ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಈ ದಿನ ನಿಮ್ಮದು. ಅಂದಮಾತ್ರಕ್ಕೆ ಎಲ್ಲಾ ಮೂಗಿನ ನೇರಕ್ಕೇ ಸಾಗುತ್ತದೆ ಎಂದೇನಲ್ಲ . ಆರೋಗ್ಯ ಯಥಾಸ್ಥಿತಿಯೇ. ಆದರೆ, ಆಫೀಸಿನಲ್ಲಿ ಸಾಕಷ್ಟು ಉಲ್ಲಾಸದ ವಾತಾವರಣ ಕಾಣುತ್ತೀರಿ.ವೃಷಭ : ನಾಳೆ ಮಾಡಬೇಕಾದ ಕೆಲಸವನ್ನು ಇಂದೇ ಮುಗಿಸುವ ಉತ್ಸಾಹ ನಿಮ್ಮದು. ಇದರಿಂದಾಗಿಯೇ ಹೊಸ ಅವಕಾಶ ಹೊಸಿತಿಲಲ್ಲಿ ನಿಂತಿದೆ. ಈ ನಿಟ್ಟಿನಲ್ಲಿ ಹಿತಚಿಂತಕರ ಸಲಹೆ ಅತ್ಯಗತ್ಯ.
ಮಿಥುನ : ಉದರಬಾಧೆಗೆ ವಿಶೇಷವಾದ ಮದ್ದೇನೂ ಬೇಕಿಲ್ಲ . ವಯಸ್ಸಾಯಿತು ಅನ್ನುವ ಆಲೋಚನೆಯಿಂದ ಹೊರ ಬನ್ನಿ . ಅಧ್ಯಯನಶೀಲತೆ ನಿಮಗೆ ಸಂಗಾತಿಯಾಗಲು ಹವಣಿಸುತ್ತಿದೆ, ತೊಡಗಿಸಿಕೊಳ್ಳಿ.
ಕಟಕ : ಕೋರ್ಟ್ ವ್ಯವಹಾರಗಳಲ್ಲಿ ಅನುಕೂಲದ ದಿನ. ವಾಣಿಜ್ಯ ಒಪ್ಪಂದಗಳೂ ಹಿತಕರವಾಗಿಯೇ ಇರುತ್ತವೆ. ಅದರಿಂದಾಗಿ ಈ ದಿನ ನಿಮಗೆ ಯಶಸ್ಸಿನ ದಿನ ಅನ್ನಲಿಕ್ಕೆ ಅಡ್ಡಿಯಿಲ್ಲ.
ಸಿಂಹ : ಆರೋಗ್ಯದಲ್ಲಿ ಏರುಪೇರು ಸಹಜವಾದ್ದರಿಂದ ಅನಾರೋಗ್ಯದ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ . ಕುಲದೇವರನ್ನು ಅರ್ಚಿಸಿ. ವೃಥಾ ನೆಮ್ಮದಿ ಕೆಡಿಸಿಕೊಳ್ಳಬೇಡಿ.
ಕನ್ಯಾ : ನೀವು ಮಾಡುತ್ತಿರುವ ಕೆಲಸದ ಫಲಶ್ರುತಿ ಏನೆಂಬುದರ ಬಗ್ಗೆ ಮತ್ತೊಮ್ಮೆ ಚಿಂತಿಸುವುದು ಒಳ್ಳಿತು. ಹೊಸ ಅವಕಾಶಗಳಿಗೆ ಅಡಿಯಿಡುವಾಗಲೂ ಈ ಅವಲೋಕನ ಒಳ್ಳೆಯದೇ.
ತುಲಾ : ಅತಿಥಿಗಳ ಕಾರಣವಾಗಿ ಸಾಕಷ್ಟು ಹಣ ಕೈ ಬಿಡಲಿದೆ. ಇದರಿಂದ ತಪ್ಪಿಸಿಕೊಳ್ಳುವ ಯಾವ ಮಾರ್ಗವೂ ಇಲ್ಲವಾದುದರಿಂದ ಬೇಜಾರಿಲ್ಲದೆ ಅನುಭವಿಸಿಬಿಡಿ. ನೀವು ಅತಿಥಿಯಾದಾಗ ಸೇಡು ತೀರಿಸಿಕೊಂಡರಾಯಿತು.
ವೃಶ್ಚಿಕ : ಇತರರ ಕ್ಷುಲ್ಲಕತನವನ್ನು ಎತ್ತಿ ತೋರುವ ನಿಮ್ಮ ನಡವಳಿಕೆ ಅದಕ್ಕಿಂತ ಭಿನ್ನವೇನಲ್ಲ . ಮಿತಿಗಳನ್ನು ಮೀರಿದ್ದೇ ಆದಲ್ಲಿ ಇಷ್ಟ ಪಾತ್ರರ ಪ್ರೀತಿ, ವಿಶ್ವಾಸಕ್ಕೆ ಎರವಾಗುತ್ತೀರಿ.
ಧನಸ್ಸು : ಕುಟುಂಬದೊಂದಿಗಿನ ಹರ್ಷದ ಲಹರಿ ಮುಂದುವರಿಯುತ್ತದೆ. ನಮ್ಮ ಮನೆ, ಅಕ್ಕರೆ ತುಂಬಿದ ಚಂದದ ಅರಮನೆ ಎಂದು ನೀವು ಹಾಡಿ ಕುಪ್ಪಳಿಸಿದರೂ ಅಚ್ಚರಿಯಿಲ್ಲ.
ಮಕರ : ಪರೀಕ್ಷೆಗಳು ಹೊಸಿತಿಲಲ್ಲೇ ಇರುವುದರಿಂದ ನೀವು ಸರಸ್ವತಿಯಾಗುವ ಕಾಲ ಹತ್ತಿರವಾಯಿತು. ಈವರೆಗಿನ ಚಟುವಟಿಕೆಗಳಿಗೆ ನಮಸ್ಕಾರ ಹೇಳಿ ದೀಕ್ಷೆ ವಹಿಸಿ. ಯಶಸ್ಸಿನ ಬಗ್ಗೆ ಅಂಜುವ ಕಾರಣವೇನೂ ಇಲ್ಲ.
ಕುಂಭ : ಅಕ್ಕಿಯೂ ಸವೆಯಬಾರದು, ನಂಟೂ ಉಳಿಯಬೇಕು ಅನ್ನುವ ವ್ಯವಹಾರತನಕ್ಕಿದು ಕಾಲವಲ್ಲ . ಇಷ್ಟಕ್ಕೂ ಬಲವಂತದ ಸಂಬಂಧಗಳು ಗಾಢವಾದ ನೆನಪನ್ನಾಗಲೀ ವಿಷಾದವನ್ನಾಗಲೀ ಉಳಿಸುವುದಿಲ್ಲ.
ಮೀನ : ದೊಡ್ಡತನ ಅನ್ನುವುದನ್ನು ಗೊಮ್ಮಟನ ನೋಡಿ ಕಲಿಯಬೇಕು ಎಂದು ಯಾರಾದರೂ ಹೇಳಿದರೆ ಅಪಾರ್ಥ ಮಾಡಿಕೊಳ್ಳುವುದು ಬೇಡ. ನಿಮ್ಮ ಬಲಹೀನತೆಗಳು ನಿಮಗೆ ಗೊತ್ತಿಲ್ಲದ್ದೇನೂ ಅಲ್ಲ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications