ಅವಳು ಅವನು
- ತಳಕು ಶ್ರೀನಿವಾಸ್, ಮುಂಬಯಿ
[email protected]
ಒಬ್ಬರ ಕೈಯನ್ನೊಬ್ಬರು ಬಿಡಲಾರದಂತೆ ಹಿಡಿದಿಹರು
ಮುದುಕ ತರುಣ ಕೂಸು ಎಲ್ಲರ ಕಣ್ಣೂ ಅವರ ಮೇಲೇ
ನಾನೂ ಕುತೂಹಲದಿ ನೋಡಿದೆ ಏನಿವರ ಲೀಲೆ
ಬೆನ್ನ ಮೇಲೆ ಹರಡಿಹ ನೀಳ ಗಾಢ ಕಪ್ಪು ಕೇಶ
ನೋಡುಗರೆಲ್ಲರನೂ ಹಿಡಿದಿಡುವಂತಹ ಪಾಶ
ಮಲ್ಲಿಗೆಯ ಚಿಗುರೆಲೆಯಂತಹ ಮೋಹಕ ಮುಂಗುರುಳು
ಅಗಲವಾದ ಹಣೆಯ ಮೇಲೆ ಮುತ್ತಿಕ್ಕುತಿರಲು
ನಾಸಿಕವಂತೂ ಕೆಂಪನೆಯ ಗೇರು ಹಣ್ಣು
ನೋಡಿದರೆ ಮತ್ತೆ ನೋಡಬಯಸುವ ಅವಳನ್ನು
ಒಪ್ಪವಾಗಿ ಉಟ್ಟಿಹಳು ನೀಳ ನೆರಿಗೆಯ ಸೀರೆ
ದೃಷ್ಟಿ ತಟ್ಟದಂತೆ ಸುಲೋಚನ ಏರಿಸಿಹ ನೀರೆ
ಅವನಾದರೋ ಮನ್ಮಥನಪರಾವತಾರ
ದಷ್ಟ ಪುಷ್ಟ ಬಾಹುಗಳ ಎತ್ತರದ ವೀರ
ತಲೆಯ ತುಂಬಾ ದಟ್ಟನೆಯ ಕಪ್ಪು ಕುರುಳು
ಮ್ಮೆನುವ ಸುಗಂಧ ಸೂಸುತಿಹುದು ಹತ್ತಿರ ಬರಲು
ಅವಳಿಗೆ ಹೇಳಿ ಮಾಡಿಸಿದಂತಹ ಅವನ ಜೋಡಿ
ಎಲ್ಲ ತರುಣಿಯರಿಗೂ ಮಾಡುವನೇನೋ ಮೋಡಿ
ಆದರೂ ಅವನಾರನ್ನೂ ನೋಡದೇ ದಿಟ್ಟಿಸುತಿಹ ದಿಗಂತ
ಕಣ್ಣಿಗೆ ಏರಿಸಿಹ ಕಪ್ಪು ಸುಲೋಚನವ ಈ ಮನ್ಮಥ
ಇವರ ನೋಡುತಿಹ ಎಲ್ಲರ ಮನದಲೂ ಹತ್ತಿಹುದು ಕಿಚ್ಚು
ನಿಲ್ದಾಣ ಬಂದೊಡೆ ಅವರುಗಳಿಳಿದಾಗ ಆದರಿವರು ಪೆಚ್ಚು
ಒಬ್ಬರ ಕೈಯನ್ನೊಬ್ಬರು ಬಿಡಲಾರದಂತೆ ಹಿಡಿದಿರಲು
ಅವರಿಬ್ಬರ ಕೈಯಲ್ಲೂ ಇತ್ತು ಬಿಳಿ ಕೋಲು
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications