ಎ. ಎನ್. ಮೂರ್ತಿರಾವ್ ಎಂಬ ತುಂಬಿದ ಕೊಡ
ಅಕ್ಕಿಹೆಬ್ಬಾಳು ನರಸಿಂಹಮೂರ್ತಿರಾಯರಿಗೆ ಈ ಹೊತ್ತಿಗೆ (ಜೂನ್16) ನೂರು ವರ್ಷ ತುಂಬಿತು. ಶತಮಾನಂ ಭವತಿ, ಶತಾಯು ಭವತಿ ಎಂಬ ಹರಕೆ ನಿಜವಾಯಿತು.
ಹಗಲುಗನಸುಗಳು ಪ್ರಬಂಧಸಂಕಲನ, ಆಷಾಢಭೂತಿ ನಾಟಕ, ಒಂದಷ್ಟು ಕವನ ಸಂಕಲನ ಹಾಗೂ ಇತ್ತೀಚೆಗೆ ಬರೆದ ದೇವರು ಪ್ರಬಂಧಮಾಲೆ- ಹೀಗೆ ಮೂರ್ತಿರಾಯರ ನೂರು ವರುಷಗಳು ಹುಸಿಹೋದ ಅಲೆಮಾರಿ ಬದುಕಲ್ಲ . ಸಾಹಿತ್ಯ ಕ್ಷೇತ್ರದಲ್ಲಿ ಬಾಳಿನಲ್ಲಿ ನೆಲೆ ಕಂಡುಕೊಂಡ ಹಿರಿಯ ಜೀವಿ ಅವರು.
ಕನ್ನಡಕ್ಕೆ ಲಲಿತ ಪ್ರಬಂಧದ ಸೊಗಡನ್ನು ಪರಿಚಯಿಸಿದ ಎ. ಎನ್. ಮೂರ್ತಿರಾಯರು ಈಗಲೂ ಆರೋಗ್ಯವಾಗಿದ್ದಾರೆ. ಪೇಪರ್ ಓದುತ್ತಾರೆ. ತಮಗೆ ಅನ್ನಿಸಿದ್ದನ್ನು ಬರೆದಿಡುತ್ತಾರೆ. ಮುಂಜಾನೆ ಎದ್ದು ಮೂರು ಕಿಲೋಮೀಟರ್ ವಾಕಿಂಗ್ ಹೋಗುತ್ತಾರೆ; ಒಂಟಿಯಾಗಿ.
ಒಂಟಿಯಾಗಿ ಯಾಕೆ ಹೋಗುತ್ತೀರಿ ಎಂದು ಗೆಳೆಯರೊಬ್ಬರು ಕೇಳಿದ್ದಕ್ಕೆ ಮೂರ್ತಿರಾಯರು ಉತ್ತರಿಸಿದ್ದು ಹೀಗೆ : ಜತೆಗೆ ಯಾರಾದರೂ ಎಷ್ಟು ದಿನ ಇರುತ್ತಾರೆ. ಜತೆಗೆ ಯಾರನ್ನಾದರೂ ಕರೆದುಕೊಂಡು ಹೋದೆ ಅಂತಿಟ್ಟುಕೊಳ್ಳಿ. ಮುಂದೆ ಜೀವ ಒಂಟಿಯಾಗಿ ಅಲೆಯೋದಕ್ಕೆ ಹಿಂದೇಟು ಹಾಕುತ್ತೆ. ಎಲ್ಲದಕ್ಕೂ ಇನ್ನೊಬ್ಬರ ಸಹಾಯ ಬೇಡುತ್ತೆ. ಅದು ಸಿಗುತ್ತೆ ಅಂತ ಏನು ಗ್ಯಾರಂಟಿ?
