ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಡಿನ ಸ್ಥಿತಿ

By Staff
|
Google Oneindia Kannada News
ಹಕ್ಕಬುಕ್ಕರು ಸ್ಥಾಪಿಸಿದ ಕನ್ನಡ ನಾಡು
ಕುಲ ಪುರೋಹಿತರ ಕನಸಿನ ಬೀಡು
ಹೆಮ್ಮೆಯ ವಿಜಯನಗರದ ದ್ಯೋತಕ
ಅಂದು ಆಗಿದ್ದ ವಿಶಾಲ ಕರ್ನಾಟಕ

ಹೊಯ್ಸಳ ಬೆಳೆಸಿದ ಬೇಲೂರು
ಅರಸರಾಳಿದ ಮೆಚ್ಚಿನ ಮೈಸೂರು
ಹೊಸೂರು ಕಾಸರಕೋಡುಗಳ ತವರು
ಸೋಲಾಪುರ ಆದೋನಿಗಳು ಪ್ರಿಯರು

ಕೋಲಾರ ಹಟ್ಟಿಗಳ ಚಿನ್ನದ ಗಣಿಯು
ಕಾವೇರಿ ತುಂಗೆ ಕೃಷ್ಣೆಯರ ಖನಿಯು
ಹುಬ್ಬಳ್ಳಿ ಮೈಸೂರು ಸಂಸ್ಕೃತಿಯ ಸೊಗಡು
ಎಂದೆಂದಿಗೂ ಆಗದು ಈ ನಾಡು ಬರಡು

ಇಂದು ಹರಿದು ಹಂಚಿರುವ ದೇಶವೀ ಕೊಂಪೆ
ಅಗೋ ನೋಡು ಒಮ್ಮೆ ಮೆರೆದ ಹಾಳು ಹಂಪೆ
ಇನ್ನು ಅಳಿದುಳಿದಿರುವುದು ಚೂರು ಪಾರು
ಅದಕ್ಕಾಗಿಯಾದರೂ ಹರಿಸೋಣ ನಮ್ಮ ಬೆವರು

ಉದರ ಪೋಷಣೆಗೆಂದು ಬರುತಿಹರು ಇತರರು
ಚಿಗುರಿದೊಡನೇ ನಡೆಸುವರು ನಮ್ಮ ಮೇಲೆ ಕಾರುಬಾರು
ಪರರ ಕೈಗೆ ಕೊಡಲು ಬೇಡ ಉಳಿದಿರುವುದು
ಸೆರಗೊಳಗೆ ಕಟ್ಟಿದ ಕೆಂಡ ನಮ್ಮನ್ನೇ ಸುಡುವುದು

ಹಿರಿಯರು ಕಟ್ಟಿದ ನಾಡು ಪರರ ಪಾಲಾಗುವುದು ಸರಿಯೇ
ನಮ್ಮ ಪಾಲಿಗೆ ಎಂದಿಗೂ ಇರುವನು ಶ್ರೀ ಹರಿಯೇ
ದೇಶದ ಉಳಿವಿಗಾಗಿ ನಾವಿಂದು ತೊಡೋಣ ಪಣ
ಅದಕ್ಕಾಗಿ ಹೋರಾಡುವವರ ಕೈ ಜೋಡಿಸೋಣ

ಗತ ವೈಭವದ ಗುಂಗಲೇ ಇನ್ನೂ ಕಾಲ ಕಳೆಯುವುದು ಬೇಡ
ನಾವೆಲ್ಲಾ ಸೇರಿ ಒಂದಾಗಿರಲು ಯಾರೂ ತೊಂದರೆ ಕೊಡ
ವಿಶಾಲ ಕರ್ನಾಟಕದ ಭೂಪಟ ವಿಸ್ತರಿಸೋಣ
ಅದಾಗಲಿ ನಮ್ಮ ಮುಖ್ಯ ಧ್ಯೇಯ ಓ ಜಾಣ


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X