Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು
Bengaluru vs Hyderabad: ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲೇ ಬೆಂಗಳೂರು ಸಿಲಿಕಾನ್ ವ್ಯಾಲಿ ಎಂದು ಗುರುತಿಸಿಕೊಂಡಿದೆ. ಬೆಂಗಳೂರು ಅಭಿವೃದ್ಧಿಯ ವೇಗದಲ್ಲಿ ಇರುವಾಗಲೇ ಬೆಂಗಳೂರಿಗೆ ನೆರೆಯ ಮಹಾರಾಷ್ಟ್ರದ ಮುಂಬೈ ಹಾಗೂ ತೆಲಂಗಾಣ ರಾಜ್ಯದ ಹೈದರಾಬಾದ್ನಿಂದ ತೀವ್ರ ಪೈಪೋಟಿ ಇದೆ. ಇದೀಗ ಬೆಂಗಳೂರು ನಗರವನ್ನು ಹೈದರಾಬಾದ್ ಹಿಂದಿಕ್ಕುತ್ತಿದೆ. ಭಾರತದಲ್ಲಿ ವಾಸಯೋಗ್ಯ ನಗರಗಳ ಪಟ್ಟಿಯಲ್ಲಿ ಬೆಂಗಳೂರು ನಗರವನ್ನು ಹೈದರಾಬಾದ್ ಹಿಂದಿಕ್ಕಿದೆ. ಹೈದರಾಬಾದ್ ಇದೀಗ ಭಾರತದ ವಾಸಯೋಗ್ಯ ಮೆಟ್ರೋಪಾಲಿಟನ್ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ಅಗ್ರಸ್ಥಾನಕ್ಕೇರುವುದರೊಂದಿಗೆ ಬೆಂಗಳೂರು ದ್ವೀತೀಯ ಸ್ಥಾನಪಡೆದುಕೊಳ್ಳುವಂತಾಗಿದೆ. ಬೆಂಗಳೂರು ಎರಡನೇ ಸ್ಥಾನಕ್ಕೆ ಕುಸಿಯುವುದಕ್ಕೆ ಕಾರಣವೇನು ಎನ್ನುವ ವಿವರ ಇಲ್ಲಿದೆ.
ದೇಶದ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಬೆಂಗಳೂರು ಬೆಸ್ಟ್ ಎನ್ನುವ ಆಯ್ಕೆ ಹಾಗೂ ಉತ್ತರ ದೇಶದಲ್ಲಿ ಇರುವವರು ಮಾತ್ರವಲ್ಲ. ವಿದೇಶಿಗರಿಂದಲೂ ಕೇಳಿ ಬರುತ್ತಿತ್ತು. ಇನ್ನು ಬೆಂಗಳೂರಿನ ಹವಾಮಾನ ಹಾಗೂ ಜೀವನ ಶೈಲಿ, ಉದ್ಯೋಗ ಸೇರಿದಂತೆ ಹಲವು ಕಾರಣಗಳಿಗೆ ಬೆಂಗಳೂರು ಮುಂಚೂಣಿಯಲ್ಲಿರುತ್ತಿತ್ತು. ಆದರೆ ಇದೀಗ ಬೆಂಗಳೂರಿಗೆ ಭಾರೀ ಹಿನ್ನಡೆಯಾಗಿದ್ದು, ಬೆಂಗಳೂರಿನ ಸ್ಥಾನವನ್ನು ಹೈದರಾಬಾದ್ ಕಸಿಯುತ್ತಿದೆ ಅಥವಾ ತೀವ್ರ ಪೈಪೋಟಿ ಕೊಡುವ ಮೂಲಕ ಅಗ್ರ ಸ್ಥಾನಕ್ಕೇರಿದೆ.

