Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್
Dolly Dhananjay: ಒಬ್ಬರಿಂದ ಚಿತ್ರಕಥೆ ಕೇಳುವುದು ಬಹಳ ಪ್ರಯಾಸದ ಕೆಲಸ.. ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು ಎಂದು ನಟ ಡಾಲಿ ಧನಂಜಯ್ ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು. ಒಬ್ಬರಿಂದ ಚಿತ್ರಕಥೆ ಕೇಳುವುದು ಬಹಳ ಪ್ರಯಾಸದ ಕೆಲಸ. ಆದರೆ ನಮ್ಮ ಕೆಲಸವೇ ಕಥೆ ಕೇಳುವುದು. ಆದಷ್ಟು ಕೇಳುವುದನ್ನು ತಡೆದು, 'ಓದುವೆ, ಬೌಂಡ್ ಸ್ಕ್ರಿಪ್ಟ್ ಕೊಟ್ಟು ಹೋಗಿ' ಅಂತ ಕೇಳ್ತಿನಿ. ಓದೋ ಪ್ರಯತ್ನ ಮಾಡ್ತಿನಿ. ಓದಿಸಿಕೊಳ್ಳೋದು ಚಿತ್ರಕಥೆಯ ತಾಕತ್ತು.

ಹಾಗೆ ಓದುತ್ತಲೇ ನಕ್ಕು ನಗಿಸಿದ್ದು, ಕಣ್ತುಂಬಿಸಿದ್ದು, "ಬಡವ ರಾಸ್ಕಲ್" , "ಟಗರುಪಲ್ಯ" ಹಾಗೂ ಇನ್ನು ಬಿಡುಗಡೆಯಾಬೇಕಿರುವ ಪೂರ್ಣಚಂದ್ರ ನಟನೆಯ, ಅವಿನಾಶ್ ಬಲೆಕ್ಕಳ ನಿರ್ದೇಶನದ "ಹೆಗ್ಗಣ ಮುದ್ದು".
ಈ ಮಧ್ಯೆ ಗೆಳೆಯ ಪೂರ್ಣ ಒಂದು ಕಥೆಯ ಮೇಲೆ ಕೆಲಸ ಮಾಡುತ್ತಿರುವುದು ಆಗಾಗ ಕಣ್ಣಿಗೆ ಬೀಳುತ್ತಿತ್ತು. 'ಈ ಕಥೆ ಕೇಳು' ಅಂತ ಹೇಳ್ತಾ ಇದ್ರೂ, ನನ್ನ ಕೆಲಸದ ಒತ್ತಡದಲ್ಲಿ ಕೇಳೋಕೆ ಆಗಿರಲಿಲ್ಲ. 'ಪೂರ್ತಿ ಬರೆದು ಮುಗಿಸಿಕೊಡಿ ಓದ್ತೀನಿ' ಅಂತ ಹೇಳಿ ನಾನೂ ಮರೆತು ಹೋದೆ. ಸುಮಾರು 6 ತಿಂಗಳ ನಂತರ, ಒಂದು ದಿನ ಬಾಲ್ಕನಿ ಅಲ್ಲಿ ನಿಂತು ಮಾತಾಡ್ತಾ ನೆನಪಾಗಿ ಕೇಳ್ದೆ 'ಬರಿತಿದ್ರಲ್ಲ ಏನಾಯ್ತು?'. 'ಬರಿತಿದ್ವಿ, ಆದ್ರೆ .. ಅಲ್ಲೇ ಟೇಬಲ್ ಮೇಲಿದೆ ನೋಡು 6 ತಿಂಗಳಿಂದ... ಇದನ್ನ ಸಿನಿಮಾ ಮಾಡಬಹುದಾ ಇಲ್ವಾ ಗೊತ್ತಾಗಲಿಲ್ಲ, ಅದಿಕ್ಕೆ ನಿಲ್ಸಿದಿವಿ' ಅಂತ ಹೇಳಿ ಹೋದ.
