ಜನವರಿ 18ರಂದು ನಕುಲ್ ಶೆಣೈ ಜಾದೂ ಪ್ರದರ್ಶನ

ನಂಬಲಸಾಧ್ಯವಾದ ಮ್ಯಾಜಿಕ್ ಟ್ರಿಕ್ ಗಳನ್ನು ಪ್ರದರ್ಶಿಸಲಿರುವ ಶೆಣೈ ಅವರ ಕೈಚಳಕವನ್ನು ನೋಡಿಯೇ ನಂಬಬೇಕು. ಏಕೆಂದರೆ, ನೋಡದೆಯೇ ಇವರು ಇಂಥ ಮಾಯಾಜಾಲವನ್ನು ಸೃಷ್ಟಿಸುತ್ತಾರೆಂದು ನಂಬುವುದೂ ಅಸಾಧ್ಯ. 'ದಿಸ್ ಈಸ್ ಇಂಪಾಸಿಬಲ್, ಇದನ್ನು ಹೇಗೆ ಮಾಡಲು ಸಾಧ್ಯ' ಎಂದು ಉದ್ಗರಿಸಿದವರಿದ್ದಾರೆ. 'ಇದೇನು ಮ್ಯಾಜಿಕ್ಕೋ, ಮನಸ್ಸಿನೊಂದಿಗೆ ಆಡುವ ತಂತ್ರಗಾರಿಕೆಯೋ' ಎಂಬು ಹೇಳಿದವರೂ ಇದ್ದಾರೆ.
ಹೌದು, ನಕುಲ್ ಶೆಣೈ ವೀಕ್ಷಕರ ಮನಸ್ಸಿನೊಂದಿಗೆ ಆಟವಾಡುತ್ತಾರೆ, ಅವರ ಮನದಲ್ಲಿ ಏನು ಹುದುಗಿದೆಯೆಂದು ಬಗೆದು ತೋರಿಸುತ್ತಾರೆ. ಅದ್ಭುತ ಮನರಂಜನೆ ನೀಡುವ ಅವರ ಟ್ರಿಕ್ಕುಗಳು ಮನಕ್ಕೆ ಮುದ ನೀಡುವುದರ ಜೊತೆಗೆ ಸಂವಾದಿಯಾಗಿಯೂ ಇರುತ್ತವೆ. ನಕುಲ್ ಮನಸ್ನನ್ನು ಓದಬಲ್ಲರು, ಭವಿಷ್ಯದಲ್ಲಿ ಏನು ಅಡಗಿದೆ ಎಂಬುದನ್ನೂ ಹೇಳಬಲ್ಲರು ಮತ್ತು ಕಲ್ಪನೆಗೂ ಮೀರಿದ ನೆನಪಿನ ಶಕ್ತಿಯನ್ನು ಪ್ರದರ್ಶಿಸಬಲ್ಲರು.
ಅಂತಾರಾಷ್ಟ್ರೀಯ ಖ್ಯಾತಿ ಹೊಂದಿರುವ ಅಚ್ಚ ಕನ್ನಡಿಗ ನಕುಲ್ ಶೆಣೈ ಇಲ್ಲಿಯವರೆಗೆ ಭಾರತದ ಮತ್ತು ಅಂತಾರಾಷ್ಟ್ರೀಯ ಕಂಪನಿಗಳಿಗೆ ಮಾತ್ರ ಜಾದೂ ಪ್ರದರ್ಶನ ನೀಡುತ್ತಿದ್ದರು. ಏಷ್ಯಾ, ಅಮೆರಿಕಾ, ಯುರೋಪ್, ಗಲ್ಫ್ ರಾಷ್ಟ್ರಗಳಲ್ಲಿ ಕಾರ್ಪೋರೇಟ್ ವಲಯಗಳಲ್ಲಿ ಇಂದ್ರಜಾಲ ಪ್ರದರ್ಶಿಸಿರುವ ಶೆಣೈ ಈಗ ಪ್ರಪ್ರಥಮ ಬಾರಿಗೆ ಸಾರ್ವಜನಿಕರೆದುರು ಸೈಕಿಕ್ ಮಾಯಾಜಾಲವನ್ನು ತೆರೆದಿಡುತ್ತಿದ್ದಾರೆ.
ನೆನಪಿರಲಿ, ಈ ಶೋ ಕೇವಲ ಆಹ್ವಾನಿತರಿಗೆ ಮಾತ್ರ! ಕೆಲವೇ ಕೆಲವು ಟಿಕೆಟ್ಟುಗಳನ್ನು ಮಾರಲಾಗುತ್ತಿದೆ. ಪ್ರದರ್ಶನವಿರುವುದು ಚೌಡಯ್ಯ ಸ್ಮಾರಕ ಭವನದಲ್ಲಿ ಜನವರಿ 18ರಂದು. ಆಸಕ್ತರು ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಿಲಾಯನ್ಸ್ ಟೈಮ್ ಔಟ್ ನಲ್ಲಿ ಟಿಕೆಟ್ ಪಡೆಯಬಹುದು.
ಮತ್ತೊಮ್ಮೆ ಗಮನಿಸಿ
ಸ್ಥಳ : ಚೌಡಯ್ಯ ಸ್ಮಾರಕ ಭವನ, ಗಾಯತ್ರಿ ದೇವಿ ಪಾರ್ಕ್ ಎಕ್ಸ್ ಟೆನ್ಶನ್, 16ನೇ ಅಡ್ಡರಸ್ತೆ, ವೈಯಾಲಿಕಾವಲ್, ಬೆಂಗಳೂರು
ದಿನಾಂಕ : ಭಾನುವಾರ, ಜನವರಿ 18
ಸಮಯ : ಸಂಜೆ 6.30
ಕಾಲಾವಧಿ : ಒಂದು ಗಂಟೆ
(ದಟ್ಸ್ ಕನ್ನಡ ವಾರ್ತೆ)
ನಕುಲ್ ಶೆಣೈ ಅಂತರ್ಜಾಲ ತಾಣ : http://www.nakulshenoy.com/
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications