ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆಗಸ್ಟ್ 19ರೊಳಗೆ ರಾಜ್ರೊಂದಿ-ಗೆ ಗೋಪಾ-ಲ್ ವಾಪ-ಸ್ಸಾಗು-ತ್ತಾ-ರೆ
ಚೆನ್ನೈ : ಉಭಯ ರಾ-ಜ್ಯಗಳ ಸಂಧಾನಕಾರ ಗೋಪಾಲ್, ಗುರುವಾರ ಮುಂಜಾನೆ ಸತ್ಯಮಂಗಲಂ ಅರಣ್ಯ ಪ್ರದೇಶ ತಲುಪಿರುವ ಸಾಧ್ಯತೆ ಇದೆ ಎಂದು ನಕ್ಕೀರನ್ ಪತ್ರಿಕೆ ಮೂಲಗಳು ತಿಳಿಸಿವೆ.
ವೀರಪ್ಪನ್ ತನ್ನ ಬೇಡಿಕೆಗಳಿಗೆ ಧನಾತ್ಮಕ ಪ್ರತಿಕ್ರಿಯೆ ನೀಡಲು ಸರ್ಕಾರಗಳಿಗೆ ನೀಡಿರುವ ಆಗಸ್ಟ್ 19ರ ಗಡುವಿನೊಳಗೇ ರಾಜ್ ಹಾಗೂ ಇತರ ಮೂವರು ಒತ್ತೆಯಾಳುಗಳನ್ನು ಅವರು ಬಿಡಿಸಿಕೊಂಡು ಬರುವ ನಿರೀಕ್ಷೆಯಿದೆ. ಬುಧವಾರ ರಾತ್ರಿ ಕಾಡಿಗೆ ತೆರಳುವ ಮುನ್ನ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರಿಗೆ ಗೋಪಾಲ್ ಫೋನಾಯಿಸಿದ್ದರು. ಅದಾದ ನಂತರ ಇದುವರೆಗೆ ಅವರಿಂದ ನಕ್ಕೀರನ್ ಪತ್ರಿಕೆಗಾಗಲೀ, ಕರುಣಾನಿಧಿಯವರಿಗಾಗಲೀ ಯಾವುದೇ ಸಂದೇಶ ತಲುಪಿಲ್ಲ ಎಂದು ಪತ್ರಿಕೆ ಮೂಲಗಳು ಹೇಳಿವೆ.
(ಯುಎನ್ಐ)
Story first published: Monday, July 31, 2000, 5:30 [IST]