Get Updates
Get notified of breaking news, exclusive insights, and must-see stories!

Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್‌ನಿಂದ ಸ್ಪರ್ಧೆ

ಬಹುಭಾಷಾ ನಟಿ, ಬಿಜೆಪಿ ನಾಯಕಿ ಖುಷ್ಬೂ ಸುಂದರ್ (Khushbu Sundar) ಅವರ ಪತಿ, ಹಿರಿಯ ನಿರ್ದೇಶಕ ಸುಂದರ್ ಸಿ ಅವರು ಸಕ್ರಿಯ ರಾಜಕೀಯಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅವರು ಮಧುರೈ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಕಳೆದ ಮೂರು ದಶಕಗಳಿಂದ ತಮಿಳು ಚಿತ್ರರಂಗದಲ್ಲಿ ಯಶಸ್ವಿ ನಿರ್ದೇಶಕ ಮತ್ತು ನಟನಾಗಿ ಗುರುತಿಸಿಕೊಂಡಿರುವ ಸುಂದರ್ ಅವರಿಗೆ ಮಧುರೈ ಭಾಗದಲ್ಲಿ ದೊಡ್ಡ ಅಭಿಮಾನಿ ಬಳಗವಿದೆ.

ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ

ಸುಂದರ್ ಪತ್ನಿ ಖುಷ್ಬೂ ಈಗಾಗಲೇ ಬಿಜೆಪಿಯಲ್ಲಿ ಸಕ್ರಿಯರಾಗಿದ್ದು, ಈಗ ಪತಿ ಕೂಡ ರಾಜಕೀಯಕ್ಕೆ ಬಂದಿರುವುದು ತಮಿಳುನಾಡು ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ. ಬಿಜೆಪಿ ಉಪಾಧ್ಯಕ್ಷೆ ಖುಷ್ಬೂ ಅವರ ಪತಿಯಾಗಿರುವ ಸುಂದರ್ ಎನ್‌ಡಿಎ (NDA) ಮೈತ್ರಿಕೂಟದ ಭಾಗವಾಗಿರುವ 'ಪುದಿಯ ನೀತಿ ಕಚ್ಚಿ' (PNK) ಪಕ್ಷದ ಪರವಾಗಿ ಸ್ಪರ್ಧಿಸುತ್ತಿದ್ದಾರೆ. ಎನ್‌ಡಿಎ ಸೀಟು ಹಂಚಿಕೆ ಒಪ್ಪಂದದ ಪ್ರಕಾರ, ಎಐಎಡಿಎಂಕೆ (AIADMK) ಕೋಟಾದಡಿ ಮಧುರೈ ಸೆಂಟ್ರಲ್ ಕ್ಷೇತ್ರವನ್ನು ಪಿಎನ್‌ಕೆ ಪಕ್ಷಕ್ಕೆ ನೀಡಲಾಗಿದೆ.

Actress Khushbu

ಅವರು ಎಐಎಡಿಎಂಕೆಯ 'ಎರಡು ಎಲೆ' ಚಿಹ್ನೆಯಡಿ ಸ್ಪರ್ಧಿಸುವ ಸಾಧ್ಯತೆಯಿದೆ. ಮಧುರೈ ಸೆಂಟ್ರಲ್ ಕ್ಷೇತ್ರವು ತಮಿಳುನಾಡಿನ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದ್ದು, ಸುಂದರ್ ಅವರ ಸ್ಪರ್ಧೆಯಿಂದಾಗಿ ಇಲ್ಲಿನ ಚುನಾವಣಾ ಕಣ ಕಳೆಗಟ್ಟಿದೆ. ಎಐಎಡಿಎಂಕೆ ಮತ್ತು ಬಿಜೆಪಿ ನೇತೃತ್ವದ ಮೈತ್ರಿಕೂಟದ ಬೆಂಬಲದೊಂದಿಗೆ ಅವರು ಮತದಾರರ ಮನ ಗೆಲ್ಲಲು ಸಜ್ಜಾಗಿದ್ದಾರೆ.

ಸುಂದರ್ ಸಿ ಪೂರ್ಣ ಹೆಸರು ಸುಂದರವೇಲ್ ಚಿದಂಬರಂ. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಪ್ರಮುಖ ಹೆಸರು. 37ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ದೇಶಿಸಿರುವ ಸುಂದರ್ ಸಿ, ಕಲೈಮಾಮಣಿ ಪ್ರಶಸ್ತಿಯನ್ನು ಪಡೆದಿದ್ದಾರೆ ಮತ್ತು ತಮಿಳು ಚಿತ್ರರಂಗದ ಅತ್ಯಂತ ಜನಪ್ರಿಯ ಮತ್ತು ವಾಣಿಜ್ಯ ಚಲನಚಿತ್ರ ನಿರ್ಮಾಪಕರಲ್ಲಿ ಒಬ್ಬರು.

