ಕಲಿಯುಗ ವಚನಗಳು
- ಅ.ಮ. ಮಹೇಶ
[email protected]
ಅನ್ಯರಿಗೆ ಅಸಹ್ಯಪಟ್ಟರೂ ರೌಡಿಯಂತಿರಬೇಕು.
ತನ್ನ ಬಣ್ಣಿಸಬೇಕು, ಪರರ ನಿಂದಿಸಬೇಕು
ಇದೇ ಆತ್ಮತೃಪ್ತಿ, ಇದೇ ಪ್ರಜಾಹಿತ,
ಇದೇ ಕಲಿಯುಗ ಜೀವನದ ಒಳಗುಟ್ಟು
ಎಂದ ನಮ್ಮ ಕಲಿಮಹರಾಯ!(1)
ಠಾಕು-ಠೀಕು ಧಿರಿಸು, ಮೇಕಪ್ಪುಗಳಿಲ್ಲದ ಮುಖಹೊಲ್ಲ ನೋಡಲಾಗದು,
ಬೈಕು, ಕಾರುಗಳಿಲ್ಲದ ಪ್ರಯಾಣ ಬಲುಬೇಜಾರು, ಹೋಗಲಾಗದು,
ಠಣ ಠಣಾಂತ ರಿಂಗುಣಿಸುವ ಮೊಬೈಲುಗಳಿಲ್ಲದ ಕೈಯ
ನೋಡಲಾಗದು ಬಲು ಬೇಜಾರು.
ಟಿ.ವಿ., ಫ್ರಿಡ್ಜು, ವಾಷಿಂಗ್ಮೆಷೀನು, ಕಂಪೂಟರುಗಳಿಲ್ಲದ
ಮನೆ ಹಾಳು- ಇರಲಾರದು.
ಎಲ್ಲಾ ಸವಲತ್ತುಗಳಿದ್ದೂ ಏನೂ ಹೊಂದಿರದವ
ಈ ಕಲಿಯುಗದ ಮಹಾಪಾಪಿ ಎಂದನಾ ಕಲಿಮಹರಾಯ!(2)
ಋಣ ಸಂಬಂಧ, ಶುಭಲಗ್ನ, ರಾಶಿಕೂಟ,
ಚಂದ್ರಬಲ, ತಾರಾಬಲವೆಲ್ಲವನೂ ಬದಿಗೊತ್ತಿ
ಪ್ರೀತಿಸಿ ಮದುವೆಯಾದರೆ, ಭಿಮ್ಮನೆ ಒಪ್ಪಿಕೊಳ್ಳಿರಯ್ಯಾ.
ನಾಳಿನದಿನಕ್ಕಿಂದಿನ ದಿನ ಲೇಸೆಂದು
ಹನಿಮೂನಿಗೆ ಕಳುಹಿಸಿಕೊಡಿರಯ್ಯಾ.
ನವಮಾಸಕೆ ಮೊದಲೇ ಕಂದಮ್ಮ ಬಂದರೂ ತಟ್ಟನೆ ಅಪ್ಪಿಕೊಳ್ಳಿರಯ್ಯಾ.
ಅಡ್ಡವಿಚಾರಕಾವುದಕೂ ತಲೆಗೊಡದೆ ನಿಮ್ಮವರ ಭವಿಷ್ಯವ ರೂಪಿಸಿರಯ್ಯಾ.
ಇದೇ ಈ ಕಲಿಯುಗದ ಮಹಾತ್ಮೆ-
ಕಲಿಮಹರಾಯನ ಪೂಜಿಸುವ ಪರಿ!(3)
ಎಣ್ಣೆ ಹೊಡೆದವರ ನುಡಿಸಬಹುದು,
ಅಫೀಮು-ಗಾಂಜಾ ತಿಂದವರ ನುಡಿಸಬಹುದು
ರಾಜಕೀಯ ಖುರ್ಚಿಯ ಮೇಲೆ ಕುಳಿತವರ
ನುಡಿಸಲುಬಾರದು ನೋಡಯ್ಯಾ.
ಖುರ್ಚಿಯ ಅವಧಿ ಮುಗಿದು ಚುನಾವಣೆ ಬಂತೆಂದರೆ
ಒಡನೆ ನುಡಿವರು ’’ಪ್ರಜಾದೇವೋಭವ!’’
ಕಲಿಮಹರಾಯ.(4)
ವಿದೇಶಿ ಮದ್ಯ ಬಾಟಲುಗಳ ನಡುವೆನ್ನ
ಪಾನಮತ್ತನಾಗಿ ಮಾಡಿ ಸಲಹುತ್ತ,
ಲಲನೆಯರ ನೃತ್ಯವ ಸವಿಯುವಂತೆ ಮಾಡಯ್ಯಾ.
ಬಾರು-ಕ್ಲಬ್ಬೆಂಬ ಸ್ವರ್ಗದೊಳೆನ್ನಿಕ್ಕಿ ಸಲಹು ಕಲಿಮಹರಾಯ!(5)
ಚಾಕೂ, ಚೂರಿ, ಮಚ್ಚು, ದೊಣ್ಣೆಗಳನ್ನು ಹಿಂದಿಕ್ಕಿಕ್ಕೊಂಡು
ಒಣ ಮಾತು ಅವಾಜನ್ನು ಮುಂದಿಟ್ಟುಕೊಂಡು
ಒಣ ಸತ್ಯ-ಅಹಿಂಸೆಯೆಂದು ಮಾತು ಶುರುಮಾಡಿದರೆ
ನಮ್ಮ ಬುರುಡೆಯ ಒಡೆಯುವರಲ್ಲದೆ
ನಮ್ಮ ಬಾಳಲು ಬಿಡುವರೇ ಈ ಕಾಲದಲಿ?
ಇದಕಾಗಿ; ಮಾತೆತ್ತಿದರೆ ಮಚ್ಚು, ದೊಣ್ಣೆಗಳಿಗೆ
ಬಿಸಿರಕ್ತವ ಕುಡಿಸು ಎಂದ ನಮ್ಮ ಕಲಿಮಹರಾಯ!(6)
ನಾನು ಆರಂಭವ ಮಾಡಿದೆನಯ್ಯಾ ಹೊಟ್ಟೆಪಾಡಿಗೆಂದು,
ನಾನು ವ್ಯವಹಾರವ ಮಾಡಿದೆನಯ್ಯಾ ಅಲ್ಪ ಹಣ ಉಳಿಸಲೆಂದು,
ನಾನು ಜನಸೇವೆಯ ಮಾಡಿದೆನಯ್ಯಾ ಹೆಚ್ಚು ಹಣ ಸಂಪಾದಿಸಲೆಂದು
ಇಷ್ಟೆಲ್ಲಾ ತೆರದಿ ನಾನು ಕೈಹಾಕಿದರೂ ನಾ ಹಣದಿಂದ ವಂಚಿತನಾದೆ.
ಕಲಿಮಹರಾಯ, ನಿಮ್ಮ ಆಜ್ಞೆಯಂತೆ
ಅಡ್ಡದಾರಿಯ ಹಿಡಿದೆ ನೋಡಾ, ಹಣವೆಂಬುದು
ತುಂಬಿತುಳುಕಾಡುತಿದೆ. ಅದು ಕಪ್ಪು ಹಣವಾದರೂ
ಹಣ ಹಣವಲ್ಲವೇ? ಅದು ನಿನ್ನ ಪ್ರಸಾದವಲ್ಲವೇ? ಕಲಿಮಹರಾಯ.(7)
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications