ಆಗದಿರಲಿ ಹೊಸ ವರುಷ ಹಳೆ ವರುಷ
- ತಳಕು ಶ್ರೀನಿವಾಸ್, ಮುಂಬಯಿ.
[email protected]
ಹುಟ್ಟುವಾಗಲೇ ಹರುಷ
ತರುವ ಸಂಕೇತ ತೋರಹತ್ತಿತ್ತು
ವಿಪರ್ಯಾಸವೆಂದರೆ ಕೊಟ್ಟದ್ದರಲ್ಲಿ
ಸಂತಸಕ್ಕಿಂತ ಹೆಚ್ಚಿನ ವಿರಸ
ಅತ್ತು ಕರೆದು ದಣಿದು
ಮನತಣಿಸಿತು - ಇನ್ನೇನು ಸತ್ತಿತು
ರಾಜಕೀಯ ದಳ್ಳುರಿ,
ಅಕ್ಕ ಪಕ್ಕದ ಮನೆಯವರೊಡನೆ ವೈಮನಸ್ಯ
ಪಕ್ಕದ ಮನೆಯ ಹುಡುಗರಿಗೆ
ನಮ್ಮ ಹುಡುಗರಿಂದ ಹೊಡೆತ
ಅವರಿಂದ ಮರುಹೊಡೆತದ ಬೆದರಿಕೆ
ಎಂದು ಕೊನೆಯಾಗುವುದೀ ಮಕ್ಕಳಾಟ
ದಿನ ಎದುರಿಸಿವುದೊಂದು ಪ್ರಾಣ ಸಂಕಟ
ನಾಳೆ ಸಾಯುತಿದೆ ಹಳೆ ವರುಷ
ಅಲ್ಲಿ ನೋಡಲಿ ಒಬ್ಬನ ಗದ್ದಲ
ಇಲ್ಲಿ ನೋಡಲಿ ಇನ್ನೊಬ್ಬನ ಮುನಿಸು
ಎಂದಿಗೂ ಕನಸಾಗಿಯೆ ಉಳಿದ ನಮ್ಮ ಕನಸು
ಮಧ್ಯೆ ಪಕ್ಕದ ಮನೆಗೆ ಹೋಗಿರುವ
ಪರಮಾತ್ಮನಾಡಿಸುತಿಹ ಆಟ
ಕೆಲಸ ಕಾರ್ಯವಿಲ್ಲದೇ ಕಾಲ ಕಳೆಯುತಿಹ
ವಿರೋಧಿಗಳು ಆಡಿಸುವ ಬುಗುರಿಯಾಟ
ಹೆಚ್ಚುತಿದೆ ಅಮ್ಮನ ಬಡತನವೆಂಬ ಅನಾರೋಗ್ಯ
ಅತ್ತ ಮಣ್ಣಿಗಾಗಿ ಪಕ್ಕದ
ಮನೆಯವರೊಂದಿಗೆ ನಿರಂತರ ಹೊಡೆದಾಟ
ನಿಸರ್ಗದತ್ತ ನೀರಿಗಾಗಿ
ಬೀದಿ ನಲ್ಲಿಯ ಪಕ್ಕ ಬಡಿದಾಟ
ನಿಸರ್ಗ ಆಗದಿಂದು ಚಿರಂಜೀವಿ
ಜಗಳ ಬಡಿದಾಟ ಹೊಡೆದಾಟ ಚಿರಂತನ
ದಿನಂಪ್ರತಿ ಹೊಡೆದಾಟ ಬಡಿದಾಟ
ರಕ್ತಪಾತ, ದರೋಡೆ, ಕಳ್ಳತನ
ಕೊಲೆ ಸುಲಿಗೆ ಇವುಗಳದ್ದೇ ವರದಿ
ಶಾಂತಿಯ ಮಾತುಗಳಿಗಿಲ್ಲ ಸರದಿ
ಮಧ್ಯೆ ಸಿಲುಕಿ ನಲುಗಿ ಹೋಗುತಿಹ ಅಮ್ಮ
ಇತ್ತ ಹಿರಿ ಕಿರಿಯ ಮಕ್ಕಳಲ್ಲಿ ವೈಮನಸ್ಯ
ನಿರ್ವಿಚಾರದ ವೈಚಿತ್ರ್ಯ
ಒಂದೇ ಮನೆಗೆ ಬೇಕಂತೆ ಎರಡು ಅಡುಗೆ ಕೋಣೆ
ಕಟ್ಟ ಬೇಕಂತೆ ಮಧ್ಯೆ ಗೋಡೆ
ಅದಕಾಗಿ ಮೇಲ್ಮಕ್ಕಳ ಜಗಳ
ಹತಾಶಳಾಗಿಹ ಅಮ್ಮನ ಕಳವಳ
ಹರಿದು ಹಂಚಿಹೋಗುತಿಹುದವಳ ಸೀರೆ
ಯಾರಿಗೆ ಇದೆ ಅವಳ ಮಾನದ ಪರಿವೆ
ಬ್ರಾಹ್ಮಣರ ಸಂಪ್ರದಾಯದಂತೆ
ಶ್ರಾದ್ಧ ಬಯಸದ ವರುಷ
ಬೂದಿಯಿಂದೆದ್ದು ಬರುವ ಫೀನಿಕ್ಸಿನಂತೆ
ನಾಳೆ ಮರು ಹುಟ್ಟುವುದು ಇನ್ನೊಂದು ವರುಷ
ಮನ ಆಶಿಸುವುದು ಸಂತಸ
ಹೊಸ ಚಿಣ್ಣನಾದರೂ ತರಲಿ
ಎಲ್ಲರ ಮನೆ ಮನಕೂ ಸಂತಸ ಸಮೃದ್ಧಿ
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications