Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ
Kannada Books: ಕರ್ನಾಟಕದಲ್ಲಿ ಬರಹಗಾರರು ಹಾಗೂ ಪುಸ್ತಕ ಪ್ರಕಾಶಕರು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಬರಹಗಾರ ಹಾಗೂ ಪುಸ್ತಕ ಪ್ರಕಾಶಕ ರಾಜೇಂದ್ರ ಪ್ರಸಾದ್ ಅವರ ಬರಹ ಇಲ್ಲಿದೆ. 2018 ರಲ್ಲಿ ಮತ್ತೆ ಪುಸ್ತಕ ಪ್ರಕಟನೆಯಲ್ಲಿ ತೊಡಗಿದ ಮೇಲೆ ಅನಿಸಿದ್ದು ಪುಸ್ತಕ ಮಾರಾಟದಲ್ಲಿ ಅತ್ಯಂತ ದೊಡ್ಡ ಸಮಸ್ಯೆ ಅಂದರೆ ಪುಸ್ತಕ ಮಳಿಗೆಗಳಿಗೆ / ಮಾರಾಟಗಾರರಿಗೆ ಕೊಟ್ಟ ಪುಸ್ತಕಗಳ ಬಿಲ್ ಮೊತ್ತವನ್ನು ವಸೂಲು ಮಾಡುವುದು! ಆರೇಳು ವರ್ಷಗಳಿಂದ ಹಲವರು ಸಾವಿರಾರು ರೂಪಾಯಿಗಳ ಬಾಕಿಯನ್ನು ಹಾಗೇ ಉಳಿಸಿಕೊಂಡಿದ್ದಾರೆ. ಕೇಳಿದರೆ ಬಾಕಿ ಕೊಡುವುದಿಲ್ಲ, ಪ್ರತಿಕ್ರಿಯಿಸುವುದಿಲ್ಲ. ಹೆಚ್ಚು ಬಾರಿ ಕೇಳಿದರೆ ನಮ್ಮ ಪುಸ್ತಕಗಳನ್ನು ಮತ್ತೆ ಕೊಳ್ಳುವುದೂ ಇಲ್ಲ. ಹಳೆಯ ಬಾಕಿಯೇ ಬಾರದೇ ಮತ್ತೆ ಕೊಡುವುದರಲ್ಲಿ ಅರ್ಥವೂ ಇಲ್ಲ.
ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆಗಳನ್ನು ಮಾಡಿರುವ ಜನರಲ್ಲಿ ಖಂಡಿತಾ ಇಲ್ಲ. ಕೆಲವರು ನೇರವಾಗಿ ಕೊಂಡಾಗಿ ತಡವಾಗಿ ಕೊಡುವುದಾಗಿ ಹೇಳಿ ಹಣವನ್ನು ತಲುಪಿಸುತ್ತಾರೆ, ಆದರೆ ಮಳಿಗೆಗಳು ಕೊಡುವುದೇ ಇಲ್ಲ. ಆದ್ರೆ ಮಳಿಗೆಗಳನ್ನು ಉಳಿಸಿ, ಬೆಳೆಸಿ ಎಂಬ ಭಾಷಣಗಳನ್ನು ಉದ್ದಗಲ ಮಾಡುತ್ತಾರೆ! ಆದರೆ ಯಾರು ಎಲ್ಲಿಂದ ಉಳಿಸಿ, ಬೆಳೆಸುತ್ತಾರೆ?! ಪುಸ್ತಕಗಳನ್ನು ಸರಬರಾಜು ಮಾಡಿದ ಪ್ರಕಾಶಕರಿಗೆ ಕನಿಷ್ಠ ಪ್ರತಿಕ್ರಿಯಿಸುವ ಕಂತು ಕಂತಾಗಿ ಬಿಲ್ ಮೊತ್ತವನ್ನು ಪಾವತಿಸುವ ಪ್ರಕ್ರಿಯೆಗಳಾದರೂ ನಡೆಯಬೇಕಲ್ಲ! ಹೆಸರಾಂತ ಮಳಿಗೆಗಳಿಂದ ಹಿಡಿದು ಭಾಷಣಗಳನ್ನು ಮಳಿಗೆಗಳವರೆಗೆ ಇದೇ ಕಥೆ!

ಮೂರು ತಿಂಗಳ ಹಿಂದೆ ಹಿರಿಯೊಬ್ಬರ ಸಲಹೆ ಮೇರೆಗೆ ಹೊರರಾಜ್ಯದ ಮಳಿಗೆಯೊಂದಕ್ಕೆ ಹತ್ತು ಪ್ರತಿಗಳನ್ನು ಕಳುಹಿಸಿದ್ದೆವು. ಅದರಲ್ಲಿ ಒಂಬತ್ತು ಪ್ರತಿಗಳು ಮಾರಾಟವಾಗಿ, ಒಂದೇ ಪ್ರತಿ ಉಳಿದಿದೆ. ಆದರೆ ಇಂದಿನವರೆಗೂ ಬಿಲ್ ಮೊತ್ತ ಪಾವತಿಯಾಗಿಲ್ಲ! ಇದುವರೆಗೂ ಸರಿಸುಮಾರು ಏಳೆಂಟು ಬಾರಿ ಅವರಿಗೆ ನೆನಪಿಸಲಾಗಿದೆ. ಅವರು ತೆಗೆದುಕೊಳ್ಳುವ ಮೊದಲು ಮಾಡಿದ ತುರಾತುರಿ, ತುರ್ತಾಗಿ ಕಳಿಸಿಕೊಡಲು ಮಾಡಿದ ಒತ್ತಾಯ, ಪ್ರತಿ ಉಳಿದರೆ ಹಿಂತೆಗೆದುಕೊಳ್ಳಬೇಕೆಂಬ ಕರಾರುಗಳು ನಡುವೆ ಸರಿಯಾಗಿ ಬಿಲ್ಪಾವತಿ ಮಾಡುವ ಬಗ್ಗೆ ಬದ್ದತೆಯನ್ನು ಮಾತ್ರ ಅವರು ತೋರಲೇ ಇಲ್ಲ.
ಕರ್ನಾಟಕದ ಪುಸ್ತಕ ಮಳಿಗೆಗಳು, ಮಾರಾಟಗಾರರ ಸಮಸ್ಯೆ ಇನ್ನೂ ವಿಚಿತ್ರ. ಕೊವಿಡ್ ಮೊದಲು ನಾಕೈದು ಜನ ಬಾಕ್ಸ್ ಗಟ್ಟಲೆ ಪುಸ್ತಕ ಮಾರಾಟಕ್ಕೆ ತೆಗದುಕೊಂಡವರ ಪತ್ತೆಯೇ ಇಲ್ಲ. ಕೆಲವೊಂದು ಮಳಿಗೆಗಳು ಇವತ್ತಿಗೂ ಸಾವಿರಾರು ರುಪಾಯಿ ಬಾಕಿಯನ್ನು ಪಾವತಿಸಿಲ್ಲ, ಮೇಲ್ -ಮೆಸೇಜುಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಇನ್ನು ಸರ್ಕಾರದ ಗ್ರಂಥಾಲಯ ಇಲಾಖೆಯಂತು ಮಾತಾಡುವುದೇ ಬೇಡ. ಅಷ್ಟು ನಿರ್ಲಕ್ಷ್ಯದ ಕೊಂಪೆ! ಪುಸ್ತಕ ಪ್ರಕಟನೆ, ಮಾರಾಟ, ಪಾವತಿಗಳಲ್ಲಿ ನಮಗೆ ಬದ್ಧತೆಯೇ ಇಲ್ಲ. ಆದರೂ ನೈತಿಕತೆ ಭಾಷಣ ಮಾತ್ರ ಬಹಳ ಉದ್ದುದ್ದ!
ರಾಜೇಂದ್ರ ಪ್ರಸಾದ್, ಬರಹಗಾರ ಹಾಗೂ ಪುಸ್ತಕ ಪ್ರಕಾಶಕರು
-
Kannada Vs Hindi: ಭಾಷಾ ಶಿಕ್ಷಣ–ಸಮಸ್ಯೆ ಇರುವುದು ಫೈನ್ ಟ್ಯೂನಿಂಗ್ನಲ್ಲಿ: ರಾಜಾರಾಂ ತಲ್ಲೂರು ಬರಹ -
Vasudhendra: ಬರಹಗಾರ ವಸುಧೇಂದ್ರಗೆ ಹಿಂಗೇ ಮಾಡಿದ್ರೆ ನಿಮ್ ಪುಸ್ತಕ ಓದೋಕು ಯಾರು ಸಿಗಲ್ಲ ಎಂದ ನೆಟ್ಟಿಗರು -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Viral Post: ವಿಮಾನದ ಸೀಟುಗಳ ತುಂಬಾ ಕಸದ ರಾಶಿ: ಪ್ರಯಾಣಿಕರ 'ಸಿವಿಕ್ ಸೆನ್ಸ್' ಪ್ರಶ್ನಿಸಿದ ಮಹಿಳೆ -
Siddaramaiah: ಶಿಸ್ತು, ಪ್ರಾಮಾಣಿಕತೆ ಮತ್ತು ಮಾನವೀಯತೆ ಪೊಲೀಸ್ ಸೇವೆಯ ಆಧಾರ: ಸಿದ್ದರಾಮಯ್ಯ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ












Click it and Unblock the Notifications