ಇಳೆಯ ಒಡಲಿಂದಲೆ ಪನ್ನೀರ ಕದಿಯುವ ಬಂಟ!
- ಮಂಜುಳಾ ಬಬಲಾದಿ
[email protected]
ಬಹು ಬಳಲಿಹಳು ಇಳೆ
ಕಳೆದುಕೊಂಡಿಹಳು ಲವಲವಿಕೆಯ ಸೆಲೆ
ಬಯಸಿಹಳು ಪ್ರಫುಲ್ಲತೆಯ ಹೊಸದೊಂದು ಕಳೆ
ತನ್ನಲಿ ಹೊಸ ಜೀವ ತುಂಬುವ
ಆ ನಲ್ಲನ ಸವಿ ಸ್ಪರ್ಶಕೆ...
ಬಲು ಕಾತರದಿ ಕಾದಿದ್ದಾಳೆ...
ಆದರೆ ಆ ನಲ್ಲನೋ ಬಲು ತುಂಟ
ಇಳೆಯ ಒಡಲಿಂದಲೆ ಪನ್ನೀರ ಕದಿಯುವ ಬಂಟ
ಕಾರ್ಮೋಡಗಳ ಜೊತೆಗೂಡಿ ಆಡುವ
ಇಳೆಯೊಂದಿಗೆ ಕಣ್ಣಾ ಮುಚ್ಚಾಲೆಯಾಟ...
ಹೆಚ್ಚಿಸುವ ಅವಳ ಮನದ
ವಿರಹ ಸಂಕಟ...
ಅಮೃತ ಘಳಿಗೆಯಲಿ
ಧರೆ- ಗಗನಗಳ ಮಿಲನ...
ಆತ್ಮೀಯ ಆಲಿಂಗನ
ನೀಡುತ್ತ ದಣಿದ ಧರಣಿಗೆ ಸಾಂತ್ವನ
ಗಗನರಾಯ ನೀಡುವನು ನಲ್ಲೆಗೆ...
ಸವಿ-ಸ್ಪರ್ಶದ ಸಿಂಚನ...
ಧರಣಿಯಲ್ಲಿ ರೋಮಾಂಚನ..
ಸಾಂಕೇತಿಕವಗಿ,
ಭುವಿಯಿಂದ ಹೊರ ಹೊಮ್ಮುವುದು ಸುವಾಸನ...
ಎಲ್ಲೆಲ್ಲೊ ಎದ್ದು ಕಣುವುದು ಹೊಸದೊಂದು ಚೈತನ್ಯ..
ಹಸಿರಿನಿಂದ ನಳ-ನಳಿಸುವವು ಗಿರಿ- ಕಾನನ!
ಆರಂಭವಿನ್ನು ನವ-ಜೀವನ..
ಮೊದಲ ಮಳೆಯು
ಒಂದು ಸವಿ ಪ್ರೇಮ ಕಥನ!!...
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications