ನೀವೇ ನಿರ್ಧರಿಸಿ...
- ತಳಕು ಶ್ರೀನಿವಾಸ್, ಮುಂಬಯಿ
[email protected]
ಹಂದಿ ನಾಯಿ ಮರಿಗಳ ಗೂಡು
ಅನಾಗರಿಕ, ಅಸಭ್ಯರ ನೆಲೆವೀಡು
ಡಾಂಬರಿನ ರಸ್ತೆಯಿಲ್ಲದ ಸುಡುಗಾಡು ... ಅಂತೆ
ಗೊಬ್ಬಳಿ ಮುಳ್ಳಿನ ಹಾಸಿಗೆಯ ಹಾದಿ
ಸಿಡುಬಿನ ಕಲೆಯ ಹರಳೆಣ್ಣೆಯ ಮುಖ
ತಾಯ ಭಾಷೆ ಬಿಟ್ಟಿನ್ನಾವದನ್ನೂ ಅರಿಯದ ಜನ
ಮೋಸ ತಟವಟ ವಂಚನೆ ತಿಳಿಯದ ಮನ ... ಅಂತೆ
ಊರಿಗೊಂದೇ ಅಡುಗೆ ಮನೆ, ಉರುವಲೊಲೆ
ಸಹಬಾಳ್ವೆ ಸಮನ್ವಯವೇ ಜೀವನದ ಮಂತ್ರ
ಜಾತಿ ಮತ ಭೇದವನರಿಯದ ಅಣ್ಣ ತಮ್ಮಂದಿರು
ಕೋರ್ಟು ಕಛೇರಿ ಜಗಳ ಕದನವರಿಯದ ನನ್ನವರು
ಮುದ್ದೆ ತಿನುವ ಮುಗ್ಧರು
ನಾಗರಿಕತೆಗೆ ಕನ್ನಡಿ ಇವರೂರು
ಪೌಡರ್ ಸ್ನೋ ಬಣ್ಣ ಹಚ್ಚಿದ ಮುಖದವರು
ಎಲ್ಲೆಲ್ಲೂ ರಾಜ ಬೀದಿ, ಸಿಮೆಂಟಿನ ನೆಲ
ನಾಗರಿಕತೆಯ ಕಲಿಸುವ ಪಾಠಶಾಲೆ ...
ಪರಕೀಯ ಭಾಷೆಯ ನಿರರ್ಗಳ ಭಾಷಿಸಬಲ್ಲವರು
ಕಾಗೆ ಗುಬ್ಬಚ್ಚಿ ಪಶುಗಳ ಕಾಣದವರು
ಚಂದ್ರಮನ ನೆಲೆಯಂತೆ ತಣ್ಣಗಿರುವ ಊರು
ಆಡದೆಲೆ ನೋಡದೆಲೆ ಒಬ್ಬರಿಗೊಬ್ಬರು
ಕತ್ತಿಯ ಮಸೆಯುವರು
ಬೆಡಗು ಬಿನ್ನಾಣ ಅಂದ ಚಂದಗಳ ತವರೂರು
ದೂರಕೆ ಕಾಣುವರು ನುಣ್ಣನೆಯ ಮನದವರು
ಒಬ್ಬರಿಲ್ಲದೇ ಇನ್ನೊಬ್ಬರಿರಲಾಗದ ಪರಾವಲಂಬಿಗಳು
ಅಣ್ಣ ತಮ್ಮ ಅಪ್ಪ ಅಮ್ಮ ಪ್ರತ್ಯೇಕವಿರುವ
ಏಕಾಣು ಜೀವಿಗಳು
ಸಣ್ಣಕ್ಕಿ ಅನ್ನ ತಿನ್ನುವ ನಯವಂಚಕರು
ನೀವೇ ಹೇಳಿ ...
ನನ್ನೂರು ಚಂದವೋ ಅವರೂರು ಚಂದವೋ...
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications