ಕಾಶ್ಮೀರ ಸಮಸ್ಯೆಗೆ ಪೂರ್ಣವಿರಾಮದ ನಿರೀಕ್ಷೆಯಲ್ಲಿ ಪಾಕ್ ನಾಗರಿಕರು
ಇಸ್ಲಾಮಾಬಾದ್ : ಪಾಕಿಸ್ತಾನದ ಅಧ್ಯಕ್ಷ ಮುಷರ್ರಫ್ ಅವರಿಗೆ ಭಾರತದಲ್ಲಿ ಸಿಕ್ಕ ಗೌರವಾದರಗಳು ಪ್ರಧಾನಿ ವಾಜಪೇಯಿ ಅವರಿಗೂ ಪಾಕ್ನಲ್ಲಿ ದೊರೆಯಲಿದೆ ಎಂಬ ಅಭಿಪ್ರಾಯಗಳು ಪಾಕಿಸ್ತಾನದ ನಾಗರಿಕರಿಂದ ಹೊಮ್ಮುತ್ತಿವೆ. ಪಾಕಿಸ್ತಾನಕ್ಕೆ ಬನ್ನಿ ಎಂದು ಮುಷರ್ರಫ್ ಕೊಟ್ಟ ಆಮಂತ್ರಣಕ್ಕೆ ವಾಜಪೇಯಿ ಒಪ್ಪಿರುವುದು ಪಾಕ್ನ ಮಂದಿಗೆ ಖುಷಿ ತಂದಿದೆ.
ಇಲ್ಲಿನ ಮಾಧ್ಯಮಗಳಲ್ಲೂ ಆಗ್ರಾ ಶೃಂಗಸಭೆಯದೇ ಸದ್ದು. ಈ ಬಾರಿ ಕಾಶ್ಮೀರ ಸಮಸ್ಯೆ ಬಗೆಹರಿದೇ ತೀರುತ್ತದೆ ಎಂಬ ಬಲವಾದ ವಿಶ್ವಾಸ ಕೆಲವು ನಾಗರಿಕರದ್ದು. ಭಾರತ- ಪಾಕಿಸ್ತಾನದ ನಡುವಣ ವೈಷಮ್ಯಕ್ಕೆ ಕಾಶ್ಮೀರ ಸಮಸ್ಯೆಯಾಂದೇ ಕಾರಣ. ಅದು ಬಗೆಹರಿದಲ್ಲಿ ಉಭಯ ರಾಷ್ಟ್ರಗಳ ಸಂಬಂಧ ಉತ್ತಮವಾಗಲಿದೆ. ಭಾರತದ ಜೊತೆ ಶಾಂತಿ, ಸೌಹಾರ್ದಯುತ ಸಂಬಂಧವನ್ನೇ ನಾವು ಬಯಸೋದು ಅನ್ನುತ್ತಾರೆ ಪಾಕ್ನ ಒಬ್ಬ ನಾಗರಿಕ.
ತಮ್ಮ ವಿರೋಧಿಗಳ ಹೆಜ್ಜೆಯನ್ನು ಹಿಮ್ಮೆಟ್ಟಿಸಲು ಮುಷರ್ರಫ್ ಅವರಿಗೆ ಸಿಕ್ಕಿರುವ ಸದವಕಾಶವಿದು. ವಾಜಪೇಯಿ ಅವರ ಜೊತೆ ಮಾತುಕತೆಯಲ್ಲಾಗಲೀ, ಒಡಂಬಡಿಕೆಗೆ ಸಹಿ ಹಾಕುವ ವಿಷಯದಲ್ಲಾಗಲೀ ಅವರು ಹಿಂದೂಮುಂದು ನೋಡಬೇಕಾದ ಅಗತ್ಯವಿಲ್ಲ. ಸೇನಾಬಲಗಳ ಪ್ರತಿನಿಧಿಯಾದ ಮುಷರ್ರಫ್ ಯಶಸ್ಸನ್ನು ಹೊತ್ತು ವಾಪಸ್ಸಾಗುವರಂಬ ವಿಶ್ವಾಸ ನಮಗಿದೆ ಎನ್ನುತ್ತಾರೆ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಮುಷಾಹಿದ್ ಹುಸೇನ್.
ಪಾಕಿಸ್ತಾನೀಯರ ಕಣ್ಣುಗಳು ಈ ಹೊತ್ತು ಆಗ್ರಾದತ್ತ ದೃಷ್ಟಿ ನೆಟ್ಟಿವೆ. ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧದ ಭವಿತವ್ಯ ಸೋಮವಾರ ಹೊಸ ತಿರುವು ಪಡೆಯಲಿ ಎಂಬ ಹಾರೈಕೆ ಆ ಕಣ್ಣುಗಳಲ್ಲಿ.
(ಇನ್ಫೋ ವಾರ್ತೆ)
what do you think about this ?
ಮುಖಪುಟ / ಆಗ್ರಾ ಶೃಂಗಸಭೆ
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications