ವಾಸ್ತು ಪ್ರಕಾರ ಮನೆ ನಿರ್ಮಾಣದಲ್ಲಿ ದೇವರ ಕೋಣೆ ಪ್ರತ್ಯೇಕವಾಗಿರಬೇಕಾ? ಇಲ್ಲಿದೆ ಸ್ಪಷ್ಟನೆ
ಮನೆ ನಿರ್ಮಾಣದಲ್ಲಿ ವಾಸ್ತು ಶಾಸ್ತ್ರಕ್ಕೆ ನಾವು ತುಂಬಾ ಮಹತ್ವ ನೀಡುತ್ತೇವೆ. ಆದರೆ ಇಲ್ಲಿ ಒಂದು ಸಾಮಾನ್ಯ ಪ್ರಶ್ನೆ ಹುಟ್ಟುತ್ತದೆ ಅದೆನೆಂದರೆ, ದೇವರ ಕೋಣೆ ಪ್ರತ್ಯೇಕವಾಗಿ ಮಾಡಬೇಕಾ? ಅಥವಾ ಜೊತೆಗೆ ಮಾಡಬೇಕಾ ಮತ್ತು ಮೃತರ ಫೋಟೋಗಳನ್ನು ಪೂಜಾ ಕೋಣೆಯಲ್ಲಿ ಇಡಬಹುದೇ? ಎಂಬುದಾಗಿದೆ. ಈ ಬಗ್ಗೆ ವಾಸ್ತು ತಜ್ಞರ ಅಭಿಪ್ರಾಯಗಳು ಭಿನ್ನವಾಗಿದ್ದು, ಜನರಲ್ಲಿ ಗೊಂದಲವೂ ಕೂಡ ಇದೆ.
ಸಾಮಾನ್ಯವಾಗಿ ವಾಸ್ತು ಪ್ರಕಾರ ದೇವರ ಕೋಣೆಗೆ ಈಶಾನ್ಯ ದಿಕ್ಕು (ಈಶಾನ್ಯ ಮೂಲೆಯು) ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಆದರೆ ಈ ದಿಕ್ಕಿನಲ್ಲಿ ಹೆಚ್ಚು ತೂಕ ಅಥವಾ ಭಾರವಾದ ವಸ್ತುಗಳನ್ನು ಇಡುವುದು ಸರಿಯಲ್ಲ ಎಂದು ಕೆಲ ತಜ್ಞರು ಹೇಳುತ್ತಾರೆ. ಕೆಲವರು ದೇವರ ಮೂರ್ತಿಗಳನ್ನು ಅಥವಾ ಪೋಟೊಗಳನ್ನು ಪೂರ್ವಾಭಿಮುಖವಾಗಿ ಇಡಲು ಸಲಹೆ ನೀಡುತ್ತಾರೆ, ಅಂದರೆ ನಾವು ಪೂಜೆ ಮಾಡುವಾಗ ಪೂರ್ವ ದಿಕ್ಕಿನತ್ತ ಮುಖವಾಗಿರಬೇಕು.

ದೇವರ ಕೋಣೆ ಪ್ರತ್ಯೇಕವಾಗಿದ್ದರೆ ಪ್ರಾರ್ಥನೆ ವೇಳೆ ಮನಸ್ಸು ಹೆಚ್ಚು ಏಕಾಗ್ರವಾಗುತ್ತದೆ ಎಂದು ವಾಸ್ತು ಸೂಚಿಸುತ್ತದೆ. ಆದರೆ ಸಣ್ಣ ಮನೆಗಳಲ್ಲಿ ಪ್ರತ್ಯೇಕ ಕೋಣೆ ಮಾಡಲು ಸಾಧ್ಯವಿಲ್ಲದಿದ್ದರೆ, ಸ್ವಚ್ಛವಾದ ಮತ್ತು ಶಾಂತವಾದ ಈಶಾನ್ಯ ದಿಕ್ಕಿನ ಒಂದು ಮೂಲೆಯಲ್ಲಿ ಸಣ್ಣದಾಗಿ ಪೂಜೆ ಮಾಡುವ ಕೋಣೆಯನ್ನು ನಿರ್ಮಿಸಬಹುದು.