ಬದುಕು ಎಷ್ಟೇ ಹೆದರಿಸಿದ್ರೂ, ಯಾವಾಗಲೂ ನಗ್ತಾ ನಗಿಸ್ತಾ ತಮಾಷೆಯಾಗೆ ಇರೋ ಇವ್ನು, ಏನ್ ಬರೆದಿರಬಹುದು ಅನ್ನೋ ಕುತೂಹಲದಲ್ಲಿ ಅವತ್ತು ಆ ಚಿತ್ರಕಥೆನ ಓದಿದೆ. ಒಬ್ಬನೇ ನಗ್ತಾ ನಗ್ತಾ, ಎಲ್ಲ ಪಾತ್ರಗಳ ಜೊತೆ ಪ್ರಯಾಣ ಮಾಡ್ತಾ, ಓದು ಮುಗಿದಿದ್ದೇ ಗೊತ್ತಾಗ್ಲಿಲ್ಲ! ಇವತ್ತಿನ ಬೆಂಗಳೂರನ್ನ ಎಷ್ಟು ಅರ್ಥಪೂರ್ಣವಾಗಿ ಕಟ್ಟಿದ್ರು ಅಂದ್ರೆ, ಮಹಾನಗರಗಳ ಪಡಿಪಾಟಿಲುಗಳನ್ನ ನಗಿಸ್ತಾ ಮನ ಮುಟ್ಟೊ ಹಂಗೆ ಬರೆದಿದ್ರು. ಆದ್ರೆ ಚಿತ್ರಕಥೆ end ಆಗಿರಲಿಲ್ಲ. ಕೂಡಲೇ ಪೂರ್ಣಂಗೆ ಕಾಲ್ ಮಾಡಿ, 'ಇದನ್ನ ಯಾಕೆ complete ಮಾಡಿಲ್ಲ? ಮಾಡಿ, ನಾನೇ ನಿರ್ಮಾಣ ಮಾಡ್ತಿನಿ' ಅಂದೆ. 'ನೀನ್ ಆಕ್ಟಿಂಗ್ ನೂ ಮಾಡ್ಬೇಕು' ಅಂದ. 'ಮಾಡ್ತಿನಿ' ಅಂದೆ.
ಶಶಾಂಕ್ ಸೋಗಾಲ್ ಗೆ ಕಾಲ್ ಮಾಡಿ ಓದು ಚೆನ್ನಾಗಿದೆ ಅಂದೆ. Already ನಿರ್ದೇಶಕ ಆಗಿ ಗೆದ್ದಿದ್ರು, ಈ project ಅಲ್ಲಿ ಪೂರ್ಣನ ಜೊತೆ ಇರ್ತಿನಿ ಅಂದ. ಕಥೆ complete ಮಾಡಿದ್ರು. Most lovable ending! ❤️ ನಿರ್ಮಾಣಕ್ಕೆ ಗೆಳೆಯ ಹರ್ಷ ಜೊತೆಯಾದ. ಜೇನುಕಲ್ ಸಿದ್ದಪ್ಪನಿಗೆ ಪೂಜೆ ಸಲ್ಲಿಸಿ ಕೆಲಸ ಶುರು ಮಾಡಿದ್ವಿ. ಹತ್ತು ಹಲವು ಹೊಸ ಅದ್ಭುತ ಪ್ರತಿಭೆಗಳನ್ನ, ಒಂದಷ್ಟು GenZ ಹುಡುಗರನ್ನ ಸೇರಿಸಿಕೊಂಡು, ಪೂರ್ಣಚಂದ್ರ ನಿರ್ದೇಶನದಲ್ಲಿ ಒಂದು ಒಳ್ಳೆ 100% entertainer ಸಿನಿಮಾ ಕಟ್ಟಿದಿವಿ.
ಇನ್ನು ನಿಮ್ಮ ಮುಂದೆ ಬರೋದಷ್ಟೇ ಬಾಕಿ. ಬಹಳ ಉತ್ಸುಕತೆಯಿಂದ post-production ಕೆಲಸ ನಡಿತಾ ಇದೆ. ಹಬ್ಬದ ಸೀಸನ್ ಗೆ ನಿಮ್ಮ ಮುಂದೆ ಸಿನಿಮಾ. ಸದ್ಯದಲ್ಲೇ Title Announcement. ಓಡು ಗೆಲುವೆ ನೀ ಆದಷ್ಟು ದೂರ ಪಡೆದೆ ತೀರುವೆವು ನೀ ಹೋದಷ್ಟು ದೂರ
マザープロミス
ಬರಹ: ನಟ ಡಾಲಿ ಧನಂಜಯ್
-
Kannada Vs Hindi: ಭಾಷಾ ಶಿಕ್ಷಣ–ಸಮಸ್ಯೆ ಇರುವುದು ಫೈನ್ ಟ್ಯೂನಿಂಗ್ನಲ್ಲಿ: ರಾಜಾರಾಂ ತಲ್ಲೂರು ಬರಹ -
Vasudhendra: ಬರಹಗಾರ ವಸುಧೇಂದ್ರಗೆ ಹಿಂಗೇ ಮಾಡಿದ್ರೆ ನಿಮ್ ಪುಸ್ತಕ ಓದೋಕು ಯಾರು ಸಿಗಲ್ಲ ಎಂದ ನೆಟ್ಟಿಗರು -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
Viral Post: ವಿಮಾನದ ಸೀಟುಗಳ ತುಂಬಾ ಕಸದ ರಾಶಿ: ಪ್ರಯಾಣಿಕರ 'ಸಿವಿಕ್ ಸೆನ್ಸ್' ಪ್ರಶ್ನಿಸಿದ ಮಹಿಳೆ -
Siddaramaiah: ಶಿಸ್ತು, ಪ್ರಾಮಾಣಿಕತೆ ಮತ್ತು ಮಾನವೀಯತೆ ಪೊಲೀಸ್ ಸೇವೆಯ ಆಧಾರ: ಸಿದ್ದರಾಮಯ್ಯ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ












Click it and Unblock the Notifications