ಸುಂದರ್ ಮೇಲೆ ಲವ್ ಜಿಹಾದ್ ಆರೋಪ

ಸುಂದರ್ ವಿರುದ್ಧ ಈ ಹಿಂದೆ 'ಲವ್ ಜಿಹಾದ್' ಆರೋಪ ಹೊರಿಸಲಾಗಿತ್ತು. ಖುಷ್ಬೂ ಖಾನ್ ಮತ್ತು ಸುಂದರ್ ಅವರ ಪ್ರೇಮಕಥೆ ಸಾಕಷ್ಟು ಜನಪ್ರಿಯವಾಗಿದೆ. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಖುಷ್ಬೂ, ಚಿತ್ರೀಕರಣದ ಸಮಯದಲ್ಲಿ ಭೇಟಿಯಾದರು. ಅವರ ನಡುವೆ ಸ್ನೇಹ ಬೇಗನೆ ಪ್ರೀತಿಯಾಗಿ ಅರಳಿತು. ದೀರ್ಘಾವಧಿಯ ಡೇಟಿಂಗ್ ನಂತರ ಇಬ್ಬರೂ ವಿವಾಹವಾದರು. ಮದುವೆಯ ನಂತರ, ಖುಷ್ಬೂ ತನ್ನ ಉಪನಾಮವನ್ನು ಖಾನ್‌ನಿಂದ ಖುಷ್ಬೂ ಸಿ ಎಂದು ಬದಲಾಯಿಸಿಕೊಂಡರು. ನಂತರ ಅವರ ಪತಿಯ ಮೇಲೆ "ಲವ್ ಜಿಹಾದ್" ಆರೋಪವೂ ಹೊರಿಸಲಾಯಿತು. ಈ ಬಗ್ಗೆ ಖುಷ್ಬೂ ಕಿಡಿಕಾರಿದ್ದರು. "ದ್ವೇಷವನ್ನು ಹರಡುವವರಿಂದ ದೂರವಿರಿ" ಎಂದು ಹೇಳಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

April OTT releases: ಏಪ್ರಿಲ್‌ನಲ್ಲಿ ಓಟಿಟಿ ಅಬ್ಬರ: ಬಿಡುಗಡೆಗೆ ಸಜ್ಜಾಗಿರುವ ಪ್ರಮುಖ ಸಿನಿಮಾಗಳ ಪಟ್ಟಿ ಇಲ್ಲಿದೆ
April OTT releases: ಏಪ್ರಿಲ್‌ನಲ್ಲಿ ಓಟಿಟಿ ಅಬ್ಬರ: ಬಿಡುಗಡೆಗೆ ಸಜ್ಜಾಗಿರುವ ಪ್ರಮುಖ ಸಿನಿಮಾಗಳ ಪಟ್ಟಿ ಇಲ್ಲಿದೆ

ಸುಂದರ್ ಅವರು ನಟ ರಜನಿಕಾಂತ್ ಅವರ ಅರುಣಾಚಲಂ (1997) ಮತ್ತು ಕಮಲ್ ಹಾಸನ್ ಅವರ ಅಂಬೆ ಶಿವಂ (2003) ಸೇರಿದಂತೆ 37 ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಉಲ್ಲತೈ ಅಲ್ಲಿತಾ (1996), ಉನ್ನೈ ತೇಡಿ (1999), ವಿನ್ನರ್ (2003), ಗಿರಿ (2004), ಕಲಕಲಪ್ಪು (2012), ತೀಯಾ ವೆಲೈ ಸೆಯ್ಯನುಮ್ ಕುಮಾರು (2013), ಅರಣ್ಮನೈ ಸಿನಿಮಾಟಿಕ್ ಯೂನಿವರ್ಸ್ (2014-2024), ಮತ್ತು ಮಧ ಗಜರಾಜ (2025) ಸೇರಿದಂತೆ ಹಲವು ಹಿಟ್‌ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇದೀಗ ರಾಜಕೀಯದಲ್ಲಿ ಹೇಗೆ ಮೋಡಿ ಮಾಡಲಿದ್ದಾರೆ ಎಂಬುದು ಕಾದುನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+