ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಬೊಗಸೆಯಷ್ಟೇ ನೀರು ದಕ್ಕುವುದು ಎನ್ನುವ ಅರಿವನ್ನು ನಿಮ್ಮದಾಗಿಸಿಕೊಳ್ಳಿ. ಇದರಿಂದಾಗಿ ಅತಿಯಾದ ನಿರೀಕ್ಷೆಗಳು ತರುವ ನಿರಾಶೆಯಿಂದ ಪಾರಾಗುತ್ತೀರಿ. ಈ ದಿನ ನಿಮಗೆ ಸಾಧಾರಣದ್ದು .ವೃಷಭ :ಹಳೆಯ ವ್ಯಾಜ್ಯವೊಂದು ನಿಮಗೆ ಅನುಕೂಲಕರವಾಗಿ ಬಗೆಹರಿಯಲಿದೆ. ವೃತ್ತಿಯಲ್ಲೂ ಪ್ರಗತಿ ಕಾಣುತ್ತೀರಿ. ಆರೋಗ್ಯದ ಬಗ್ಗೆ ತುಸು ಹೆಚ್ಚಿನ ನಿಗಾ ವಹಿಸಿ.
ಮಿಥುನ : ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ. ಮನಸ್ಸಿನ ಸಂತೋಷ ನಿಮ್ಮನ್ನೇ ಅವಲಂಬಿಸಿದೆ. ಆದರೆ, ಇತರರ ಮನಸ್ಥಿತಿಯೂ ನಿಮ್ಮ ಮೂಡಿಗೆ ತಕ್ಕನಾಗಿರುವುದು ಈ ದಿನ ಸಾಧ್ಯವಿಲ್ಲ .
ಕಟಕ : ಯಾರು ಏನು ಮಾಡುವರು ಎನ್ನುವ ಉದಾಸೀನ ಒಳ್ಳೆಯದಲ್ಲ . ನಿಮ್ಮ ಬಗ್ಗೆ ನಿಮಗಿಂತಾ ಅವರಿಗೇ ಚೆನ್ನಾಗಿ ಗೊತ್ತು . ಈ ಕಾರಣದಿಂದಲೇ ಅವರೆದುರು ಸೋಲುತ್ತಿದ್ದೀರಿ.
ಸಿಂಹ : ಮಳೆಬಿಲ್ಲನ್ನು ಬೇಸಗೆಯಲ್ಲಿ ಕಾಣುವ ಕನಸನ್ನು ಮೆಚ್ಚಬಹುದಾದರೂ, ಅದು ಸಾಧ್ಯವಾದೀತೆಂದು ಭರವಸೆ ಕೊಡುವುದು ಹೇಗೆ. ಇಷ್ಟಕ್ಕೂ ನೀವು ಎದೆಯಲ್ಲಿ ಈಗಾಗಲೇ ಜತನವಾಗಿರುವ ಬಣ್ಣಗಳನ್ನು ಏಕೆ ಗುರ್ತಿಸುತ್ತಿಲ್ಲ .
ಕನ್ಯಾ : ದುಡ್ಡಿನಿಂದ ಏನೆಲ್ಲಾ ಕೊಳ್ಳಬಹುದು ಎನ್ನುವ ಸಂಗಾತಿಯ ಮಾತಿಗೆ ಅಷ್ಟೇನೂ ತಲೆ ಕೆಡಿಸಿಕೊಳ್ಳುವುದು ಬೇಡ. ನಿಮ್ಮ ಭಾವನೆಗಳೆದುರು ಅವರ ವ್ಯವಹಾರಿಕತನ ಸೋಲುತ್ತದೆ.
ತುಲಾ : ಏನ ಮಾಡಿದರೇನು ಭವ ಹಿಂಗದು. ಆದರೆ ಏನಾದರು ಮಾಡುತಿರು ತಮ್ಮಾ ಅನ್ನುತ್ತಾರೆ ಬಲ್ಲವರು. ಮನಸ್ಸು ಖಾಲಿ ಎನ್ನುವ ತಲ್ಲಣ ಬೇಡ. ಮಳೆ ಹೊಸಿತಿಲಲ್ಲೇ ಭೋರೆನ್ನುತ್ತಿದೆ.
ವೃಶ್ಚಿಕ : ಆಫೀಸಿನಲ್ಲಿ ಕತ್ತೆ ದುಡಿತ. ಬೇಜಾರು. ಅಂದುಕೊಂಡದ್ದೆಲ್ಲಾ ನಿಮ್ಮ ಎಣಿಕೆಗೆ ತಕ್ಕಂತೇನೂ ನಡೆಯುವುದಿಲ್ಲ . ಆ ರೀತಿಯ ನಿರೀಕ್ಷೆಗಳಲ್ಲಿ ರುವುದು ನಿರಾಶೆ ಮಾತ್ರ.
ಧನಸ್ಸು :ಗಾಣದೆತ್ತಿನಂತೆ ದುಡಿತಕ್ಕೆ ಒಗ್ಗಿ ಹೋಗಿರುವ ನಿಮಗೆ ರಜೆ ಮಹಾ ಹಿಂಸೆಯೇ ಸರಿ. ಆದರೆ, ನಿಮ್ಮ ಕುಟುಂಬ ನಿಮ್ಮೊಂದಿಗೆ ಕಾಲ ಕಳೆಯಲು ಬಯಸುತ್ತಿದೆ. ಈ ರಜೆಯನ್ನು ಅವರ ಸಂತೋಷಕ್ಕೆ ಮೀಸಲಿಡಿ.
ಮಕರ : ಸಾಹಸ ಕೃತ್ಯಗಳಲ್ಲಿ ಸುಖ ಕಾಣುತ್ತೀರಿ. ಆದರೆ, ದುಂದು ವೆಚ್ಚಗಳಿಂದ ನೋಯುತ್ತೀರಿ. ಈ ದಿನ ಕೊಂಚ ಸುತ್ತಾಟವಿದೆ. ಅದನ್ನು ಖುಷಿಕರವಾಗಿ ಬದಲಿಸಿಕೊಳ್ಳಿ.
ಕುಂಭ : ನೀವು ಗೆಳೆಯರ ನಿರೀಕ್ಷೆಗಳನ್ನು ಹುಸಿ ಮಾಡುತ್ತಿದ್ದೀರಿ. ಇನ್ನೂ ಲಾಭ ನಷ್ಟಗಳ ಲೆಕ್ಕಾಚಾರದಲ್ಲೇ ಇರುವುದಾದರೆ ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದು ವ್ಯರ್ಥ. ಖುಷಿಯ ದಿನ.
ಮೀನ : ಕುಟುಂಬದೊಂದಿಗೆ ಮೋಜಿನ ದಿನ. ಅಂದಮೇಲೆ ಜೇಬು ಸಾಕಷ್ಟು ಹಗುರಾಗಲೇಬೇಕು. ತಿಂಗಳ ಕೊನೆಯಾದ್ದರಿಂದ ಉಭಯ ಸಂಕಟ ಅನುಭವಿಸುತ್ತೀರಿ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications