ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿ

By Staff
|
Google Oneindia Kannada News
ಬರಲಿ ಬರಲಿ ತರಲಿ
ಶುಭವನು ಹಿಂತಿರುಗಿ
ಮಂದಿರ ಮನೆಮನಮಠಗಳಲಿ
ನಂದಾದೀವಿಗೆ ಬೆಳಗಿಸಲಿ
ರೈತನ ಕಣಜವ ತುಂಬಿಸಲಿ

ವರುಣನಿಗೆ ವಂದಿಸುವ ಕೊರುವ
ಮನ್ನಿಸೆಂದು ನಮ್ಮ ಪಾಪವ
ಯಾರೋ ಮಾಡಿದ ಪಾಪ ಇನ್ನಾರಿಗೊ ಶಾಪ
ಧೋ ಎಂದು ಸುರಿವ ಮಳೆಗೆ
ತೊಳೆಯಲಿ ಕಳೆಯಲಿ ಮಾಡಿದ ಪಾಪ

ಮನೆಗಳಲಿ ನಿಂತ ನೀರು ಇಂಗಲಿ
ಮನಮನಗಳಲ್ಲಿ ಭಕ್ತಿಭಾವ ತುಂಬಲಿ
ಮನ್ನಿಸಲಿ ಎಲ್ಲರ ನೋಡಲಾಗದು ದುಃಖವ
ಅತಿವೃಷ್ಟಿ ಅಸಮಾನತೆ ಸಮವರ್ತಿಯಾಗಲಿ
ತಮ್ಮತಮ್ಮ ನೆಲ ಹೊಲ ಮರಳಿ ಪಡೆಯಲಿ

ಬಂಧು ಕಳೆದುಕೊಂಡ ಜೀವಕ್ಕೆ ಸಾಂತ್ವನ ಸಿಗಲಿ
ದುಃಖದ ನೋವು ಬೇಗ ಮಾಯಲಿ
ರೋಗರುಜಿನಗಳು ಬಾರದಿರಲಿ
ಹಸನಾಗಲಿ ಕಳವಳ ತಣಿಯಲಿ ತಳಮಳ
ಚಿಗುರಲಿ ಭರವಸೆ ಎಲ್ಲರ ಬಾಳಲಿ

ಇದಕ್ಕಿಂತ ಹೆಚ್ಹೇನನು ಹರಸುವುದು
ಬರಲಿ ಬರಲಿ ತರಲಿ
ಶುಭವನು ಹಿಂತಿರುಗಿ
ಮಂದಿರ ಮನೆಮನಮಠಗಳಲಿ
ನಂದಾದೀವಿಗೆ ಬೆಳಗಿಸಲಿ


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X