ಸ್ವಾತಂತ್ರ್ಯವೆಂದರೆ ಇದೇನಾ?
;?
- ಅಂಜಲಿ ರಾಮಣ್ಣ, ಬೆಂಗಳೂರು
[email protected]
ದಿಲ್ಲಿಯಿಂದ ಗಲ್ಲಿ ಗಲ್ಲಿಯವರೆಗೂ ಏರ್ಪಟ್ಟಿತ್ತು ವಿಚಾರ ಸಂಕಿರಣ
ವೇದಿಕೆಯ ಮೇಲೆ ನೆರೆದಿದ್ದವರು ಎಲ್ಲರೂ ಪದ್ಮಶ್ರೀ ಪದ್ಮ ವಿಭೂಷಣ
ಫಲಕದಲ್ಲಿ ಬರದಿತ್ತು ಐದು ವರ್ಷಗಳ ಸಾಧನೆ ಒಂದು ಸಂಶೋಧನೆ
ಕೇಳಬೇಕೆ ಬುದ್ಧಿಜೀವಿಗಳ ಚರ್ಚೆ ಬೋಧನೆ?
ಛೆ! ಇರುವುದನ್ನೆಲ್ಲಾ ಮರೆತು ಇಲ್ಲದ್ದನ್ನು ನೆನೆವರು ಇವರು ಏಕೆ?
ನಮ್ಮ ವರ್ತಮಾನಕ್ಕಿಂತ ಇವರಿಗೆ ಸಾಧನೆ ಬೇಕೆ?
ಅಂದೆಂದೋ ಇದ್ದರಂತೆ ಗಾಂಧಿ ನೆಹರುಗಳು, ಲಜಪತ್ ರಾಯ್ ವಲ್ಲಭಭಾಯ್ಗಳು
ಇಂದೂ ತಾನೆ ಇಲ್ಲವೇ
ಒಂದಂಕಿ ಲಾಟರಿಗಳು ಸ್ಯಾಷೆ ಸಾರಾಯಿಗಳು
ಹಿಂಡಿ ಬೂಸ ಮೇಯುವ ಲಾಲು-ಲಲ್ಲುಗಳು
ದೇಶಕ್ಕಾಗಿ ಪ್ರಾಣತೆತ್ತರಂತೆ ಅಂದು ಜಲಿಯನ್ವಾಲ ಭಾಗಿನಲ್ಲಿ
ನಾವೂ ಉಸಿರುಗಟ್ಟಿಸಲ್ಲಿಲ್ಲವೇ ನಮ್ಮವರನ್ನೇ ಇಂದು
ಭೂಪಾಲ್ ಅನಿಲ ದುರಂತದಲ್ಲಿ
ಭಾರತಾಂಬೆಯ ಹೆಮ್ಮೆಯ ಪುತ್ರರಂತೆ
ನೂರಾರು ಭಗತ್ಸಿಂಗರು, ಸಾವಿರಾರು ಸುಭಾಷ್ಚಂದ್ರರು,
ಇದೇ ಭಾರತಿ ಹೊತ್ತ ಕೂಸುಗಳಲ್ಲವೇ ಈಗಿನ
ಲಕ್ಷಾಂತರ ಹವಾಲಗಳು ಕೋಟ್ಯಾಂತರ ಹರ್ಷದರು...
ಅಂದು ಜನಮನದ ಆರಾಧನೆ
ಬಾಲ ಗಂಗಾಧರ ತಿಲಕರಿಗೆ, ಸರಸ್ವತಿ ದಯಾನಂದರಿಗೆ,
ಇಂದು ನಮ್ಮ ತನು ಧನದ ಸಮಾರಾಧನೆ
ಸ್ವಾಮಿಗಳ ಸ್ವಾಮಿ ಚಂದ್ರಾಸ್ವಾಮಿಗೆ - ತಂತ್ರಿ ಕುತಂತ್ರಿ ಪ್ರೇಮಾನಂದರಿಗೆ...
ಮನೆ ಮಂದಿಗೆಲ್ಲ ಅಂದು ದೇಶ ಪ್ರೇಮ
ಪರಹಿತ ಪರಿಸರ ಪ್ರೇಮ;
ಇದ್ದರೂ UNO-WHOಗಳೊಡನೆ ಒಡನಾಟ
ಆಡಿಸಲ್ಲಿಲ್ಲವೇ ನಾವು ಸೂರತ್ತಿನ ತುಂಬಾ ಪ್ಲೇಗಿನಾಟ...
ಜನ ಸೇವೆಯೇ ಜನಾರ್ಧನ ಸೇವೆ ಎಂದರಂತೆ
ಸರೋಜಿನಿ ಬಾಯಿ ಕಸ್ತೂರಿ...
ಜನರೇ? ಯಾರವರು ಎಂದ ಜಯಲಲಿತ
ಬಾರಿಸಲ್ಲಿಲ್ಲವೇ ನಾಣ್ಯದ ನಗಾರಿ...
ಮುಟ್ಟಿಲ್ಲವೇ ನಮ್ಮ ಜನ ಸಂಖ್ಯೆಯಲ್ಲಿ
ಒಂದಲ್ಲ ಎರಡಲ್ಲ 99 ಕೋಟಿ
ನಡು ನಡುವೆ ನರಳುತ್ತಿಲ್ಲವೇ ಇಂದೂ
ಈಗಲೂ ಹಲವಾರು ಅರ್ಚನ ಅಂಬಟ್ಟಿ
ತುರ್ತು ಪರಿಸ್ಥಿಯಿಂದ ಪ್ರಸ್ತುತ ಸ್ಥಿತಿಯವರೆಗೂ
ಇನ್ನೂ ಬೆಳೆದಿದೆ ನಮ್ಮ ಸಾಧನಾ ಪಟ್ಟಿ...
ಕೇಳಲು ಮಾಡಿಕೊಳ್ಳಬೇಕಷ್ಟೇ
ನಾವು ನೀವು ಹೃದಯ ಗಟ್ಟಿ...
ವೇದಿಕೆಯಲ್ಲಿನ ವಿಚಾರವಂತರೇ ನೀಡುವಿರಾ
ಸಾಧನೆಗೆ ಒಂದು ಹೊಸ ಪರಿಕಲ್ಪನೆ...
ತುಂಬುವಿರಾ ಈ ನರಸತ್ತವರಲ್ಲಿ
ಸ್ವಾತಂತ್ತ್ರ್ಯದ ಸುಂದರ ಕಲ್ಪನೆ...
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications