ಈ ಆತ್ಮ ಹೇಡಿಯಲ್ಲ!
- ತಳಕು ಶ್ರೀನಿವಾಸ್, ಮುಂಬಯಿ
[email protected]
ಸದ್ಯಕಿರುವುದು ನನ್ನೊಳಗೆನ್ನುವುದು ಸರಿಯಾ
ಒಮ್ಮೆ ಸೇರುವುದು ದೃಢಕಾಯನ
ಇನ್ನೊಮ್ಮೆ ಶಕ್ತಿ ಇಲ್ಲದ ಕೃಶಕಾಯನ
ಎದುರಾಳಿಯ ಹಿಮ್ಮೆಟ್ಟಿಸಲು ಶಕ್ತಿ ತುಂಬುವುದು
ಕಷ್ಟ ಕೋಟಲೆಗಳ ತಾಳಲು ಧೃತಿಯನೀಯುವುದು
ಎಂದಿಗೂ ಬಗ್ಗುವುದಿಲ್ಲ ಬೆದರಿಕೆಗಳಿಗೆ
ಸಲ್ಲಿಸುವುದು ಪಾಠಗಳ ಸರಮಾಲೆ ಬಾಳಿಗೆ
ನಾ ಶಕ್ತಿ ಕುಸಿಯುತಿಹ ಕೃಶಕಾಯ
ಮನಸಿನಲೆದ್ದು ಕಾಣುವುದು ಭಯ
ಹಿಂದೆ ಬಂದು ಎಲ್ಲಿಲ್ಲದ ಸ್ಥೈರ್ಯ ತುಂಬುವುದು
ಪರಮಾತ್ಮನೊಂದಿಗೆ ಲೀನವಾಗಲು ಹಾತೊರೆವುದು
ಹೃದಯಗಳನು ತಲ್ಲಣಿಸಬಹುದು
ವರಿಸಬಹುದು ಪಲ್ಲವಿಸಬಹುದು
ಕಲ್ಲನೂ ಕರಗಿ ನೀರಾಗಿಸುವ ಶಕ್ತಿ ಹೊಂದಿಹುದು
ಇತರ ಆತ್ಮಗಳ ಸ್ಪಂದಿಸಬಹುದು
ನಿರಾಕಾರ ಸ್ವರೂಪಿ ದಿಗಂತವೂ ದಾಟಬಲ್ಲುದು
ಅನಂತವ ಅಳೆಯಬಲ್ಲ ಶಕ್ತಿ ಹೊಂದಿಹುದು
ಪ್ರೀತಿ ಪ್ರೇಮ ಕರುಣೆ ವಾತ್ಸಲ್ಯವ ಚಿಮ್ಮುಸುವುದು
ಅಧ್ಯಾತ್ಮದ ಕವಚ ಹೊದ್ದಿಹುದು
ಸಾವು ನೋವು ಅಳಿವಿನ ಭಯವಿಲ್ಲ ಇದಕೆ
ಚಿರಂತನ ಜೀವಕೆ ಜೀವವ ತುಂಬುವುದು
ಎಲ್ಲಿಲ್ಲದ ಶಕ್ತಿಯ ತುಂಬುವುದು
ಹಿಂದೆಯೇ ಕಾಣದಂತೆ ಉಡುಗಿಸುವುದು
ಕಷ್ಟ ನಷ್ಟಗಳ ಪರಿವೆಯಿಲ್ಲದುದು
ಸೂರ್ಯ ಚಂದ್ರರಷ್ಟೇ ಸತ್ಯ, ಚಿರನೂತನ
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications