲ್, ಇದನ್ನು ಹೇಗೆ ಮಾಡಲು ಸಾಧ್ಯ' ಎಂದು ಉದ್ಗರಿಸಿದವರಿದ್ದಾರೆ. 'ಇದೇನು ಮ್ಯಾಜಿಕ್ಕೋ, ಮನಸ್ಸಿನೊಂದಿಗೆ ಆಡುವ ತಂತ್ರಗಾರಿಕೆಯೋ' ಎಂಬು ಹೇಳಿದವರೂ ಇದ್ದಾರೆ.
ಹೌದು, ನಕುಲ್ ಶೆಣೈ ವೀಕ್ಷಕರ ಮನಸ್ಸಿನೊಂದಿಗೆ ಆಟವಾಡುತ್ತಾರೆ, ಅವರ ಮನದಲ್ಲಿ ಏನು ಹುದುಗಿದೆಯೆಂದು ಬಗೆದು ತೋರಿಸುತ್ತಾರೆ. ಅದ್ಭುತ ಮನರಂಜನೆ ನೀಡುವ ಅವರ ಟ್ರಿಕ್ಕುಗಳು ಮನಕ್ಕೆ ಮುದ ನೀಡುವುದರ ಜೊತೆಗೆ ಸಂವಾದಿಯಾಗಿಯೂ ಇರುತ್ತವೆ. ನಕುಲ್ ಮನಸ್ನನ್ನು ಓದಬಲ್ಲರು, ಭವಿಷ್ಯದಲ್ಲಿ ಏನು ಅಡಗಿದೆ ಎಂಬುದನ್ನೂ ಹೇಳಬಲ್ಲರು ಮತ್ತು ಕಲ್ಪನೆಗೂ ಮೀರಿದ ನೆನಪಿನ ಶಕ್ತಿಯನ್ನು ಪ್ರದರ್ಶಿಸಬಲ್ಲರು.
ಅಂತಾರಾಷ್ಟ್ರೀಯ ಖ್ಯಾತಿ ಹೊಂದಿರುವ ಅಚ್ಚ ಕನ್ನಡಿಗ ನಕುಲ್ ಶೆಣೈ ಇಲ್ಲಿಯವರೆಗೆ ಭಾರತದ ಮತ್ತು ಅಂತಾರಾಷ್ಟ್ರೀಯ ಕಂಪನಿಗಳಿಗೆ ಮಾತ್ರ ಜಾದೂ ಪ್ರದರ್ಶನ ನೀಡುತ್ತಿದ್ದರು. ಏಷ್ಯಾ, ಅಮೆರಿಕಾ, ಯುರೋಪ್, ಗಲ್ಫ್ ರಾಷ್ಟ್ರಗಳಲ್ಲಿ ಕಾರ್ಪೋರೇಟ್ ವಲಯಗಳಲ್ಲಿ ಇಂದ್ರಜಾಲ ಪ್ರದರ್ಶಿಸಿರುವ ಶೆಣೈ ಈಗ ಪ್ರಪ್ರಥಮ ಬಾರಿಗೆ ಸಾರ್ವಜನಿಕರೆದುರು ಸೈಕಿಕ್ ಮಾಯಾಜಾಲವನ್ನು ತೆರೆದಿಡುತ್ತಿದ್ದಾರೆ.
ನೆನಪಿರಲಿ, ಈ ಶೋ ಕೇವಲ ಆಹ್ವಾನಿತರಿಗೆ ಮಾತ್ರ! ಕೆಲವೇ ಕೆಲವು ಟಿಕೆಟ್ಟುಗಳನ್ನು ಮಾರಲಾಗುತ್ತಿದೆ. ಪ್ರದರ್ಶನವಿರುವುದು ಚೌಡಯ್ಯ ಸ್ಮಾರಕ ಭವನದಲ್ಲಿ ಜನವರಿ 18ರಂದು. ಆಸಕ್ತರು ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಿಲಾಯನ್ಸ್ ಟೈಮ್ ಔಟ್ ನಲ್ಲಿ ಟಿಕೆಟ್ ಪಡೆಯಬಹುದು.
ಮತ್ತೊಮ್ಮೆ ಗಮನಿಸಿ
ಸ್ಥಳ : ಚೌಡಯ್ಯ ಸ್ಮಾರಕ ಭವನ, ಗಾಯತ್ರಿ ದೇವಿ ಪಾರ್ಕ್ ಎಕ್ಸ್ ಟೆನ್ಶನ್, 16ನೇ ಅಡ್ಡರಸ್ತೆ, ವೈಯಾಲಿಕಾವಲ್, ಬೆಂಗಳೂರು
ದಿನಾಂಕ : ಭಾನುವಾರ, ಜನವರಿ 18
ಸಮಯ : ಸಂಜೆ 6.30
ಕಾಲಾವಧಿ : ಒಂದು ಗಂಟೆ
(ದಟ್ಸ್ ಕನ್ನಡ ವಾರ್ತೆ)
ನಕುಲ್ ಶೆಣೈ ಅಂತರ್ಜಾಲ ತಾಣ : http://www.nakulshenoy.com/
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications