ಅಪ್ಪ, ನಾ ನಿಮ್ಮ ಮರೆಯಲಾದೀತೇ
- ತಳಕು ಶ್ರೀನಿವಾಸ್, ಮುಂಬಯಿ
[email protected]
ಅಂದು ಅಪ್ಪ ಎಂದು ಕರೆಸಿಕೊಂಡ ಜೀವ
ಈ ಪುಟ್ಟ ಗಿಡವ ಮರವಾಗಿಸಿ
ಮನದಿ ತುಂಬಿಸಿದಿರಿ ಸ್ಪಂದಿಸುವ ಭಾವ
ನಿಮ್ಮ ಪಾದಗಳ ನೋಡಿ ನಡಿಗೆ ಕಲಿತೆ
ನಿಮ್ಮ ಮಾತುಗಳ ಕೇಳಿ ನುಡಿಯ ಕಲಿತೆ
ನಿಮ್ಮ ಹೆಜ್ಜೆಯಲಿ ಹೆಜ್ಜೆ ಇಡುವುದ ಕಲಿತೆ
ನಿಮ್ಮ ದಿಗ್ದರ್ಶನದಲಿ ಬಾಳುವೆ ಕಲಿತೆ
ಏಟನಿತ್ತು ತುಂಟುತನವ ಬಿಡಿಸಿದಿರಿ
ದು:ಖ ಉಮ್ಮಳಿಸೆ ತಲೆಯ ನೇವರಿಸಿದಿರಿ
ವಿದ್ಯೆ ಬುದ್ಧಿ ಕಲಿಸಿ ಕಾಲ ಮೇಲೆ ನಿಲಿಸಿದಿರಿ
ಸ್ನೇಹಿತನಾಗಿ ಸಮಾಜದಿ ಬೆರೆಯಲು ಕಲಿಸಿದಿರಿ
ಕೋಪದಲಿ ಇತ್ತ ಬೆತ್ತದ ಗಾಯ
ಕೈ ಮೈ ಸವರಲು ಮಾಸಿತು
ಮರಳಿ ಬರಲಾರದ ಆ ಜೀವ
ಮನದ ಗಾಯ ಹೇಗೆ ಮಾಸೀತು
ಇಂದು ನಾನಿರುವೆ ನಿಮ್ಮ ಸ್ಥಾನದಲಿ
ಅಂದಿನ ನನ್ನನು ಕಾಣುತಿಹೆ ಮಗನಲಿ
ಅವಗೆ ನಾ ಕಲಿಸುವೆ ನೀವು ಕಲಿಸಿದ ಪಾಠ
ಶ್ರದ್ಧೆಯಿಂದ ನಿಮಗೆ ಒಪ್ಪಿಸುತಿಹೆ ಮನೆ ಪಾಠ
ಈಗಲೂ ನೀವು ಬರಲು ನಾ ಕೂಸಾಗುವೆ
ಕೂಸುಮರಿ ಆಡಲು ನಿಮ್ಮ ಹೆಗಲೇರುವೆ
ತೀರಿಸಲಾರದ ಪಿತೃ ಋಣವ ತೀರಿಸುವೆ
ಬಾರದಿರೆ ಕೊರಗಿ ಕೊರಗಿ ಸೊರಗುವೆ
ಸುರಿಸಲಾರೆ ನಾ ಕಂಬನಿಯ ಧಾರೆ
ನೆನಪಲಿ ಮನವು ಸುರಿಸುತಿದೆ ವರ್ಷಾಧಾರೆ
ಪಿತೃ ಋಣವ ಅರ್ಪಿಸದೆ ನಾ ಹೇಗಿರಲಿ
ಅದಕಾಗಿ ನನ್ನ ಈ ಪುಟ್ಟ ಶ್ರದ್ಧಾಂಜಲಿ
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications