ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರಿನಲ್ಲಿ ಮದುವೆ-ಕುಟುಂಬದ ಮೇಲೆ ಬೆಳಕು

By Staff
|
Google Oneindia Kannada News

ಮಂಗಳೂರು : ‘ಮದುವೆ ಮತ್ತು ಕುಟುಂಬದ ಔಚಿತ್ಯ: ಭಾರತೀಯರ ದೃಷ್ಟಿಕೋನ’ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ನಗರದಲ್ಲಿ ನ.17ರಂದು ಆರಂಭಗೊಳ್ಳಲಿದೆ.

ಆಂಧ್ರಪ್ರದೇಶ, ಪುಣೆ, ಚೆನ್ನೈ, ಕೇರಳ, ಕರ್ನಾಟಕದ 12 ಮಂದಿ ಖ್ಯಾತನಾಮರು, ಈ ವಿಚಾರಸಂಕಿರಣದಲ್ಲಿ ತಮ್ಮ ವಿಚಾರಗಳನ್ನು ಮಂಡಿಸುವರು. ಕೆನರಾ ಕಾಲೇಜು ವಿಚಾರ ಸಂಕಿರಣವನ್ನು ಆಯೋಜಿಸಿದ್ದು, ಎಲ್ಲಾ ವಿಶ್ವವಿದ್ಯಾಲಯಗಳಿಗೂ ಆಹ್ವಾನ ನೀಡಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ನಾಗರಾಜ ರಾವ್‌ ಜವಳಿ ತಿಳಿಸಿದ್ದಾರೆ.

ವಿವಿಧ ಸಮುದಾಯಗಳಲ್ಲಿನ ವಿವಾಹ ಪದ್ಧತಿಗಳು, ದಂಪತಿಗಳ ನಡುವಿನ ಸವಾಲುಗಳು, ಮಹಿಳೆಯ ಸ್ಥಾನ ಮಾನ, ಸಿಹಿ ದಾಂಪತ್ಯದ ಗುಟ್ಟುಗಳು, ವಿವಾಹದಲ್ಲಿ ಸೆಕ್ಸ್‌ ಪಾತ್ರ, ಕ್ರಿಶ್ಚಿಯನ್ನರಲ್ಲಿ ವಿವಾಹ ಪದ್ಧತಿ, ವೇದಗಳಲ್ಲಿ ವಿವಾಹದ ಪರಿಕಲ್ಪನೆ ಮತ್ತಿತರ ಸಂಗತಿಗಳ ಮೇಲೆ ವಿಚಾರ ಸಂಕಿರಣ ಬೆಳಕು ಚೆಲ್ಲಲಿದೆ ಎಂದು ನಾಗರಾಜರಾವ್‌ ಜವಳಿ ಹೇಳಿದ್ದಾರೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X