ದೇಶದ ಅತ್ಯಂತ ವಾಸಯೋಗ್ಯ ನಗರ ಎನ್ನುವ ಹೆಗ್ಗಳಿಕೆ ಹೈದರಾಬಾದ್ ಪಾತ್ರವಾಗಿದೆ. ಬೆಂಗಳೂರು ಮೂಲದ ಅನ್ಬಾಕ್ಸಿಂಗ್ ಬಿಎಲ್ಆರ್ ನಡೆಸಿದ 'ವೀಆರ್ಸಿಟಿ 2026' ಎನ್ನುವ ಸಂಶೋಧನಾ ವರದಿಯಲ್ಲಿ ಈ ವಿಷಯ ಬಹಿರಂಗವಾಗಿದೆ. ಅಲ್ಲದೆ ಈಚೆಗೆ ನಡೆದ ಇಂಡಿಯಾಸ್ಪೋರಾ ಗ್ಲೋಬಲ್ ಎಐ ಶೃಂಗಸಭೆಯ ಸಂದರ್ಭದಲ್ಲಿ ವಾಸಯೋಗ್ಯ ನಗರಕ್ಕೆ ಸಂಬಂಧಿಸಿದ ದತ್ತಾಂಶ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಹಲವು ವಿಷಯಗಳು ಇದೀಗ ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರನ್ನು ಹಿಂದಿಕ್ಕಿರುವ ಹೈದರಾಬಾದ್ ವಾಸಯೋಗ್ಯ ನಗರದ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.
ಹೈದರಾಬಾದ್ ನಗರವು ಬೆಂಗಳೂರನ್ನು ಹಿಂದಿಕ್ಕಿ ಭಾರತದ ಅತ್ಯಂತ ವಾಸಯೋಗ್ಯ ಮೆಟ್ರೋಪಾಲಿಟನ್ ನಗರವಾಗಿ ಹೊರಹೊಮ್ಮಿದೆ. ವಸತಿ ಮತ್ತು ವೈವಿಧ್ಯತೆಯಂತಹ ಅಂಶಗಳು ಹೈದರಾಬಾದ್ಗೆ ಶ್ರೇಯಾಂಕಗಳಲ್ಲಿ ಹಿನ್ನಡೆ ಆದರೂ ಪ್ರಯಾಣದ ಸಮಯ ಮತ್ತು ಮೂಲಸೌಕರ್ಯ ವಿಚಾರದಲ್ಲಿ ಬೆಂಗಳೂರಿಗೆ ಹಿನ್ನಡೆ ಆಗಿದೆ. ಹೀಗಾಗಿ ಬೆಂಗಳೂರು ಎರಡನೇ ಸ್ಥಾನಕ್ಕೆ ತೃಪ್ತಿಪಡುವಂತೆ ಆಗಿದೆ.
ದೇಶದ ಯಾವ ನಗರಕ್ಕೆ ಯಾವ ಸ್ಥಾನ
ನಗರ ಸೂಚ್ಯಂಕಗಳು ಎನ್ನುವ ಹೆಸರಿನ ವರದಿಯು ಎರಡೂ ನಗರಗಳಲ್ಲಿನ ಪ್ರಯಾಣ, ವೈವಿಧ್ಯತೆ, ಹೊರಹೋಗುವಿಕೆ, ವಸತಿ ಮತ್ತು ಮೂಲಸೌಕರ್ಯ ಮತ್ತು ಕೊನೆಯದಾಗಿ ಹವಾಮಾನದಂತಹ ವಿಷಯಗಳ ಮೇಲೆ ಜೀವನ ಸುಲಭತೆಯ ವಿಷಯದಲ್ಲಿ ಎಂಟು ನಗರಗಳನ್ನು ಶ್ರೇಣೀಕರಣ ಅಥವಾ ರ್ಯಾಂಕಿಂಗ್ ನೀಡಲಾಗಿದೆ. ಹೈದರಾಬಾದ್ ಒಟ್ಟಾರೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ, ನಂತರ ಬೆಂಗಳೂರು ಮತ್ತು ಕೋಲ್ಕತ್ತಾ ನಗರಗಳಿವೆ. ಅಹಮದಾಬಾದ್ ನಗರ ಕೊನೆಯ ಹಂತದಲ್ಲಿದ್ದರೆ, ಚೆನ್ನೈ, ದೆಹಲಿ ಎನ್ಸಿಆರ್, ಪುಣೆ ಮತ್ತು ಗ್ರೇಟರ್ ಮುಂಬೈ ಕ್ರಮವಾಗಿ ನಾಲ್ಕು, ಐದನೇ, ಆರನೇ ಮತ್ತು ಏಳನೇ ಸ್ಥಾನದಲ್ಲಿವೆ.
ಟ್ರಾಫಿಕ್ ಜಾಮ್ನಿಂದ ಬೆಂಗಳೂರಿಗೆ ಹಿನ್ನಡೆ
ಇನ್ನು ಬೆಂಗಳೂರಿಗೆ ಟ್ರಾಫಿಕ್ ಜಾಮ್ ಹಾಗೂ ಮೂಲಸೌಕರ್ಯದ ವಿಚಾರದಲ್ಲಿ ಹಿನ್ನಡೆ ಆಗಿದೆ. ಪ್ರಯಾಣ / ಟ್ರಾಫಿಕ್ ಜಾಮ್ ವಿಚಾರವು ಎರಡೂ ನಗರಗಳಿಗೂ ಸಮಸ್ಯೆಯಾಗಿದ್ದರೂ ಸಹ ಹೈದರಾಬಾದ್ ಹೆಚ್ಚಿನ ವಿಭಾಗಗಳಲ್ಲಿ ಹೆಚ್ಚು ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಇಲ್ಲ. ಆದಾಗ್ಯೂ, ಎರಡೂ ನಗರಗಳು ಒಂದು ನಿರ್ದಿಷ್ಟ ಮಾರ್ಗದ ದೂರವನ್ನು ಕ್ರಮಿಸಲು ಸರಾಸರಿ 58-59 ನಿಮಿಷಗಳು ತೆಗೆದುಕೊಳ್ಳುತ್ತವೆ. ಆದರೆ ಹೈದರಾಬಾದ್ ಪ್ರಯಾಣಿಕರು ಸಾಮಾನ್ಯವಾಗಿ 22 ಕಿ.ಮೀ ಕ್ರಮಿಸುತ್ತಾರೆ, ಇದು ಬೆಂಗಳೂರಿಗರು ಪ್ರಯಾಣಿಸುವುದಕ್ಕಿಂತ ಸುಮಾರು 4 ಕಿ.ಮೀ ಹೆಚ್ಚಾಗಿದೆ.
ಉತ್ತಮ ಉದ್ಯೋಗ ಅವಕಾಶಗಳು, ಟೆಕ್ ಪ್ರತಿಭೆ ಮತ್ತು ಹೊಸ ನೇಮಕಾತಿಗಳಿಂದ ಬೆಂಗಳೂರು ಕೆಲಸಗಾರರ ಲಭ್ಯತೆ ವಿಚಾರದಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ.
ಸ್ಟಾರ್ಟ್ಅಪ್ಗಳು ಮತ್ತು ದೊಡ್ಡ ಕಂಪನಿಗಳ ಕೇಂದ್ರವಾಗಿರುವುದರಿಂದ ಇದು ಉದ್ಯಮಿಗಳಿಗೆ ಹೆಚ್ಚು ಆಕರ್ಷಕವಾಗಿದೆ. ಆದರೆ, ಹೈದರಾಬಾದ್ ಕೂಡ ಹೊಸ ಕಂಪನಿಗಳು ಮತ್ತು ಉತ್ತಮ ಕಚೇರಿ ವ್ಯವಸ್ಥೆಗಳ ಮೂಲಕ ಬೆಂಗಳೂರಿಗೆ ಸ್ಪರ್ಧೆ ಕೊಡುತ್ತಿದೆ. ಆರ್ಥಿಕ ಶಕ್ತಿಯಲ್ಲಿ ದೆಹಲಿ ಎನ್ಸಿಆರ್ ಮತ್ತು ಮುಂಬೈ ಮುಂದಿದ್ದರೂ, ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಹೆಚ್ಚು ಡೇಟಾ ಸಿಗುತ್ತಿರುವುದರಿಂದ ಈಗ ನಗರಗಳ ಬಗ್ಗೆ ವಿಶೇಷ ಸೂಚ್ಯಂಕಗಳನ್ನು ಮಾಡಲಾಗುತ್ತಿದೆ.
ಇದರಿಂದ ನಗರಗಳ ಬಗ್ಗೆ ತಿಳಿಯಲು ಮತ್ತು ಖರ್ಚುಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
-
GBA: ಜಿಬಿಎ ವ್ಯಾಪ್ತಿಯಲ್ಲಿ ಪೂರ್ವ ಮುಂಗಾರು ಮಳೆಯ ಪೂರ್ವ ಸಿದ್ಧತೆಗೆ ಕ್ರಮ: ಮಹೇಶ್ವರ್ ರಾವ್ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Bengaluru: ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯ ಸಮಗ್ರ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲು ಮುಂದಾದ ಜಿಬಿಎ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ














Click it and Unblock the Notifications