ವರ್ಷದ ಹಿಂದೆ ತಮ್ಮ ಪತ್ನಿ ತೀರಿಕೊಂಡಾಗ ದೇವರನ್ನು ನಂಬದ ಮೂರ್ತಿರಾಯರು ನಮ್ಮ ಮನೆದೇವತೆ ಮನೆ ಬಿಟ್ಟು ಹೊರಟಳು ಅಂದಿದ್ದರು. ಅದು ಅವರ ಪ್ರಾಮಾಣಿಕತೆಗೆ ಸಾಕ್ಷಿ . ಯಾವುದನ್ನೂ ಅವರು ಗಾಗಿ ಮಾಡಲಿಲ್ಲ , ನಿಂದ ಮಾಡಿದರು ಅನ್ನೋದೇ ಅವರು ಬದುಕಿದ ನೂರು ವರುಷಗಳೂ ಸಾರ್ಥಕ ಎನ್ನುವುದಕ್ಕೆ ಸಾಕ್ಷಿ .
ಮಿತಾಹಾರ, ಮಿತಭಾಷಿ, ಮಿತ ಜೀವನ ಅವರ ಬದುಕಿನ ಗುಟ್ಟು ಅನ್ನುತ್ತಾರೆ. ಯಾವುದನ್ನು ಅತಿರೇಕಕ್ಕೆ ಹೋಗಿ ಅನುಭವಿಸದೆ, ಮೇಲುಮೇಲಿನಿಂದಲೇ ತಡವದೆ, ಎಷ್ಟು ಬೇಕೋ ಅಷ್ಟು ಪಡಕೊಂಡವರು.
ಈ ಸಹನೆ ಮತ್ತು ತೃಪ್ತಿಯೇ ಮೂರ್ತಿರಾಯರು ಹಾಗೂ ಅವರಂಥ ಅನೇಕರನ್ನು ತುಂಬುಜೀವನ ನಡೆಸುವಂತೆ ಮಾಡಿತ್ತೇ? ಯಾರಿಗೆ ಗೊತ್ತು ?
ಮೂರ್ತಿರಾಯರ ಬಗ್ಗೆ:
ಡಾ. ಎ.ಎನ್. ಮೂರ್ತಿರಾವ್ (ಅಕ್ಕಿ ಹೆಬ್ಬಾಳು ನರಸಿಂಹಮೂರ್ತಿ) ಮೂರ್ತಿರಾಯರು ಹುಟ್ಟಿದ್ದು 1900ರ ಜೂನ್ 16ರಂದು. ಮಂಡ್ಯ ಜಿಲ್ಲೆಯ ಅಕ್ಕಿ ಹೆಬ್ಬಾಳಿನಲ್ಲಿ. ಇವರ ತಂದೆ ಎಂ. ಸುಬ್ಬರಾವ್, ತಾಯಿ ವೆಂಕಟಲಕ್ಷ್ಮಮ್ಮ. ಇಂಗ್ಲಿಷ್ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಚಿತ್ರದುರ್ಗ ಕಾಲೇಜಿನ ಪ್ರಾಂಶುಪಾಲರಾಗಿ ತಮ್ಮ ಬದುಕಿನಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ಸನ್ಮಾರ್ಗದಲ್ಲಿ ನಡೆಸಿದ ಮೂರ್ತಿರಾಯರು, ಕೆಲ ವರ್ಷಗಳ ಕಾಲ ಕರ್ನಾಟಕ ಸಾಹಿತ್ಯ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯ ಇವರಿಗೆ ಡಿಲಿಟ್ ಪದವಿ ನೀಡಿ ಗೌರವಿಸಿದೆ. ಕೈವಾರದಲ್ಲಿ ನಡೆದ 56ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಅವರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿದ್ದ ಅವರು ಕನ್ನಡ ಸಾರಸ್ವತ ಲೋಕಕ್ಕೆ ಸಲ್ಲಿಸಿದ ಸೇವೆ ಅಪಾರ.
ಮೂರ್ತಿರಾಯರದು ಬಹುಮುಖ ಪ್ರತಿಭೆ. ನಾಟಕ, ಪ್ರಬಂಧ, ಕತೆ, ಕಾದಂಬರಿ, ಪ್ರವಾಸ ಕಥನ, ವಿಡಂಬನೆ ಮೊದಲಾಗಿ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಅವರು ನೀಡಿರುವ ಕೊಡುಗೆ ಅವಿಸ್ಮರಣೀಯ. ಈ ಎಲ್ಲ ಕ್ಷೇತ್ರಗಳು ಮೂರ್ತಿರಾಯರ ಕೊಡುಗೆಯಿಂದ ಮತ್ತಷ್ಟು ಸಂಪನ್ನವಾಗಿವೆ. ಪ್ರಬಂಧ ಸಾಹಿತ್ಯ ಕ್ಷೇತ್ರದಲ್ಲಂತೂ ಇವರು ಅಗ್ರಗಣ್ಯರು. ಇವರ ಕಾವ್ಯಗಳಲ್ಲಿ ಹೊಳಪು, ಕತೆಗಳಲ್ಲಿ ಕುತೂಹಲ, ನಾಟಕಗಳಲ್ಲಿ ಪಾತ್ರಸೃಷ್ಟಿ, ಮಾತಿನಲ್ಲಿ ಹಾಸ್ಯದ ಮೃದು ಲೇಪನ, ನಿರೂಪಣೆಯಲ್ಲಿ ಚಮತ್ಕಾರ ಎಲ್ಲವೂ ಮೇಳೈಸುತ್ತವೆ.
ಹೂವುಗಳು ಇವರ ಪ್ರಥಮ ಪ್ರಬಂಧ. ಹಗಲುಗನಸುಗಳು, ಅಲೆಯುವ ಮನ, ಮಿನುಗು ಮಿಂಚು ಇವರ ಕೆಲವು ಪ್ರಮುಖ ಪ್ರಬಂಧ ಸಂಕಲನಗಳು, ಚಿತ್ರಗಳು - ಪತ್ರಗಳು ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡಮಿ ಪುರಸ್ಕಾರ ತಂದಿತ್ತ ಪ್ರಸಿದ್ಧ ಪ್ರಬಂಧ ಸಂಕಲನ. ಆಷಾಢಭೂತಿ, ಚಂಡಮಾರುತ ಅನುವಾದಿತ ಕೃತಿಗಳು. ಡಾ. ಶಿವರಾಮ ಕಾರಂತರ ಮರಳಿ ಮಣ್ಣಿಗೆ ಕಾದಂಬರಿಯನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ.
ಅಪರ ವಯಸ್ಕನ ಅಮೆರಿಕಾಯಾತ್ರೆ ಇವರ ಪ್ರವಾಸ ಕಥನ. ಮೂರ್ತಿರಾಯರು ಕೇವಲ ಗಂಭೀರ ಸಾಹಿತ್ಯವಷ್ಟೇ ಅಲ್ಲದೆ ಹವಳದ್ವೀಪ ಎಂಬ ಶಿಶುಸಾಹಿತ್ಯವನ್ನೂ ಕನ್ನಡಕ್ಕೆ ನೀಡಿದ್ದಾರೆ. ನೂರಾರು ಪ್ರಬಂಧ, ಕಾದಂಬರಿ, ಕತೆಗಳನ್ನು ಬರೆದಿರುವ ಮೂರ್ತಿರಾಯರು ನೂರ್ಕಾಲ ಬದುಕಿದ್ದಾರೆ. ಅವರಿಗೆ 'ದೇವರು" ಹರಸಲಿ.
-
Vasudhendra: ಬರಹಗಾರ ವಸುಧೇಂದ್ರಗೆ ಹಿಂಗೇ ಮಾಡಿದ್ರೆ ನಿಮ್ ಪುಸ್ತಕ ಓದೋಕು ಯಾರು ಸಿಗಲ್ಲ ಎಂದ ನೆಟ್ಟಿಗರು -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು












Click it and Unblock the Notifications