ವಾಸ್ತು ಪ್ರಕಾರ ಇನ್ನೂ ಕೆಲವು ಪ್ರಮುಖ ನಿಯಮಗಳೂ ಇವೆ. ದೇವರ ಕೋಣೆ ಮಲಗುವ ಕೋಣೆಯ ಪಕ್ಕದಲ್ಲಿ ಇರಬಾರದು. ಅದರ ಹಿಂದಿನ ಗೋಡೆಗೆ ಸ್ನಾನಗೃಹ ಅಥವಾ ಶೌಚಾಲಯ ಇರಬಾರದು. ಹಾಗೆಯೇ ಮೆಟ್ಟಿಲುಗಳ ಕೆಳಗೆ ದೇವರ ಕೋಣೆಯನ್ನು ನಿರ್ಮಿಸುವುದರಿಂದ ವಾಸ್ತು ದೋಷ ಎಂದು ಪರಿಗಣಿಸಲಾಗುತ್ತದೆ.
ಮೃತರ ಫೋಟೋಗಳ ವಿಷಯದಲ್ಲಿ ವಾಸ್ತು ತಜ್ಞರ ಅಭಿಪ್ರಾಯಗಳು ವಿಭಿನ್ನವಾಗಿವೆ. ಕೆಲವು ಜನರು ಭಕ್ತಿ ಮತ್ತು ಗೌರವದಿಂದ ಪೂಜಾ ಕೋಣೆಯಲ್ಲೇ ಇಡುತ್ತಾರೆ. ಆದರೆ ವಾಸ್ತು ಪ್ರಕಾರ ದೇವತೆಗಳು ಮತ್ತು ಪಿತೃಗಳು ವಿಭಿನ್ನವಾಗಿದ್ದು, ಪೂಜಾ ಕೋಣೆಯಲ್ಲಿ ಮೃತರ ಫೋಟೋಗಳನ್ನು ಇಡುವುದನ್ನು ಒಳ್ಳೆಯದಲ್ಲಾ ಎಂದು ಹೇಳಲಾಗುತ್ತದೆ.
ಮೃತರ ಫೋಟೋಗಳನ್ನು ಮನೆಯ ದಕ್ಷಿಣ ಅಥವಾ ನೈಋತ್ಯ ದಿಕ್ಕಿನ ಗೋಡೆ ಮೇಲೆ ಇಡುವುದು ಸೂಕ್ತ. ಫೋಟೋಗಳು ಉತ್ತರದತ್ತ ಮುಖವಾಗಿರಬೇಕು. ಪಿತೃಗಳ ಚಿತ್ರಗಳನ್ನು ದೇವತೆಗಳ ಜೊತೆ ಅಥವಾ ಅವುಗಳಿಗಿಂತ ಎತ್ತರದಲ್ಲಿ ಇಡುವುದನ್ನು ಒಳ್ಳೆಯದಲ್ಲಾ.
ದೇವರ ಕೋಣೆಯನ್ನು ಪ್ರತ್ಯೇಕವಾಗಿ ಇಡುವುದು ಉತ್ತಮ ಆದರೂ, ಸಾಧ್ಯತೆಗಳ ಆಧಾರದ ಮೇಲೆ ಸರಿಯಾದ ದಿಕ್ಕು ಮತ್ತು ನಿಯಮಗಳನ್ನು ಪಾಲಿಸುವುದು ಮುಖ್ಯ. ಮೃತರ ಫೋಟೋಗಳನ್ನು ಪೂಜಾ ಕೋಣೆಯಲ್ಲಿ ಇಡುವುದಕ್ಕಿಂತ ಬೇರೆ ಸ್ಥಳದಲ್ಲಿ ಆಯ್ಕೆ ಮಾಡಿ ಗೌರವದಿಂದ ಇಡುವುದು ವಾಸ್ತು ದೃಷ್ಟಿಯಿಂದ ಉತ್ತಮ ಎನ್ನಲಾಗುತ್ತದೆ.
-
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
Vastu Tips for Home: ಮನೆಗೆ ಎರಡು ಮುಖ್ಯ ಪ್ರವೇಶ ದ್ವಾರಗಳು ಇರಬಹುದೇ? ವಾಸ್ತು ಹೇಳುವುದು ಏನು -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
8 ವರ್ಷ ಕೆಲಸ ಮಾಡಿದರೂ ಕ್ಷಣಾರ್ಧದಲ್ಲಿ ವಜಾ: ವೈರಲ್ ಪೋಸ್ಟ್ ನೋಡಿ ನೆಟ್ಟಿಗರು ಶಾಕ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು














Click it and Unblock the Notifications