ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹೆಲ್ಮೆಟ್ಗೂ ಮತ್ತು ಉಗ್ರರಿಗೂ ನಂಟು ಬೆಸೆದ ವಾಟಾಳ್!
ಬೆಂಗಳೂರು : ಹೆಲ್ಮೆಟ್ ಕಡ್ಡಾಯಗೊಳಿಸಿರುವ ಸರ್ಕಾರದ ಕ್ರಮದಿಂದ, ಉಗ್ರಗಾಮಿಗಳು ಎಲ್ಲೆಡೆ ನಿರಾತಂಕವಾಗಿ ಸುತ್ತಾಡಬಹುದು ಎಂದಿರುವ ಶಾಸಕ ವಾಟಾಳ್ ನಾಗರಾಜ್, ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಅವರು, ಹೆಲ್ಮೆಟ್ ಕಡ್ಡಾಯ ಮಾಡುವ ಮೂಲಕ, ಸರ್ಕಾರ ನಾಗರಿಕರ ಹಕ್ಕುಗಳನ್ನು ಕಸಿದಿದೆ. ಹೆಲ್ಮೆಟ್ ಕಿರಿಕಿರಿ ಮಾತ್ರವಲ್ಲ, ಶ್ರೀಸಾಮಾನ್ಯರಿಗೆ ಆರ್ಥಿಕವಾಗಿಯೂ ಹೊರೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹೆಲ್ಮೆಟ್ ಕಡ್ಡಾಯ ಮಾಡಿರುವುದು ಸಾರ್ವಜನಿಕರ ಹಿತದೃಷ್ಟಿಯಿಂದಲ್ಲ. ಹೆಲ್ಮೆಟ್ ತಯಾರಕರು ಮತ್ತು ಮಾರಾಟಗಾರರ ಹಿತ ಕಾಯುವುದು ಸರ್ಕಾರದ ಒಳ ಉದ್ದೇಶ. ಹೆಲ್ಮೆಟ್ ಬಳಕೆಯಿಂದ ಕೂದಲು ಉದುರುವಿಕೆ, ಕಿವುಡುತನ ಮತ್ತಿತರ ಸಮಸ್ಯೆಗಳು ಬರುವ ಸಾಧ್ಯತೆಗಳಿವೆ ಎನ್ನುವುದು ವಾಟಾಳ್ ನಾಗರಾಜ್ ಈ ವಾದವನ್ನು ನೀವು ಒಪ್ಪುವಿರಾ?
(ದಟ್ಸ್ ಕನ್ನಡ ವಾರ್ತೆ)
Comments
Story first published: Tuesday, November 14, 2006, 23:53 [IST]